ಹೇ ಜಗನ್ನಾಥ... ಪುರಿ ದೇಗುಲದ ಎದುರೇ ಅರ್ಚಕನ ಪುತ್ರನ ಕೊಲೆ

By Anusha KbFirst Published May 25, 2022, 1:08 PM IST
Highlights
  • ದೇಗುಲದ ಎದುರೇ ಅರ್ಚಕನ ಪುತ್ರನ ಕೊಲೆ
  • ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಕೊಲೆ ಶಂಕೆ
  • ಒಡಿಶಾದ ಪುರಿ ಜಗನ್ನಾಥ ದೇಗುಲದ ಎದುರು ಘಟನೆ
     

ಭುವನೇಶ್ವರ: ಒಡಿಶಾದ ಹಿಂದೂ ತೀರ್ಥ ಕ್ಷೇತ್ರ ಪುರಿ ಜಗನ್ನಾಥ ದೇಗುಲದ ಮುಂದೆಯೇ ಕೊಲೆಯೊಂದು ನಡೆದು ಹೋಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ದೇಗುಲ ನಗರಿಯಲ್ಲಿ ರಕ್ತ ಹರಿಸಿದ್ದಾರೆ. ದೇಗುಲದ ಮುಂಭಾಗವೇ ಆರ್ಚಕನ ಪುತ್ರನ ಹತ್ಯೆ ನಡೆದಿದೆ. ಮಂಗಳವಾರ (May 24) ರಾತ್ರಿ ಈ ಅವಘಡ ಸಂಭವಿಸಿದೆ. 

ಪುರಿ ಜಗನ್ನಾಥ ದೇಗುಲದ (Puri Jagannath temple) ಮುಂದಿರುವ ಐತಿಹಾಸಿಕ ಇಮರ್ ಮಠದ (Emar Mutt) ಮುಂದೆ ಅರ್ಚಕನ ಪುತ್ರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ಶಿವರಾಮ್‌ ಪತ್ರ (Shivaram Patra) ಎಂದು ಗುರುತಿಸಲಾಗಿದೆ. ಈತ ದೇಗುಲ ನಗರಿಯಲ್ಲಿರುವ ಹರಚಂಡಿ ತಲುಚ್ಛ ಸಹಿ (Harachandi Taluchha Sahi) ದೇಗುಲದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕನ ಪುತ್ರ. 

Davanagere Crime: ದೇವರ ಮಗನನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಕಾರಣ?
 

ವರದಿಗಳ ಪ್ರಕಾರ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪುರಿ ಜಗನ್ನಾಥ ದೇಗುಲದ ಪ್ರಮುಖ ಪ್ರವೇಶ ದ್ವಾರವಾಗಿರುವ ಸಿಂಘ ದ್ವಾರದಿಂದ (Singha Dwara) ಕೇವಲ 20 ಮೀಟರ್ ದೂರದಿಂದ ಎರಡು ಸುತ್ತು ಗುಂಡು ಹಾರಿಸಿ ಸ್ಥಳದಲ್ಲೇ ಶಿವರಾಮ್‌ ಪತ್ರನನ್ನು ಹತ್ಯೆ ಮಾಡಿದ್ದಾರೆ.ಸಿಂಘ ದ್ವಾರ ಪೊಲೀಸರು ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಗುಂಡೇಟಿನಿಂದ ಗಾಯಗೊಂಡ ಶಿವರಾಮ್‌ ಪತ್ರನನ್ನು ಪುರಿ ಜಿಲ್ಲಾಸ್ಪತ್ರೆಗೆ (Puri district headquarters hospital) ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. 

Odisha | Son of Puri priest shot dead in front of Jagannath Temple. "Prime accused has been detained. Prima facie personal enmity is the motive behind the murder. Probe on," said Puri SP Kanwar Vishal Singh pic.twitter.com/BLXYjISJPE

— ANI (@ANI)

 

ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪುರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕನ್ವರ್ ವಿಶಾಲ್ ಸಿಂಗ್ (Kanwar Vishal Singh) ಅವರು ಮಾತನಾಡಿ, ಪ್ರಧಾನ ಆರೋಪಿಯನ್ನು ಚಂದನ್ ಬಾರಿಕ್ (Chandan Barik) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ. ಅಪರಾಧಕ್ಕೆ ಬಳಸಿದ ಆಯುಧವನ್ನು (weapon) ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ವೈಯಕ್ತಿಕ ದ್ವೇಷದ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ. ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಸ್ಥಳೀಯರ ಪ್ರಕಾರ, ಮೃತರನ್ನು ಪ್ರೇಮ ಪ್ರಕರಣದ (love affair) ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ ಎಂದು ಎಸ್ಪಿ ಹೇಳಿದರು.

5 ವರ್ಷದ ಬಳಿಕ ಕೊಲೆಗಾರನನ್ನು ಹುಡುಕಿಕೊಟ್ಟ Facebook!
 

ಸಂಬಂಧ ಮುಂದುವರಿಸಲು ನಿರಾಕರಿಸಿದ 19 ವರ್ಷ ಪ್ರಾಯದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ವಾರದ ಹಿಂದಷ್ಟೇ ಗೋವಾದ ಬೀಚ್‌ನಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 26 ವರ್ಷದ ಕಿಶನ್‌ ಕಲಂಗುಟ್ಕರ್‌ (Kishan Kalangutkar) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಗೋವಾದ (South Goa) ವೆಲ್ಸೊನ್‌ ಬೀಚ್‌ನಲ್ಲಿ (Velsaon beach) ಈ ಘಟನೆ ನಡೆದಿತ್ತು. ಬೀಚ್‌ನಲ್ಲಿ ಶವ ಪತ್ತೆಯಾದ ಒಂದು ದಿನದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಯೂ 19 ವರ್ಷ ಪ್ರಾಯದ ಯುವತಿಯೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದ. ಕಾಲೇಜೊಂದರಲ್ಲಿ ಓದುತ್ತಿದ್ದ ಆಕೆ ಈತನೊಂದಿಗೆ ಬೀಚ್‌ಗೆ ಬಂದಿದ್ದಳು ಎಂದು ದಕ್ಷಿಣ ಗೋವಾದ ಸೂಪರಿಟೆಂಡೆಂಟ್ ಆಪ್ ಪೊಲೀಸ್ ಅಭಿಷೇಕ್ ಧನಿಯಾ (Abhishek Dhania) ಹೇಳಿದ್ದಾರೆ. ಆಕೆ ಈ ಸಂಬಂಧವನ್ನು ಇನ್ನು ಮುಂದೆ ಮುಂದುವರಿಸಲಾಗದು ಎಂದು ಹೇಳಿದ ಹಿನ್ನೆಲೆಯಲ್ಲಿ ಆರೋಪಿ ಆಕೆಯ ವಿರುದ್ಧ ಅಸಮಾಧಾನಗೊಂಡಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!