MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • 'ಗೌರಿ ಧಾರಾವಾಹಿ' ಹೀರೋ ಆದ ಕರಣ್‌ ಕೆ ಆರ್‌ Amruthadhaare Serial ಬಿಡ್ತಾರಾ? ಅಲ್ಲಿ ಪಾರ್ಥನ ಸಾವಾಗಲಿದೆಯಾ?

'ಗೌರಿ ಧಾರಾವಾಹಿ' ಹೀರೋ ಆದ ಕರಣ್‌ ಕೆ ಆರ್‌ Amruthadhaare Serial ಬಿಡ್ತಾರಾ? ಅಲ್ಲಿ ಪಾರ್ಥನ ಸಾವಾಗಲಿದೆಯಾ?

'ಅಮೃತಧಾರೆ' ಧಾರಾವಾಹಿಯಲ್ಲಿ ಈಗ ಪಾರ್ಥ ಆಗಿ ಜನರ ಮನಸ್ಸು ಗೆದ್ದಿರುವ ನಟ ಕರಣ್‌ ಕೆ ಆರ್‌ ಅವರು ಈ ಹಿಂದೆ 'ಅರಸಿ' ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸುತ್ತಿದ್ದರು. ಈಗ ಅವರು ಮತ್ತೆ ಹೀರೋ ಆಗಿದ್ದಾರೆ. ಹೊಸ ಧಾರಾವಾಹಿಯ ಹೀರೋ ಆಗಿದ್ದು, ಪ್ರೋಮೋ ಕೂಡ ರಿಲೀಸ್‌ ಆಗಿದೆ. 

1 Min read
Padmashree Bhat
Published : Aug 11 2025, 12:05 PM IST| Updated : Aug 11 2025, 12:07 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : zee5

“ದುಡ್ಡಿದ್ರೆ ದುನಿಯಾ ಅಂದ್ಕೊಂಡಿರೋ ಗೌತಮಿ. ಸಂಬಂಧಗಳೇ ಸರ್ವಸ್ವ ಅಂತ ನಂಬಿರೋ ಗೌರಿ. ಅಕ್ಕತಂಗಿಯರ ಬದುಕಿನ ಹಾವು ಏಣಿ ಆಟದ ಕಥೆ. ಗೌರಿ, ಶೀಘ್ರದಲ್ಲಿ…” ಎಂದು ಜೀ ಪವರ್‌ ಟಿವಿಯು ತನ್ನ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದೆ. ಈ ಧಾರಾವಾಹಿಯನಲ್ಲಿ ನಟಿ ಸಿರಿ, ಕಾವ್ಯಶ್ರೀ ಗೌಡ ಅವರು ನಟಿಸುತ್ತಿದ್ದಾರೆ.

25
Image Credit : zee5

ಕಾವ್ಯಶ್ರೀ ಗೌಡ ಅವರು ಹಳ್ಳಿ ಹುಡುಗಿಯಾಗಿದ್ದು, ಅಕ್ಕನಿಗೋಸ್ಕರ ಏನು ಬೇಕಿದ್ರೂ ಮಾಡೋಕೆ ರೆಡಿ ಆಗುತ್ತಾಳೆ. ಆದರೆ ಅವಳ ಅಕ್ಕ ಮಾತ್ರ ಹಣಕ್ಕಾಗಿ ಏನು ಬೇಕಿದ್ರೂ ಮಾಡ್ತಾಳೆ. ಅವಳಿಗೆ ತಂಗಿ ಕಷ್ಟ ಗೊತ್ತೇ ಆಗೋದಿಲ್ಲ. ಶ್ರೀಮಂತ ಮನೆಯಲ್ಲಿ ಕಾವ್ಯಶ್ರೀ ಮನೆ ಕೆಲಸದವರ ಪಾತ್ರ ಮಾಡ್ತಿದ್ರೆ, ಅದೇ ಮನೆಗೆ ಅವಳ ಅಕ್ಕ ಸುಳ್ಳು ಹೇಳಿಕೊಂಡು ಸೊಸೆಯಾಗಿ ಎಂಟ್ರಿ ಕೊಡ್ತಾಳೆ. ಈ ಧಾರಾವಾಹಿ ಕಥೆ ಸಾಕಷ್ಟು ಕುತೂಹಲ ಮೂಡಿಸಿದೆ.

