ವೀಳ್ಯದೆಲೆ ಜೀರ್ಣಕ್ರಿಯೆ ಸುಧಾರಿಸುತ್ತದೆ, ಬಾಯಿಯ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಇದೇ ವೀಳ್ಯದೆಲೆ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದೇ? ಸಾಧಾ ಪಾನ್ ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ಇದರ ಜೊತೆ ಇನ್ನಿತರ ವಸ್ತುಗಳು ಬೆರೆತಾಗ ಕ್ಯಾನ್ಸರ್ ಖಚಿತಾ.
ಅನೇಕರು ಹವ್ಯಾಸಕ್ಕಾಗಿ ಪಾನ್ ತಿನ್ನುತ್ತಾರೆ. ಇನ್ನೂ ಕೆಲವರಿಗೆ ಅದು ದಿನನಿತ್ಯದ ಅಭ್ಯಾಸವಾಗಿದೆ. ವೀಳ್ಯದ ಎಲೆ ಆರೋಗ್ಯಕ್ಕೆ ಕೆಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದೇ ಈ ವೀಳ್ಯದ ಎಲೆಗೆ ಕೆಲವು ಪದಾರ್ಥಗಳನ್ನು ಸೇರಿಸಿದಾಗ ಅದು ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡಬಹುದು. ಅಷ್ಟೇ ಅಲ್ಲ, ಬಾಯಿಯ ಕ್ಯಾನ್ಸರ್ನಂತಹ ಜೀವಕ್ಕೆ ಅಪಾಯಕಾರಿ ಕಾಯಿಲೆಗೂ ಕಾರಣವಾಗಬಹುದು. ಆದ್ದರಿಂದ ಪಾನ್ ಸೇವಿಸುವಾಗ ಕೆಲವು ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯ.
26
ಆರೋಗ್ಯಕರ ವೀಳ್ಯದೆಲೆ ಹೇಗೆ ಅಪಾಯಕಾರಿ ಆಗುತ್ತದೆ?
ಕೇವಲ ವೀಳ್ಯದೆಲೆಯನ್ನು ಮಾತ್ರ ಸೇವಿಸಿದರೆ ಸಾಮಾನ್ಯವಾಗಿ ಕ್ಯಾನ್ಸರ್ ಅಪಾಯ ಅತ್ಯಂತ ಕಡಿಮೆ. ಆದರೆ ಅದರಲ್ಲಿ ತಂಬಾಕು, ಅಡಿಕೆ, ಗುಟ್ಕಾ, ಸುಣ್ಣ ಹಾಗೂ ತಂಬಾಕು ಮಿಶ್ರಿತ ಮಸಾಲೆಗಳನ್ನು ಸೇರಿಸಿದಾಗ ಅದು ಆರೋಗ್ಯಕ್ಕೆ ದೊಡ್ಡ ಅಪಾಯವಾಗುತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ, ತಂಬಾಕು ಬಾಯಿಯ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದಕ್ಕೆ ಸುಪಾರಿ ಮತ್ತು ಸುಣ್ಣ ಸೇರಿಕೊಂಡಾಗ ಬಾಯಿಯ ಒಳಭಾಗಕ್ಕೆ ಆಗುವ ಹಾನಿ ಇನ್ನಷ್ಟು ಹೆಚ್ಚಾಗುತ್ತದೆ.
36
ತಂಬಾಕು ಮತ್ತು ಸುಣ್ಣ ದೇಹಕ್ಕೆ ಹೇಗೆ ಹಾನಿ ಮಾಡುತ್ತವೆ?
ತಂಬಾಕಿನಲ್ಲಿ ನಿಕೋಟಿನ್ ಎಂಬ ರಾಸಾಯನಿಕವಿದ್ದು, ಅದು ಕೆಲವೇ ಕ್ಷಣಗಳಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬೇಗನೆ ವ್ಯಸನ ಉಂಟಾಗುತ್ತದೆ. ನಿಕೋಟಿನ್ ಮೆದುಳಿನಲ್ಲಿ ಡೋಪಮೈನ್ ಎಂಬ ನ್ಯೂರೋಟ್ರಾನ್ಸ್ಮಿಟ್ಟರ್ ಬಿಡುಗಡೆಯಾಗುವಂತೆ ಮಾಡುತ್ತದೆ. ಇದರಿಂದ ಕ್ಷಣಿಕ ಸಂತೋಷ, ನೆಮ್ಮದಿ ಹಾಗೂ ಒತ್ತಡ ಕಡಿಮೆಯಾದ ಅನುಭವ ಉಂಟಾಗುತ್ತದೆ. ಆದರೆ ಈ ಪರಿಣಾಮ ಸ್ವಲ್ಪ ಸಮಯ ಮಾತ್ರ ಇರುತ್ತದೆ.ಆದರೆ ವ್ಯಸನ ಮಾತ್ರ ಹೆಚ್ಚಾಗುತ್ತದೆ.
