ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ: ಹಾಗಾದರೆ ಉಳಿದ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ 2018 ನವೆಂಬರ್ 30ರ ದಿನ ವಿಶೇಷ ಭವಿಷ್ಯ
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ಅಷ್ಟಮಿ
ಪೂರ್ವ ಫಲ್ಗುಣಿ
ರಾಹುಕಾಲ : 10.43 ರಿಂದ 12.08
ಯಮಗಂಡ ಕಾಲ : 02.59 ರಿಂದ 04.24
ಗುಳಿಕ ಕಾಲ : 07.52 ರಿಂದ 09.17
ಮೇಷ : ಮಕ್ಕಳ ಆರೋಗ್ಯದಲ್ಲಿ ಅಭಿವೃದ್ಧಿ, ಶೀತ ಬಾಧೆ ನಿವಾರಣೆ, ಸ್ತ್ರೀಯರಿಂದ ಕಾರ್ಯ ಸಾಧನೆ, ಸಹಕಾರ, ಉತ್ತಮ ದಿನ, ಕಾರ್ಯ ಸಾಧನೆಗೆ ಸಹೋದರರ ಅಡ್ಡಿ, ಪ್ರಯಾಣದ ದಿನ.
ದೋಷ ಪರಿಹಾರ - ಸುಬ್ರಹ್ಮಣ್ಯ ಸ್ವಾಮಿಗೆ ಕದಳಿ ಫಲ ಸಮರ್ಪಣೆ ಮಾಡಿ
ವೃಷಭ : ಆರೋಗ್ಯದಲ್ಲಿ ವ್ಯತ್ಯಯ, ಸ್ತ್ರೀಯರಿಗೆ ಅನುಕೂಲದ ದಿನ, ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ, ವ್ಯಾಪಾರಿಗಳಿಗೆ ಬುದ್ಧಿ ವಿಕಾರ, ಎಚ್ಚರದಿಂದ ವ್ಯವಹಾರ ನಡೆಸಿ, ನಿಮ್ಮ ಉದ್ಯೋಗದಲ್ಲಿ ಎಡವಟ್ಟುಗಳಾಗುವ ಸಾಧ್ಯತೆ.
ದೋಷ ಪರಿಹಾರ : ಶ್ರೀನಿವಾಸ ದರ್ಶನ ಮಾಡಿ
ಮಿಥುನ : ನೀವು ಅಂದುಕೊಂಡ ಮಟ್ಟಿಗೆ ಕಾರ್ಯಸಾಧನೆ ಆಗುವುದಿಲ್ಲ, ಕಾರ್ಯ ವಿಳಂಬವಾಗುವ ಸಾಧ್ಯತೆ, ಹಿರಿಯ ವ್ಯಕ್ತಿಗಳಿಗೆ ಮರಣ ಭಯ, ಉದ್ಯೋಗ ಕ್ಷೇತ್ರದಲ್ಲಿ ಅನಾನುಕೂಲವಿದೆ, ಮಾತನಾಡುವಾಗ ಎಚ್ಚರವಾಗಿರಿ.
ದೋಷ ಪರಿಹಾರ : ನಾರಾಯಣ ಮಂತ್ರ ಪಠಿಸಿ
ಕಟಕ : ಉದ್ಯೋಗಕ್ಕೆ ಹೋದವರಿಗೆ ಹೃದಯಾಘಾತದಂಥ ಸಮಸ್ಯೆ, ತಲೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ, ಸ್ತ್ರೀಯರಾಡುವ ಮಾತುಗಳು ಸಮಾಧಾನ ತರಲಿವೆ, ಗೃಹ ಪ್ರಾಪ್ತಿ, ಮನೆಯಲ್ಲಿ ಸ್ತ್ರೀಯರ ಮಾತು ನಡೆಯಲಿದೆ.
ದೋಷ ಪರಿಹಾರ : ದುರ್ಗಾ ದೇವಿಗೆ ನಮಸ್ಕಾರ ಮಾಡಿ
ಸಿಂಹ : ನಿಮ್ಮ ಕಾರ್ಯ ಸ್ಥಳದಲ್ಲಿ ಸ್ತ್ರೀಯರಿಂದ ಧನ ವ್ಯಯ, ಮರುಳು ಮಾತಿನಿಂದ ಹಣ ಕಸಿಯುತ್ತಾರೆ ಎಚ್ಚರವಾಗಿರಿ, ಆಪತ್ಕಾಲದಲ್ಲಿ ನಿಮ್ಮ ಗೆಳತಿಯಿಂದ ಸಹಾಯ, ಸಹೋದರಿಯರಿಂದ ಸಹಾಯವಾಗುವ ದಿನ.
ದೋಷ ಪರಿಹಾರ : ವನ ದುರ್ಗಾರಾಧನೆ ಮಾಡಿ
ಕನ್ಯಾ : ಹೆಂಡತಿ ಹಾಗೂ ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯ ದೂರಾಗಲಿದೆ, ಉತ್ತಮ ಮಾತಿನಿಂದ ನಿಮ್ಮ ಕಾರ್ಯ ಸಾಧನೆ, ಕುಟುಂಬದ ಸ್ತ್ರೀಯರಲ್ಲಿ ಹೊಂದಾಣಿಕೆ, ಸ್ತ್ರೀಯರಿಂದ ಧನ ಲಾಭ.
ದೋಷ ಪರಿಹಾರ : ಲಕ್ಷ್ಮೀ ನಾರಾಯಣ ಸ್ವಾಮಿ ಮಂತ್ರ ಜಪಿಸಿ
ತುಲಾ : ಸ್ತ್ರೀಯರಿಂದ ಅನುಕೂಲದ ದಿನ, ಕಾರ್ಯ ಸ್ಥಳದಲ್ಲಿ ದುರ್ಜನರು ನಿಮ್ಮ ಮನಸ್ಸಿಗೆ ಘಾಸಿ ಮಾಡುತ್ತಾರೆ, ವಿವೇಕಯುತವಾಗಿ ಮಾತನಾಡಿ ಕಾರ್ಯ ಸಾಧನೆ ಮಾಡುತ್ತೀರಿ, ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಗೊಂದಲ.
ದೋಷ ಪರಿಹಾರ : ಅನ್ನಪೂಣೇಶ್ವರಿಗೆ ಅಕ್ಕಿ ಸಮರ್ಪಣೆ ಮಾಡಿ
ವೃಶ್ಚಿಕ : ಗುರುತರ ವಿಷಯವನ್ನು ವಿವೇಕದಿಂದ ನಿಭಾಯಿಸುತ್ತೀರಿ, ಕುಟುಂಬದ ಮಟ್ಟಿಗೆ ಸ್ವಲ್ಪ ಮನಸ್ತಾಪ ಸಂಭವ, ಸ್ವಲ್ಪ ಮಟ್ಟಿಗೆ ಆರೋಗ್ಯ ವ್ಯತ್ಯಯವಾಗುತ್ತದೆ, ಪ್ರಶಂಸೆ, ಪುರಸ್ಕಾರಗಳಿಂದ ವಂಚಿತರಾಗುತ್ತೀರಿ.
ದೋಷ ಪರಿಹಾರ : ಮಹಾ ಗಣಪತಿ ದರ್ಶನ ಮಾಡಿ
ಧನಸ್ಸು : ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆ ಇದೆ, ಮಾತು ನಿಮ್ಮ ಮನೆಯನ್ನೇ ನುಂಗುವ ಸಾಧ್ಯತೆ ಇದೆ, ಪ್ರವಾಸ ಕೈಗೊಳ್ಳುವ ಮನಸ್ಸಾಗುತ್ತದೆ, ಮಾನಸಿಕವಾಗಿ ಸ್ವಲ್ಪ ಎದೆಗುಂದುತ್ತೀರಿ.
ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ
ಮಕರ : ನೀವು ಅಂದುಕೊಂಡ ಕಾರ್ಯಗಳು ಸ್ಥಗಿತಗೊಳ್ಳುತ್ತವೆ, ವೃಥಾ ಮಾತಿನ ಕಲಹ, ಸಂಗಾತಿಯೊಂದಿಗೆ ಬೇಸರದ ದಿನ, ನಿಮ್ಮ ಉದ್ಯೋಗದಲ್ಲಿ ಸ್ತ್ರೀಯರ ಸಹಕಾರ. ವ್ಯಾಪಾರಿಗಳಿಗೆ ಸ್ತ್ರೀಯರಿಂದ ಲಾಭವಿದೆ.
ದೋಷ ಪರಿಹಾರ : ಶಿವನಿಗೆ ರುದ್ರಾಭೀಷೇಕ ಮಾಡಿಸಿ
ಕುಂಭ : ನೀವು ಮಾಡಿದ ಕಾರ್ಯಗಳು ಹಿರಿಯರಿಗೆ ಮೆಚ್ಚುಗೆಯಾಗುತ್ತವೆ, ನೀವು ತೆಗೆದುಕೊಂಡ ನಿರ್ಧಾರ ಉತ್ತಮವಾಗಿದ್ದರೂ ಆ ನಿರ್ಧಾರ ಶಾಸನವಾಗುವುದಿಲ್ಲ, ನಿಮ್ಮ ಮನೋ ಬಲ ಕುಗ್ಗಿಸಲು ಶತ್ರುಗಳು ಜಾಳ ಬೀಸುತ್ತಾರೆ.
ದೋಷ ಪರಿಹಾರ : ಶ್ರೀಚಕ್ರ ಉಪಾಸನೆ ಮಾಡಿ
ಮೀನ : ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ, ನಿಮ್ಮ ಚಿಂತನೆಗಳಲ್ಲಿ ಪ್ರೌಢತೆ ಇರಲಿದೆ, ಹಿರಿಯರಿಂದ ಪ್ರಶಂಸೆ, ಉತ್ತಮ ಕೆಲಸಕ್ಕಾಗಿ ಹವಣಿಸುತ್ತಿದ್ದವರಿಗೆ ಉತ್ತಮ ಉದ್ಯೋಗ ಪ್ರಾಪ್ತಿ, ಮಾತಿನಲ್ಲಿ ಹಾಗೂ ಮನೆಯಲ್ಲಿ ತುಂಬ ಎಚ್ಚರವಾಗಿರಬೇಕು.
ದೋಷ ಪರಿಹಾರ : ನೃಸಿಂಹ ಸ್ವಾಮಿಗೆ 5 ನಮಸ್ಕಾರ ಮಾಡಿ