ಯಶ್ ರಾವಣ ಆದ್ರೆ ರಾಮನಾಗ್ತಾರಾ ರಣಬೀರ್? ಬಹುಕೋಟಿ ವೆಚ್ಚದ 'ರಾಮಾಯಣ' ಬಗ್ಗೆ ಮೌನ ಮುರಿದ ಬಾಲಿವುಡ್ ಸ್ಟಾರ್

By Shruthi KrishnaFirst Published Mar 7, 2023, 11:47 AM IST
Highlights

ಬಹುಕೋಟಿ ವೆಚ್ಚದ ರಾಮಾಣ ಸಿನಿಮಾದ ರಾಮ್ ಮತ್ತು ರಾವಣ ಪಾತ್ರಕ್ಕೆ ಯಶ್ ಮತ್ತು ರಣಬೀರ್ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿದೆ ಎನ್ನುವ ವೈರಲ್ ಸುದ್ದಿಗೆ ರಣಬೀರ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಮಾಯಣ ಮತ್ತು ಮಹಾಭಾರತ ಮೇಲೆ ಅನೇಕ ಸಿನಿಮಾಗಳು ಬಂದಿವೆ, ಈಗಲೂ ತಯಾರಾಗುತ್ತಿವೆ. ಪ್ರತಿ ಸಿನಿಮಾಗಳು ವಿಭಿನ್ನವಾಗಿದ್ದು ಸಿನಿ ಪ್ರೇಕ್ಷಕರ ಗಮನ ಸೆಳೆದಿವೆ. ಇದೀಗ ರಾಮಾಯಣ ಬಗ್ಗೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡಲು ಭರ್ಜರಿ ಸಿದ್ಧತೆ ನಡೆದಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಮಾತ್ರವಲ್ಲದೇ ಭಾರತದ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಒಟ್ಟಿಗೆ ಸೇರಿಸಲು ಸಿನಿಮಾತಂಡ ಪ್ರಯತ್ನಿಸುತ್ತಿದೆ. ಈ ಬಗ್ಗೆ ಕಳೆದ ಎರಡು-ಮೂರು ವರ್ಷಗಳಿಂದ ಸುದ್ದಿ ಕೇಳಿ ಬರುತ್ತಿದೆ. ಅಂದಹಾಗೆ ರಾಮಾಯಣ ಚಿತ್ರಕ್ಕೆ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಅನೌನ್ಸ್ ಆಗಿದೆ ಆದರೆ ಸ್ಟಾರ್ ಕಾಸ್ಟ್ ಎನ್ನೂ ಫೈನಲ್ ಆಗಿಲ್ಲ. ಹಾಗಾಗಿ ಅನೇಕ ಸ್ಟಾರ್‌ಗಳ ಹೆಸರು ಕೇಳಿ ಬರುತ್ತಿದೆ. 

ಸದ್ಯ ರಾಮಾಯಣ ಸಿನಿಮಾಗೆ ರಾಮನ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿದೆ, ರಾವಣನ ಪಾತ್ರಕ್ಕೆ ಕನ್ನಡದ ಸ್ಟಾರ್ ಕೆಜಿಎಫ್ ಹೀರೋ ರಾಕಿ ಬಾಯ್ ಯಶ್ ಅವರಿಗೆ ಆಪ್ರೋಚ್ ಮಾಡಲಾಗಿದೆ ಎನ್ನುವ ಸುದ್ದಿ ಇದೆ. ಜೊತೆಗೆ ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್ ಹೀಗೆ ಅನೇಕರ ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಈಗ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮೌನ ಮುರಿದಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಾಮನಾಗಿ ನಟಿಸುತ್ತಾರಾ ಎನ್ನುವ ವದಂತಿಗೆ ರಣಬೀರ್ ಪ್ರತಿಕ್ರಿಯೆ ನೀಡಿದ್ದಾರೆ. 

Latest Videos

ರಣಬೀರ್ ಕಪೂರ್ ಸದ್ಯ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆಗ ರಾಮಾಯಣ ಬಗ್ಗೆ ಹೇಳಿದ್ದಾರೆ. 'ಇದು ಕೇವಲ ವಂದತಿ, ಇದರಲ್ಲಿ ಯಾವುದೇ ಸಕ್ಷವಿಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ರಾಮಾಯಣ ಸಿನಿಮಾದಲ್ಲಿ ತಾನು ಇಲ್ಲ ಎನ್ನುವುದನ್ನು ರಣಬೀರ್ ಕಪೂರ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಧೂಮ್ 4 ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. 

'ಹಿಂದು ದೇವರ ಕಥೆಗಳನ್ನು ಓದಿ ಅನುಮಾನ ಬಂದವು..' ಧರ್ಮದ ಬಗ್ಗೆ ರಾಜಮೌಳಿ ಮಾತು!

ಧೂಮ್ 4ನಲ್ಲಿ ನಟಿಸುತ್ತಾರೆ ಸುದ್ದಿ ಕೂಡ ರಣಬೀರ್ ಬಗ್ಗೆ ಕೇಳಿ ಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಣಬೀರ್, ಈ ಬಗ್ಗೆ ಉತ್ತರಿಸಲು ಆದಿತ್ಯಾ ಚೋಪ್ರಾ ಆಗಿದ್ದರೆ ಚೆನ್ನಾಗಿರುತ್ತಿತ್ತು. ನಾನು ಧೂಮ್ -4 ರೀತಿಯ ಯಾವುದೇ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಆದರೆ ಇಲ್ಲಿವರೆಗೂ ನನಗೆ ಯಾವುದೇ ಆಫರ್ ಬಂದಿಲ್ಲ' ಎಂದು ಹೇಳಿದರು. ರಣಬೀರ್ ಕಪೂರ್ ಪ್ರತಿಕ್ರಿಯೆ ಅಭಿಮಾನಿಗಳ ಭಾರಿ ನಿರಾಸೆ ಮೂಡಿಸಿದೆ. ಆದರೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ರಣಬೀರ್ ತೆರೆ ಎಳೆದರು. ಅಷ್ಟಕ್ಕೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ತಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಇದೆ. ಕೆಜಿಎಫ್2 ಬಳಿಕ ಯಶ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

Yash: ಕೆಜಿಎಫ್​-2 ಯಶಸ್ಸಿನ ಬೆನ್ನಲ್ಲೇ 'ರಾವಣ' ಆಗ್ತಿದ್ದಾರಾ ಯಶ್​? ಏನಿದು ಹೊಸ ಸುದ್ದಿ?

ತು ಜೂಠಿ ಮೈನ್ ಮಕ್ಕರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಮಾರ್ಚ್ 8ರಂದು ತೆರೆಗೆ ಬರ್ತಿದೆ. ರಣಬೀರ್ ಕಪೂರ ಜೊತೆ ಶ್ರದ್ಧಾ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ರಣಬೀರ್ ಮತ್ತು ಶ್ರದ್ದಾ ಒಟ್ಟಿಗೆ ನಟಿಸಿದ್ದು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.  ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಮೋಡಿ ಮಾಡಿರುವ ಈ ಸಿನಿಮಾ ಹೇಗಿರಲಿದೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

click me!