ನೇರಳೆ ಹಣ್ಣು, ಅದರ ಬೀಜ, ಎಲೆ ಮತ್ತು ತೊಗಟೆಯು ಆಯುರ್ವೇದದಲ್ಲಿ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಪ್ರಾಚೀನ ಭಾರತವನ್ನು 'ಜಂಬೂದ್ವೀಪ' ಎಂದು ಕರೆಯಲು ಈ ಹಣ್ಣೇ ಕಾರಣವಾಗಿತ್ತು. ಇದನ್ನು ಆಯುರ್ವೇದದ ಅಮೃತ ಎಂದು ಏಕೆ ಕರೆಯುತ್ತಾರೆ? ನೀವೇ ನೋಡಿ.
ಇದರ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ. ತೊಗಟೆಯ ಪುಡಿಯಿಂದ ಹಲ್ಲುಜ್ಜಿದರೆ ಒಸಡುಗಳು ಗಟ್ಟಿಯಾಗುತ್ತವೆ.
ನೇರಳೆ ತೊಗಟೆಯ ಕಷಾಯದಿಂದ ಮುಖ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.
56
ಸೇವಿಸುವ ಮುನ್ನ ಈ ಎಚ್ಚರಿಕೆಗಳು ಅತ್ಯಗತ್ಯ!
ನೇರಳೆ ಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ, ಇದು ಅಸಿಡಿಟಿಗೆ ಕಾರಣವಾಗಬಹುದು.
ನೇರಳೆ ಹಣ್ಣು ತಿಂದ ತಕ್ಷಣ ಹಾಲು ಅಥವಾ ಮೊಸರನ್ನು ಸೇವಿಸಬಾರದು. ದಿನಕ್ಕೆ 100-150 ಗ್ರಾಂ ಮಿತಿಯಲ್ಲಿ ತಿನ್ನುವುದು ಉತ್ತಮ.
66
ಭಾರತದ ಹೆಮ್ಮೆ 'ಜಂಬೂದ್ವೀಪ'ದ ಕಥೆ
ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ನೇರಳೆ ಮರಗಳು ಹೇರಳವಾಗಿದ್ದರಿಂದ ಭಾರತಕ್ಕೆ 'ಜಂಬೂದ್ವೀಪ' ಎಂಬ ಹೆಸರು ಬಂದಿತ್ತು.
ಉಪ್ಪು (ಸೈಂಧವ ಲವಣ) ಸೇರಿಸಿ ನೇರಳೆ ಹಣ್ಣು ತಿನ್ನುವ ಪದ್ಧತಿಯು ರುಚಿಯ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುವ ಪುರಾತನ ಸಂಪ್ರದಾಯವಾಗಿದೆ.
ಲೇಖನ ಕೃಪೆ: ಡಾ. ರವಿಕಿರಣ ಪಟವರ್ಧನ, ಶಿರಸಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.