MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಜೊತೆಯಲ್ಲಿದ್ದೇ ಖೆಡ್ಡಾ ತೋಡಿದ ರಮೇಶ್; ನಿತ್ಯಾ-ಕರ್ಣ ಮದ್ವೆ ಹಿಂದಿನ ರೂವಾರಿ ಇವರೇ ನೋಡಿ!

ಜೊತೆಯಲ್ಲಿದ್ದೇ ಖೆಡ್ಡಾ ತೋಡಿದ ರಮೇಶ್; ನಿತ್ಯಾ-ಕರ್ಣ ಮದ್ವೆ ಹಿಂದಿನ ರೂವಾರಿ ಇವರೇ ನೋಡಿ!

Nitya Karna marriage: ಒಟ್ಟಾರೆ ಮದುವೆ ತಯಾರಿಗಳು ಸುಗಮವಾಗಿ ನಡೆಯುವ ಹೊತ್ತಿನಲ್ಲೇ ಭರ್ಜರಿ ಟ್ವಿಸ್ಟ್ ಎದುರಾಗಿದೆ. ಹೇಗಿದ್ದರೂ ನಿತ್ಯಾ ಮದುವೆಯಾಗುವುದು ಕರ್ಣನನ್ನ ಎಂಬುದು ಪ್ರೊಮೊ ನೋಡಿ ಗೊತ್ತಾಗಿದೆ. ಆದರೆ ಅದರ ಹಿಂದಿನ ರೂವಾರಿ ಯಾರು? ಎಂಬ ಸುಳಿವೀಗ ಸಿಕ್ಕಿದೆ. 

2 Min read
Ashwini HR
Published : Oct 04 2025, 11:25 AM IST
Share this Photo Gallery
  • FB
  • TW
  • Linkdin
  • Whatsapp
17
ವೀಕ್ಷಕರಿಗಿತ್ತು ಕುತೂಹಲ
Image Credit : Instagram

ವೀಕ್ಷಕರಿಗಿತ್ತು ಕುತೂಹಲ

'ಕರ್ಣ' ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಷ್ಟು ದಿನ ಕರ್ಣ ಯಾಕೆ ನಿಧಿ ಬಿಟ್ಟು ನಿತ್ಯಾ ಮದ್ವೆಯಾಗುತ್ತಿದ್ದಾನೆ ಅನ್ನೋ ಕುತೂಹಲ ವೀಕ್ಷಕರಿಗಿತ್ತು. ಆದರೀಗ ಅದಕ್ಕೆ ತಕ್ಕಮಟ್ಟಿಗೆ ಉತ್ತರ ಸಿಕ್ಕಂತಾಗಿದೆ. ಹೌದು, ನಿಧಿ-ಕರ್ಣನ ಜೊತೆಗೆ ಇದ್ದುಕೊಂಡೇ ಇಂಥ ಆಟವಾಡಿದವರು ಯಾರು?, ನಿಜಕ್ಕೂ ಮದ್ವೆ ನಿಲ್ಲೋಕೆ ಇವರೇ ಕಾರಣನಾ?. ಇಲ್ಲಿದೆ ನೋಡಿ ಮಾಹಿತಿ.

27
ನಿಧಿ ಮತ್ತು ಅಜ್ಜಿಗೆ ಖುಷಿ
Image Credit : Instagram

ನಿಧಿ ಮತ್ತು ಅಜ್ಜಿಗೆ ಖುಷಿ

ಸದ್ಯ ಧಾರಾವಾಹಿಯಲ್ಲಿ ನಿತ್ಯಾ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ನಿತ್ಯಾ ಮದುವೆಯಾಗಿ ಗಂಡನ ಮನೆಗೆ ತೆರಳುತ್ತಿರುವುದರಿಂದ ಆಕೆಯ ಕುಟುಂಬ ಅವಳ ಆಸೆ, ಆಕಾಂಕ್ಷೆಯನ್ನ ಪೂರೈಸಲು ಸಜ್ಜಾಗಿದೆ. ಕರ್ಣನ ಕಂಡರೇನೇ ನಿತ್ಯಾ ಉರಿದು ಬೀಳುವುದರಿಂದ ಆಕೆಗೆ ಗೊತ್ತಿಲ್ಲದ ಹಾಗೆ ಮನೆಗೆ ಬಂದು ಬಹಳ ಚೆನ್ನಾಗಿ ಮನೆಯನ್ನು ಸಿಂಗರಿಸುತ್ತಿದ್ದಾನೆ. ಇದನ್ನು ನೋಡಿ ನಿಧಿ ಮತ್ತು ಅಜ್ಜಿಗೆ ಖುಷಿಯಾಗಿದೆ.

Related Articles

Related image1
ಇಷ್ಟೆಲ್ಲಾ ಆಗ್ತಿದ್ರೂ 'ಕರ್ಣ' ಧಾರಾವಾಹಿಯಲ್ಲಿ ವೀಕ್ಷಕರಿಗೆ ಸಮಾಧಾನದ ವಿಷಯವೊಂದಿದೆ
Related image2
ಹಳೆಯ ಸಂಪ್ರದಾಯಕ್ಕೆ ಬ್ರೇಕ್; ಈ 3 ಸೀರಿಯಲ್‌ನಲ್ಲಿ ಮಿಂಚ್ತಿರೋದು ಅಮ್ಮನಲ್ಲ, ಅಪ್ಪಂದಿರು!
37
ಅದರ ಹಿಂದಿನ ರೂವಾರಿ ಯಾರು?
Image Credit : Instagram

ಅದರ ಹಿಂದಿನ ರೂವಾರಿ ಯಾರು?

ದೇವರ ಪೂಜೆ ಮುಗಿದ ನಂತರ ಕೆಲವೊಂದು ಶಾಸ್ತ್ರಕ್ಕೆ ಸೋದರ ಮಾವ ಇರಬೇಕು ಅಂದಾಗ ಬಹುಶಃ ಮಾರುವೇಷದಲ್ಲಿರುವ ಕರ್ಣನನ್ನೇ ನಿಧಿ ಕರೆದುಕೊಂಡು ಬರುವ ಹಾಗೆ ಕಾಣುತ್ತಿದೆ. ಒಟ್ಟಾರೆ ಮದುವೆ ತಯಾರಿಗಳು ಸುಗಮವಾಗಿ ನಡೆಯುವ ಹೊತ್ತಿನಲ್ಲೇ ಭರ್ಜರಿ ಟ್ವಿಸ್ಟ್ ಎದುರಾಗಿದೆ. ಹೇಗಿದ್ದರೂ ನಿತ್ಯಾ ಮದುವೆಯಾಗುವುದು ಕರ್ಣನನ್ನ ಎಂಬುದು ಪ್ರೊಮೊ ನೋಡಿ ಗೊತ್ತಾಗಿದೆ. ಆದರೆ ಅದರ ಹಿಂದಿನ ರೂವಾರಿ ಯಾರು? ಎಂಬ ಸುಳಿವೀಗ ಸಿಕ್ಕಿದೆ.

47
ಮುಂದಾಗುವ ಘಟನೆ ಬಗ್ಗೆ ಮುನ್ಸೂಚನೆ
Image Credit : Facebook

ಮುಂದಾಗುವ ಘಟನೆ ಬಗ್ಗೆ ಮುನ್ಸೂಚನೆ

ಹೌದು. ಅದು ಬೇರೆ ಯಾರೂ ಅಲ್ಲ. ಕರ್ಣನ ಅಪ್ಪ ರಮೇಶ್. ಇಷ್ಟು ದಿನ ಕರ್ಣ-ನಿಧಿ ಜೊತೆಯಲ್ಲಿ ಇದ್ದುಕೊಂಡೇ ಆಟವಾಡಿದವರು. ಈಗ "ಕರ್ಣನ ಮದುವೆ ನಿಧಿ ಜೊತೆಗಲ್ಲ, ನಿತ್ಯಾ ಜೊತೆಯಾಗುತ್ತದೆ" ಎಂದು ತನ್ನ ತಂಗಿ ಹಾಗೂ ಸ್ವಂತ ಮಗನ ಬಳಿ ರೂಂನಲ್ಲಿ ರಮೇಶ್   ಹೇಳುತ್ತಿದ್ದಾನೆ.  ಇದನ್ನು ಈಗ ಕರ್ಣನ ತಾಯಿ ಕದ್ದು ಕೇಳಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಈ ವಿಷಯವನ್ನ ಕರ್ಣನ ಬಳಿ ಹೇಳಿದ್ದಾರೆ. ನಿನ್ನಪ್ಪ ನಿತ್ಯಾ ಜೊತೆ ಮದುವೆ ಮಾಡಿಸಲು ಹೊರಟ್ಟಿದ್ದಾರೆಂದು. ಅದೇ ಸಮಯಕ್ಕೆ ಜೋಗತವ್ವ ಬಂದು ಕರ್ಣನ ಜೀವನದಲ್ಲಿ ಮುಂದಾಗುವ ಘಟನೆ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

