ವಿಜಯಾ ಅವರು ರಾಮಾಯಣ, ಮಹಾಭಾರತ, ಪುರಾಣ-ಪುಣ್ಯ ಕಥೆಗಳನ್ನ ಹೇಳುವ ಗೊಂಬೆಗಳನ್ನ ತಂದು ಪೌರಾಣಿಕ ಕಥೆಗಳ ಸಿಕ್ವೆನ್ಸ್ಗೆ ತಕ್ಕಂತೆ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ಮನೆಗೆ ಹಬ್ಬದಂದು ಗೊಂಬೆ ನೋಡಲು ಬರುವವರಿಗೆ ಈ ಗೊಂಬೆಗಳು ಪೌರಾಣಿಕ ಕಥೆಯನ್ನ ಸಾರಿಸಾರಿ ಹೇಳುವಂತಿವೆ. ಅದ್ರಲ್ಲು ದಸರಾ ಗೊಂಬೆ ಕೂರಿಸಿರುವ ವಿಷಯ ತಿಳಿದು ನೋಡಲು ಜತ್ತಿ ಅವರ ಮನೆಗೆ ಬರ್ತಿರೋರಿಗೆ, ಗೊಂಬೆ ಪ್ರೀಯರಿಗೆ ಗೊಂಬೆಗಳೇ ಸ್ವತಃ ಮನ ಮುಟ್ಟುವಂತೆ ಕಥೆ ಹೇಳ್ತಿವೆ ಏನೋ ಎಂದೆನಿಸುತ್ತಿದೆಯಂತೆ. ಸೀತಾರಾಮರ ಕಲ್ಯಾಣ, ಬಿಂಬಿಸುವ ಥೀಮ್, ಲವಕುಶರ ತೊಟ್ಟಿಲು ಶಾಸ್ತ್ರ, ರಾವಣ, ಕುಂಭಕರ್ಣ ಕಥೆಯನ್ನು ಗೊಂಬೆಗಳ ಮೂಲಕ ಹೊರತಂದಿದ್ದಾರೆ.