ಇನ್ನೊಂದೆಡೆ, ಸುಣ್ಣ ಬಾಯಿಯ ಒಳಭಾಗದಲ್ಲಿ ಸಣ್ಣ ಗಾಯಗಳನ್ನು ಉಂಟುಮಾಡುತ್ತದೆ. ಈ ಗಾಯಗಳ ಮೂಲಕ ತಂಬಾಕಿನಲ್ಲಿರುವ ಹಾನಿಕಾರಕ ರಾಸಾಯನಿಕಗಳು ದೇಹದೊಳಗೆ ಸುಲಭವಾಗಿ ಪ್ರವೇಶಿಸಿ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು.
56
ಕ್ಯಾನ್ಸರ್ ಆಗುವುದು ಹೇಗೆ?
ತಂಬಾಕು ಮತ್ತು ಇತರ ಹಾನಿಕಾರಕ ರಾಸಾಯನಿಕಗಳ ನಿರಂತರ ಸಂಪರ್ಕದಿಂದ ಬಾಯಿಯ ಒಳಭಾಗದಲ್ಲಿ ಫೈಬ್ರೋಸಿಸ್) ಉಂಟಾಗಬಹುದು. ಈ ರಾಸಾಯನಿಕಗಳು ದೇಹದ ಕೋಶಗಳಲ್ಲಿರುವ ಡಿಎನ್ಎಗೆ ಹಾನಿ ಮಾಡುತ್ತವೆ. ಸಾಮಾನ್ಯವಾಗಿ ಡಿಎನ್ಎ ಯಾವ ಕೋಶ ಯಾವಾಗ ಬೆಳೆಯಬೇಕು ಮತ್ತು ಯಾವಾಗ ನಾಶವಾಗಬೇಕು ಎಂಬುದನ್ನು ನಿಯಂತ್ರಿಸುತ್ತದೆ. ಆದರೆ ಡಿಎನ್ಎ ಹಾನಿಗೊಳಗಾದಾಗ ಈ ನಿಯಂತ್ರಣ ಕಳೆದುಹೋಗುತ್ತದೆ. ಪರಿಣಾಮವಾಗಿ ಹಾನಿಗೊಂಡ ಕೋಶಗಳು ಸಾಯದೆ, ಅಸಹಜವಾಗಿ ಹೆಚ್ಚುತ್ತಾ ಹೋಗುತ್ತವೆ. ಇದೇ ಪ್ರಕ್ರಿಯೆ ಮುಂದುವರಿದರೆ ಅದು ಕ್ಯಾನ್ಸರ್ ಆಗಿ ಬೆಳೆಯುವ ಸಾಧ್ಯತೆ ಇರುತ್ತದೆ.
66
ತಜ್ಞರ ಈ ಬಗ್ಗೆ ಏನು ಹೇಳುತ್ತಾರೆ?
ವೀಳ್ಯದ ಎಲೆ ಮಾತ್ರ ಸೇವಿಸುವುದರಿಂದ ಕ್ಯಾನ್ಸರ್ ಅಪಾಯ ಬಹಳ ಕಡಿಮೆ ದೆ. ಆದರೆ ತಂಬಾಕು, ಸುಪಾರಿ, ಗುಟ್ಕಾ ಅಥವಾ ಚೂನಾ ಸೇರಿಸಿದ ಪಾನ್ ಸೇವನೆಯು ಬಾಯಿಯ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವ ಉಂಟಾಗುತ್ತದೆ. ಹಾಗಾಗಿ ಇಂತಹ ಅಭ್ಯಾಸಗಳಿಂದ ದೂರ ಉಳಿಯುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.