57
 ಮೊದಲಿನಿಂದಲೂ ಕಿರಿ ಕಿರಿ
Image Credit : Instagram

ಮೊದಲಿನಿಂದಲೂ ಕಿರಿ ಕಿರಿ

ಅಲ್ಲಿಗೆ ಇಷ್ಟಕ್ಕೆಲ್ಲಾ ಕಾರಣ ರಮೇಶ್ ಎಂಬುದು ಈಗ ಸ್ಪಷ್ಟ. ನಿತ್ಯಾ ಮದುವೆಯಾಗುವ ಹುಡುಗ ಪುಕ್ಕಲು ಸ್ವಭಾವದವ. ಜೊತೆಗೆ ಆತನ ಮನೆಯವರು ಮದುವೆ ವಿಚಾರದಲ್ಲಿ ಮೊದಲಿನಿಂದಲೂ ಕಿರಿ ಕಿರಿ ಮಾಡುತ್ತಿದ್ದರು. ಹಾಗಾಗಿ ನಿತ್ಯಾ ಮದ್ವೆಯಾಗಬೇಕಾದ ಹುಡುಗ ಮದುವೆ ಮನೆಯಿಂದ ಕಾಣೆಯಾಗಲು ರಮೇಶ್ ಕುಮ್ಮಕ್ಕು ನೀಡಬಹುದು.

67
ನಿಜಕ್ಕೂ ವೀಕ್ಷಕರಿಗೆ ಶಾಕ್
Image Credit : Instagram

ನಿಜಕ್ಕೂ ವೀಕ್ಷಕರಿಗೆ ಶಾಕ್

ಇನ್ನೇನು ಅಪ್ಪ ರಮೇಶ್ ಒಳ್ಳೆಯವನಾಗುತ್ತಿದ್ದಾನೆ ಎಂದು ಜನರು ಅಂದುಕೊಳ್ಳುವಷ್ಟರಲ್ಲಿ ಈಗ ಮತ್ತೆ ತನ್ನ ಹಳೆಯ ವರಸೆ ತೋರಿಸಿರುವುದು ನಿಜಕ್ಕೂ ವೀಕ್ಷಕರಿಗೆ ಶಾಕ್ ಆಗಿದೆ. ಅದೇನೇ ಇರಲಿ, ಅಪ್ಪ ಮಾಡುತ್ತಿರುವ ದ್ರೋಹ ಕರ್ಣನ ಕಿವಿಗೆ ಬಿದ್ದ ಮೇಲೂ ಅವನಿಗೆ ನಿತ್ಯಾ ಜೊತೆ ಮದುವೆಯಾಗುತ್ತಿದೆ. ಬಹುಶಃ ಅಜ್ಜಿಯನ್ನ ತುಂಬಾ ಪ್ರೀತಿ ಮಾಡುವ ಕರ್ಣ ಅವರ ಮಾತಿಗೆ ಬೆಲೆ ಕೊಟ್ಟು ಮದುವೆಯಾಗುತ್ತಾನೆ ಎಂಬುದು ಹಲವರ ಅನಿಸಿಕೆ. ಇತ್ತ ನಿತ್ಯಾಗೂ ತನ್ನ ತಂಗಿ ನಿಧಿ ಪ್ರೀತಿ ಮಾಡುತ್ತಿರುವುದು ಕರ್ಣ ಎಂಬ ವಿಚಾರ ಗೊತ್ತಿರದಿರುವುದು ಸಹ ಒಂದು ರೀತಿ ಎಡವಟ್ಟಾಗಿದೆ.

77
ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ
Image Credit : Instagram

ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ

ಒಟ್ಟಾರೆ ನಿತ್ಯಾ-ಕರ್ಣನ ಮದುವೆ ಎಲ್ಲರಿಗೂ ಒಂದು ರೀತಿ ಬೇಸರ ತರಿಸಿದ್ದು, ನಾವೀಗ ಈ ಧಾರಾವಾಹಿ ನೋಡಲ್ಲ, ಬೇರೆ ಧಾರಾವಾಹಿಗೆ ಶಿಫ್ಟ್‌ ಆಗುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸಿರುವುದನ್ನ ನೀವೂ ನೋಡಬಹುದು.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ
ಕರ್ಣ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved