ಕುಷ್ಟಗಿಯಲ್ಲಿ ಶ್ರೀಗಂಧದ ಕಾಡು ಕಟ್ಟಿದ ರಮೇಶ ಬಳೂಟಗಿ

May 3, 2018, 1:44 PM IST

ಶ್ರೀಗಂಧ ಬೆಳೆಯುವುದಕ್ಕೆ ಹಿಂದೇಟು ಹಾಕಿದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ರಮೇಶ್ ಬಳೂಟಗಿ ಪ್ರಯತ್ನದಿಂದ ಈಗ ೨ ಸಾವಿರ ಎಕರೆ ಪ್ರದೇಶದಲ್ಲಿ ೪೫ ಸಾವಿರ ಶ್ರೀಗಂಧದ ಮರಗಳು ಇವೆ. ಇದಕ್ಕೆ ಪೂರಕವಾಗಿ ೨ ಲಕ್ಷ ಬೇರೆ ಬೇರೆ ಮರಗಳನ್ನು ಬೆಳೆಯಲಾಗಿದೆ. ಬಿಸಿಲು ನಾಡಿನಲ್ಲಿ ಮಲೆನಾಡನ್ನು ನಾಚಿಸುವಂತೆ ಕಂಗೊಳಿಸುತ್ತಿರುವ ಕಾಡನ್ನು ನೋಡಿ ಸ್ವತಃ ವಿಜ್ಞಾನಿಗಳೇ ಬೆರಗಾಗಿದ್ದಾರೆ.