ಕನ್ನಡದ ಸ್ಟಾರ್ ನಟಿಯೊಬ್ಬಳ ಮನಮಿಡಿಯುವ ಕಥೆಯಿದು

Jun 15, 2018, 8:15 PM IST

ಈಕೆ ಕನ್ನಡದ ಸ್ಟಾರ್ ನಟಿ. ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್’ಕುಮಾರ್ ಸೇರಿದಂತೆ ಸಾಕಷ್ಟು ಖ್ಯಾತ ನಟರ ಜೊತೆ ನಟಿಸಿ ಸೈ  ಎನಿಸಿಕೊಂಡವರು. ನಾಗಮಂಡಲ ಚಿತ್ರದ ಕಂಬದ ಮೇಲಿನ ಬೊಂಬೆಯೇ ಹಾಡು ಕೇಳಿದಾಕ್ಷಣ ಇವರ ಮನೋಜ್ಞ ಅಭಿನಯವೇ ಕಣ್ಣ ಮುಂದೆ ಬಂದಂತಾಗುತ್ತದೆ. ಹೌದು. ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಇಂದು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ. ಸುವರ್ಣ ನ್ಯೂಸ್ ಜೊತೆ ನಟಿ ವಿಜಯಲಕ್ಷ್ಮೀ ಮನದಾಳ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.