Related Articles

Related image1
Amruthadhaare Serial: ಭೂಮಿಕಾಳನ್ನು ಸಾಯಿಸಲು ಹೋಗಿ ಪಾರ್ಥನ ಜೀವ ಬಲಿ ಕೊಡ್ತಾಳಾ ಶಕುಂತಲಾ?
Related image2
Amruthadhaare Serial: ದೇವ್ರು ಒಂದು ಕೊಟ್ಟು ಇನ್ನೊಂದು ಕಿತ್ಕೋತಾನಂತೆ! ಮಗಳು ಸಿಕ್ಕಿ, ಈಗ ಭೂಮಿ ಸಾಯ್ತಾಳಾ?
35
Image Credit : zee5

ಈ ಧಾರಾವಾಹಿಯಲ್ಲಿ ಕಾವ್ಯಶ್ರೀ ಗೌಡಗೆ ಜೋಡಿಯಾಗಿ ಕರಣ್‌ ನಟಿಸುತ್ತಿದ್ದಾರೆ. ಜೀ ಕನ್ನಡ ಹಾಗೂ ಜೀ ಪವರ್‌ ಎರಡೂ ಕೂಡ ಒಂದೇ ಮಾಲೀಕತ್ವದ ವಾಹಿನಿಗಳು. ಜೀ ಪವರ್‌ ಹೊಸದಾಗಿ ಶುರುವಾಗುತ್ತಿದೆ. ಹೀಗಾಗಿ ಕರಣ್‌ ಅವರು ʼಗೌರಿʼ ಧಾರಾವಾಹಿಯಲ್ಲಿ ಹೀರೋ ಆಗಿದ್ದಾರೆ.

45
Image Credit : zee5

ಗೌರಿ ಧಾರಾವಾಹಿಯಲ್ಲಿ ಹೀರೋ ಆಗಿರೋದಿಕ್ಕೆ ಕರಣ್‌ ಅವರು ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸ್ತಾರಾ ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ. ಕನ್ನಡದಲ್ಲಿ ಹೀರೋ ಅಥವಾ ಹೀರೋಯಿನ್‌ ಆದವರು ಇನ್ನೊಂದು ಧಾರಾವಾಹಿಯಲ್ಲಿ ನಟಿಸೋದಿಲ್ಲ. ಇದು ಸದ್ಯದ ಅಲಿಖಿತ ನಿಯಮ. ಈ ಹಿಂದೆ ಓರ್ವ ನಟಿ ಏಕಕಾಲಕ್ಕೆ ಎರಡು ಮೂರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಒಂದೇ ಮಾಲೀಕತ್ವದ ಎರಡು ಧಾರಾವಾಹಿ ಆಗಿದ್ದಕ್ಕೆ ಎರಡೂ ಧಾರಾವಾಹಿಗಳಲ್ಲಿ ನಟಿಸಿದರೂ ಆಶ್ಚರ್ಯವಿಲ್ಲ.

55
Image Credit : zee5

ಅಮೃತಧಾರೆ ಧಾರಾವಾಹಿಯಲ್ಲಿ ಈಗ ಭೂಮಿ ಹೋಗುತ್ತಿರುವ ಕಾರ್‌ ಎಕ್ಸಿಡೆಂಟ್‌ ಆಗುತ್ತದೆಯೇ ಇಲ್ಲವೇ ಎಂದು ಕಾದು ನೋಡಬೇಕಿದೆ. ಆ ಕಾರ್‌ನಲ್ಲಿ ಪಾರ್ಥ ಡ್ರೈವರ್‌ ಆಗಿದ್ದನು. ಕಾರ್‌ ಹಿಂದಿನ ಸೀಟ್‌ನಲ್ಲಿ ಭೂಮಿಕಾ ಹಾಗೂ ಅವಳ ಮಗ ಆಕಾಶ್‌ ಇದ್ದನು. ಈಗ ಕಾರ್‌ ಎಕ್ಸಿಡೆಂಟ್‌ ಆಗಿ ಪಾರ್ಥ ಮಾತ್ರ ಸಾಯುತ್ತಾನಾ ಎಂದು ಕಾದು ನೋಡಬೇಕಿದೆ. ಈ ರೀತಿ ಪಾರ್ಥನ ಪಾತ್ರ ಅಂತ್ಯ ಮಾಡಿದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲದಿಂದ ಕೂಡಿವೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved