ಮೇಷ : ಈ ವರ್ಷ ಹೆಚ್ಚಿನ ಜಾಗೃತೆ ವಹಿಸಿರಿ

By Web DeskFirst Published Nov 8, 2018, 2:05 PM IST
Highlights

ವಿದ್ವಾನ್ ಕಮಲಾಕರ ಭಟ್ ಅವರ ದೀಪಾವಳಿ ವರ್ಷಭವಿಷ್ಯದ ಪ್ರಕಾರ ಮೇಷ ರಾಶಿ ಫಲಾಫಲ ಹೇಗಿದೆ..?

ಮೇಷ

ಆರಂಭಿಕ ದಿನಗಳಲ್ಲಿ ಅಷ್ಟೊಂದು ಸುಂದರವಾಗಿ ಕಾಣದಿದ್ದರೂ ಮುಂದಿನ ದಿನಗಳಲ್ಲಿ ಗೆಲುವು ನಿಶ್ಚಿತ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಕನಸು ನನಸಾಗಲಿದೆ. ಪತ್ರಿಕಾ ರಂಗದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಾಧ್ಯತೆ. ವಲಯದಲ್ಲಿ ಹಸಿರು ಮತ್ತು ಕೆಂಪು ಉತ್ಪನ್ನಗಳಿಂದ ಲಾಭಾಂಶ ದೊರಕಲಿದೆ. ವ್ಯವಹಾರಿಕ ಚತುರತೆಯಿಂದ ಜೀವನದಲ್ಲಿ ನೆಮ್ಮದಿ ಲಭಿಸಲಿದೆ. 

ಲೇವಾದೇವಿ ಆಮದು ಮತ್ತು ರ್ತು ವ್ಯವಹಾರಗಳನ್ನು ನಡೆಸುತ್ತಿರುವ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಹಲವು ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡಬೇಕೆನ್ನುವವರ ಆಸೆ ಈಡೇರಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಅನುಕೂಲಕರವಾಗಲಿದೆ. ಹಿತಶತ್ರುಗಳ ಬಗ್ಗೆ ಜಾಗೃತರಾಗಿರಿ. ಆಸ್ತಿ ಸಂಬಂಧಿತ ವಿಚಾರಗಳಿಗೆ ಹೆಚ್ಚಿನ ಒತ್ತನ್ನು ಕೊಡಿ.

ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯದಲ್ಲಿ ಸುಧಾರಣೆ. ವೈವಾಹಿಕ ಜೀವನಕ್ಕೆ ಕಾಲಿಡಬೇಕೆನ್ನುವವರ ಕನಸು ನನಸಾಗಲಿದೆ. ರಾಜಕೀಯ ರಂಗದಲ್ಲಿ ಸಾಮಾನ್ಯ ಮುನ್ನಡೆ ಸಾಧಿಸುವ ನಿರೀಕ್ಷೆ. ಮಂಗಳವಾರ ಬೇರೆಯವರಿಗೆ ಸಾಲ ಕೊಡುವುದಾಗಲಿ, ಹಣಕಾಸಿನ ವ್ಯವಹಾರ ಬೇಡ.


ಶುಭ ಸಂಖ್ಯೆ: 1 4 5 9

ವಿದ್ವಾನ್ ಕೆ.ಕಮಲಾಕರ ಭಟ್

click me!