MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಲಕ್ಷ್ಮೀ ನಿವಾಸ, ಅಣ್ಣಯ್ಯ ಸೀರಿಯಲ್‌ನಲ್ಲಿ ಚಮತ್ಕಾರ; ಒಂದು ಬದಲಾವಣೆಗೆ ವೀಕ್ಷಕರು ಫುಲ್ ಖುಷ್!

ಲಕ್ಷ್ಮೀ ನಿವಾಸ, ಅಣ್ಣಯ್ಯ ಸೀರಿಯಲ್‌ನಲ್ಲಿ ಚಮತ್ಕಾರ; ಒಂದು ಬದಲಾವಣೆಗೆ ವೀಕ್ಷಕರು ಫುಲ್ ಖುಷ್!

ಝೀ ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಲಕ್ಷ್ಮೀ ನಿವಾಸ' ಮತ್ತು 'ಅಣ್ಣಯ್ಯ'ದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಇಷ್ಟು ದಿನ ಅಳುಮುಂಜಿ ಪಾತ್ರಗಳಿಗೆ ನಿರ್ದೇಶಕರು ಸ್ವಲ್ಪ ಧೈರ್ಯ ನೀಡಿದ್ದಾರೆ.

1 Min read
Mahmad Rafik
Published : Oct 15 2025, 09:35 AM IST
Share this Photo Gallery
  • FB
  • TW
  • Linkdin
  • Whatsapp
15
ಎರಡು ಜನಪ್ರಿಯ ಧಾರಾವಾಹಿ
Image Credit : Zee Kannada

ಎರಡು ಜನಪ್ರಿಯ ಧಾರಾವಾಹಿ

ಝೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಲ್ಲಿ ಚಮತ್ಕಾರ ನಡೆದಿದೆ. ಇಷ್ಟು ದಿನ ಅಳುಮುಂಜಿ ಪಾತ್ರಗಳಿಗೆ ನಿರ್ದೇಶಕರು ಸ್ವಲ್ಪ ಧೈರ್ಯ ನೀಡಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಅಣ್ಣಯ್ಯ ರಾತ್ರಿ 7.30 ಮತ್ತು ಲಕ್ಷ್ಮೀ ನಿವಾಸ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಎರಡು ಧಾರಾವಾಹಿಗಳಲ್ಲಿ ಬದಲಾಗಿರುವ ಒಂದು ಬದಲಾವಣೆ ಏನು ಗೊತ್ತಾ?

25
ಲಕ್ಷ್ಮೀ ನಿವಾಸ
Image Credit : Facebook

ಲಕ್ಷ್ಮೀ ನಿವಾಸ

ಲಕ್ಷ್ಮೀ ನಿವಾಸ ಸೀರಿಯಲ್ ಮೊದಲ ಸಂಚಿಕೆಯಿಂದಲೇ ಭಾವನಾ ಪಾತ್ರವನ್ನು ಸಾದು ಅಂತಾನೇ ತೋರಿಸಲಾಗಿದೆ. ಏನೇ ಕಷ್ಟಗಳು ಬಂದರೂ ಎಲ್ಲವನ್ನು ತಾಳ್ಮೆಯಿಂದ ಕಣ್ಣೀರು ಹಾಕುತ್ತಾ ಎದುರಿಸುವ ಪಾತ್ರವೇ ಭಾವನಾ. ಇದೀಗ ನಿರ್ದೇಶಕರು ಭಾವನಾ ಪಾತ್ರಕ್ಕೆ ಕೊಂಚ ಧೈರ್ಯ ತುಂಬಿಸಿದ್ದಾರೆ.

Related Articles

Related image1
ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು
Related image2
ಓ ದೇವ್ರೇ ಇದು ಮಾತ್ರ ಸುಳ್ಳಾಗದಿರಲಿ: ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಪ್ರಾರ್ಥನೆ
35
ತಿರುಗೇಟು ನೀಡಲು ಭಾವನಾ ಪ್ಲಾನ್
Image Credit : Instagram

ತಿರುಗೇಟು ನೀಡಲು ಭಾವನಾ ಪ್ಲಾನ್

ಜಾತಕದಲ್ಲಿ ದೋಷವಿದ್ದು, ಗಂಡ ಸಿದ್ದು ಜೀವಕ್ಕೆ ಅಪಾಯವಿದೆ ಎಂದು ಜ್ಯೋತಿಷಿಗಳಿಂದ ಅತ್ತೆ ರೇಣುಕಾ, ಓರಗಿತ್ತಿ ನೀಲು ಸುಳ್ಳು ಹೇಳಿಸಿದ್ದರು. ವ್ರತಾಚಾರಣೆ ಅಂತೇಳಿ ಸಿದ್ದುವಿನಿಂದ ಭಾವನಾಳನ್ನು ದೂರ ಮಾಡಲು ಸಂಚು ರೂಪಿಸಿದ್ದರು. ಈ ಸತ್ಯ ಭಾವನಾಳಿಗೆ ಗೊತ್ತಾಗಿದ್ದು, ಅವರು ರೂಪಿಸಿದ ಸಂಚಿನ ಮೂಲಕ ತಿರುಗೇಟು ನೀಡಲು ಪ್ಲಾನ್ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿದೆ.

ಇದನ್ನೂ ಓದಿ: ಪತಿ ರೋಷನ್ ಬರ್ತ್‌ ಡೇಗೆ ಕವನ ಬರೆದು ಟಿಪಿಕಲ್ ಹೆಂಡ್ತಿ ಅನ್ನೋದನ್ನು ಪ್ರೂವ್ ಮಾಡಿದ ಅನುಶ್ರೀ

45
ಅಣ್ಣಯ್ಯ
Image Credit : Instagram

ಅಣ್ಣಯ್ಯ

7.30ಕ್ಕೆ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್‌ನಲ್ಲಿ ಮಾಸ್ತಿಕೊಪ್ಪಲಿನ ರಾಜಕುಮಾರನಾಗಿರುವ ಮನು ಪಾತ್ರವನ್ನು ಪೆದ್ದನಂತೆ ತೋರಿಸಲಾಗಿತ್ತು. ಇದೀಗ ಮನು ಪಾತ್ರದಲ್ಲಿ ಬದಲಾವಣೆಯಾಗುತ್ತಿದ್ದು, ಪ್ರಶ್ನೆ ಮಾಡುವ ಧೈರ್ಯವನ್ನು ತೋರಿಸುತ್ತಿದ್ದಾನೆ. ರಾಣಿಗೆ ಬರೆ ಹಾಕಿರೋದರಿಂದ ಅಣ್ಣಂದಿರ ಮುಂದೆ ಧೈರ್ಯುವಾಗಿ ನಿಂತು ಕ್ಷಮೆ ಕೇಳುವಂತೆ ಮನು ಹೇಳಿದ್ದಾನೆ.

ಇದನ್ನೂ ಓದಿ: ಕೊನೆಗೂ ಗಿಲ್ಲಿಯೂ ಸೋತ, ಸಪೋರ್ಟ್ ಸಿಕ್ರೂ ಕಾವ್ಯಾ ಮಾಡಿಕೊಂಡ್ರಾ ಎಡವಟ್ಟು!

55
ಆಸ್ತಿಗಾಗಿ ಮನು ಜೊತೆ ರಾಣಿ ಮದುವೆ
Image Credit : instagram

ಆಸ್ತಿಗಾಗಿ ಮನು ಜೊತೆ ರಾಣಿ ಮದುವೆ

ಆಸ್ತಿಗಾಗಿ ಮನು ಜೊತೆ ರಾಣಿ ಮದುವೆ ಮಾಡಿಸಲಾಗಿತ್ತು. ಆಸ್ತಿ ಪತ್ರಕ್ಕೆ ಸಹಿ ಹಾಕುತ್ತಿದ್ದಂತೆ ನಂಜೇಗೌಡ ಆಂಡ್ ಫ್ಯಾಮಿಲಿ ತಮ್ಮ ಅಸಲಿ ಮುಖ ತೋರಿಸಿ ರಾಣಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಆದ್ರೆ ಆಸ್ತಿ ಪತ್ರಕ್ಕೆ ರಾಣಿ ತಪ್ಪಾಗಿ ಸಹಿ ಹಾಕಿದ್ದಾಳೆ. ಈ ವಿಷಯ ಗೊತ್ತಾದ್ರೆ ಮುಂದೆ ಏನು ಆಗುತ್ತೆ ಎಂಬುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಮೂಡಿದೆ.

ಇದನ್ನೂ ಓದಿ: ಗೋವಾದ ಬೀಚ್‌ನಲ್ಲಿ ಇದ್ರೆ ನೆಮ್ದಿಯಾಗ್ ಇರ್ಬೇಕು.. ಹೇಟರ್ಸ್ ಇನ್ನೂ ಉರ್ಕೊಂಡು ಸಾಯಿರಿ ಎಂದ ಸೋನು ಗೌಡ!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved