ವಿಶೇಷ ಭವಿಷ್ಯ: ಮಾನಸಿಕ ಹಿಂಸೆಯಿಂದ ದೂರವಿರಲು ಈ ರಾಶಿಯವರು ಹೀಗೆ ಮಾಡಿ

By Web DeskFirst Published Nov 13, 2018, 7:18 AM IST
Highlights

ವೃಷಭ ರಾಶಿಯವರು ನಿಮ್ಮ ಕಾಲಿನ ಭಾಗ ಹಾಗೂ ಹೃದಯ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು, ಸ್ತ್ರೀಯರಿಂದ ಅಪವಾದ ಕೇಳಬೇಕಾಗುತ್ತದೆ, ವಸ್ತು ಕಳೆದುಕೊಳ್ಳುವ ದಿನ, ತಿರುಗಾಟ ಹೆಚ್ಚಲಿದೆ.  

13-11-18 - ಮಂಗಳವಾರ
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ಷಷ್ಠಿ ತಿಥಿ
ಉತ್ತರಾಷಾಢ ನಕ್ಷತ್ರ 

ರಾಹುಕಾಲ  02.56 ರಿಂದ 04.23
ಯಮಗಂಡ ಕಾಲ  09.11 ರಿಂದ 10.37
ಗುಳಿಕ ಕಾಲ  12.04 ರಿಂದ 01.30
 
ಮೇಷ ರಾಶಿ : ಇಂದು ನಿಮ್ಮ ಅದೃಷ್ಟ ಹೀನದ ದಿನ, ತಂದೆ-ತಾಯಿಯರಲ್ಲಿ ಭಿನ್ನಾಭಿಪ್ರಾಯ, ಉದ್ಯೋಗದಲ್ಲೂ ಮಾನಸಿಕ ಹಿಂಸೆ, ಒಟ್ಟಾರೆ ಇಂದು ಸಾಮಾನ್ಯ ದಿನವಾಗಿರಲಿದೆ. ಅನ್ನಪೂರ್ಣೆಶ್ವರಿ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ.

ದೋಷಪರಿಹಾರ : ಅನ್ನದಾನ ಮಾಡಿ

ವೃಷಭ : ನಿಮ್ಮ ಕಾಲಿನ ಭಾಗ ಹಾಗೂ ಹೃದಯ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು, ಸ್ತ್ರೀಯರಿಂದ ಅಪವಾದ ಕೇಳಬೇಕಾಗುತ್ತದೆ, ವಸ್ತು ಕಳೆದುಕೊಳ್ಳುವ ದಿನ, ತಿರುಗಾಟ ಹೆಚ್ಚಲಿದೆ.  
      
ದೋಷ ಪರಿಹಾರ : ದುರ್ಗಾ ಕವಚ ಪಠಿಸಿ

ಮಿಥುನ : ನಿಮ್ಮ ದಾಂಪತ್ಯದಲ್ಲಿ ಮನಸ್ತಾಪ, ನೀರಿನ ವಿಷಯಕ್ಕೆ ಅಥವಾ ಹಾಲಿನ ವಿಷಯಕ್ಕೂ ಜಗಳವಾಗಬಹುದು, ಕಾಲಿನ ನರ ಭಾಗದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳುತ್ತದೆ, ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. 
ದೋಷ ಪರಿಹಾರ : ನೃಸಿಂಹ ಕವಚ ಪಠಿಸಿ

ಕಟಕ : ನಿಮ್ಮ ತಲೆ ಭಾಗಕ್ಕೆ ಪೆಟ್ಟು ಬೀಳುವ ಸಾಧ್ಯತೆ, ಹಿರಿಯ ಅಧಿಕಾರಿಗಳಿಂದ ಕಿರಿಕಿರಿ, ಉದ್ಯೋಗಕ್ಕೆ ಹೋಗುವಾಗ ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಆರೋಗ್ಯ ವ್ಯತ್ಯಯ, ಗೃ ಸಂಬಂಧಿ ಅನುಕೂಲವಿದೆ.  
  
ದೋಷ ಪರಿಹಾರ : ಶ್ರೀ ಸೂಕ್ತ ಪಠಿಸಿ ಅಥವಾ ಕೇಳಿ

ಸಿಂಹ :  ನಿಮ್ಮ ಸಹೋದರ ಸಹೋದರಿಯರಿಂದ ಮಹತ್ಕಾರ್ಯ ಸಾಧನೆ, ನಿಮಗೂ ಪ್ರಶಂಸೆ, ಸಂಗಾತಿಯಲ್ಲಿ ವಕ್ರದೃಷ್ಟಿ ಕಾಣುತ್ತೀರಿ, ಪುಟ್ಟ ವಿಷಯವೂ ಪ್ರಮಾದವಾಗುತ್ತದೆ, ದುಷ್ಟರಿಂದ ಸ್ವಲ್ಪ ಮಟ್ಟಿಗೆ ಹಣ ವ್ಯಯವಾಗಲಿದೆ. ಎಚ್ಚರವಾಗಿರಿ. 

ದೋಷ ಪರಿಹಾರ : ಲಕ್ಷ್ಮೀ ಸಹಿತ ನಾರಾಯಣ ಸ್ಮರಣೆ ಅಥವಾ ದರ್ಶನ ಮಾಡಿ

ಕನ್ಯಾ : ಸ್ತ್ರೀಯರಿಂದ ಅನುಕೂಲ ಸಿದ್ಧಿ, ಉತ್ತಮ ವಿಚಾರಗಳ ಚರ್ಚೆ, ವಿದ್ವಾಂಸರ ಭೇಟಿ, ಸದ್ವಿಚಾರಗಳ ಬಗ್ಗೆ ಗಂಭೀರ ವಿಚಾರ, ಉಪನ್ಯಾಸ ಕೊಟ್ಟು ಗೌರವ ಹೊಂದುತ್ತೀರಿ, ಉದ್ಯೋಗಿಗಳಿಗೆ ಶುಭ ದಿನ 
  
ದೋಷ ಪರಿಹಾರ : ನೃಸಿಂಹ ದಂಡಕ ಪಠಿಸಿ

ತುಲಾ : ನಿಮ್ಮ ಪ್ರತಿಭೆಯೇ ನಿಮ್ಮ ಸೌಭಾಗ್ಯವನ್ನು ಹೆಚ್ಚಿಸಲಿದೆ, ಆದರೆ ಓರ್ವ ಸ್ತ್ರೀ ನಿಮ್ಮ ಧನ ವ್ಯಯಕ್ಕೆ ಕಾರಣಳಾಗುತ್ತಾಳೆ, ನಿಮ್ಮ ಸಹೋದರಿ ಸಲುವಾಗಿ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ, ವಾಹನದಲ್ಲಿ ಓಡಾಡುವಾಗ ಎಚ್ಚರವಿರಲಿ.  

ದೋಷ ಪರಿಹಾರ : ಅವರೇಕಾಳು ದಾನ ಮಾಡಿ

ವೃಶ್ಚಿಕ :  ನಿಮ್ಮನ್ನು ಕಂಡು ಹಿರಿಯರು ಗೌರವಿಸುತ್ತಾರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸಗಳು ನಡೆಯುತ್ತವೆ, ಉತ್ತಮರ ಸಹವಾಸ, ವಾಹನ ಸಂಚಾರದಲ್ಲಿ ಅವಘಡ ಸಂಭವಿಸುವ ಸಾಧ್ಯತೆ. ಉದ್ಯೋಗದಲ್ಲಿ ಉತ್ತಮ ಸಹಕಾರ.    

ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿ

ಧನಸ್ಸು :  ಶ್ರಮಕ್ಕೆ ತಕ್ಕ ಫಲವಿಲ್ಲ, ಅನಾಯಾಸ ಪ್ರಯಾಣ, ಅಂದುಕೊಂಡ ಹಾಗೆ ಸುಖ ನಾಶ, ಗೃಹದಲ್ಲಿ ತೊಂದರೆ, ಮನೆಗಾಗಿ ಹುಡುಕಾಟ, ಅಸಮಧಾನ, ಗುರುವಿಗೆ ವಸ್ತ್ರದಾನ ಮಾಡಿ.

ದೋಷ ಪರಿಹಾರ : ದತ್ತಾತ್ರೇಯ ಧ್ಯಾನ ಮಾಡಿ

ಮಕರ : ಮಾನಸಿಕ ಹಿಂಸೆ, ಅನ್ಯರ ಮಾತು ಕೇಳಿ ನಿಮ್ಮ ಸಮಯ ಹಾಳಾಗುತ್ತದೆ, ಶತ್ರುಗಳಿಗಾಗಿ ಧನ ವ್ಯಯ ಮಾಡಿಕೊಳ್ಳಬೇಕಾಗುತ್ತದೆ, ಉದ್ಯೋಗದಲ್ಲಿ ಲಾಭ, ಉತ್ತಮರ ಸಹವಾಸ, ಹಿರಿಯರ ಭೇಟಿ.
  
ದೋಷ ಪರಿಹಾರ : ಶನಿ ದೇವಸ್ಥಾಕ್ಕೆ ಎಳ್ಳು ದಾನ ಮಾಡಿ

ಕುಂಭ :   ನಿಮ್ಮ  ಶ್ರಮದಿಂದಲೇ ಕಾರ್ಯ ಸಾಧನೆಯಾಗಿದ್ದರೂ ಅಕ್ಕಪಕ್ಕದವರು ನಿಮ್ಮ ಶ್ರಮದ ಲಾಭ ಪಡೆಯುತ್ತಾರೆ,  ವೃಥಾ ನಿಮ್ಮ ಮೇಲೆ ದೋಷಾರೋಪ, ಆದರೆ ನಿಮ್ಮ ರಾಶಿಗೆ ಶುಭದಿನಗಳಿದ್ದಾವೆ. ಯೋಚಿಸುವ ಅಗತ್ಯವಿಲ್ಲ. ಶುಭವೇ ಆಗುತ್ತದೆ.

ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಮಂಗಲ ದ್ರವ್ಯ ಸಮರ್ಪಿಸಿ.
  
ಮೀನ : ಸೌಭಾಗ್ಯದ ದಿನ, ಆದರೆ ನಿಮ್ಮ ಲಾಭದಲ್ಲಿ ಕತ್ತರಿಯಾಗಲಿದೆ, ಮಕ್ಕಳಿಂದ ಸ್ವಲ್ಪ ಧನವ್ಯಯ, ಮಾನಸಿಕ ನೆಮ್ಮದಿಯೂ ಸ್ವಲ್ಪ ಹಾಳಾಗಲಿದೆ, ಉದ್ಯೋಗದಲ್ಲಿ ಸ್ವಲ್ಪಮಟ್ಟಿಗೆ ಕಿರಿಕಿರಿ ಇದ್ದರೂ ಸಹಿಸುವ ಶಕ್ತಿ ಬರಲಿದೆ.
  
ದೋಷ ಪರಿಹಾರ : ಕೃಷ್ಣ ಧ್ಯಾನ ಮಾಡಿ

ವಾಞ್ಮಯೀ.

click me!