MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಮಿಥುನ ರಾಶಿಯ ಬಳಿಕ ಕಣ್ಮರೆಯಾಗಿದ್ದ ನಟ ಈಗ ರಾಘವೇಂದ್ರ ಸ್ವಾಮಿಗಳ ತಂದೆ… ಸಂಭ್ರಮದಲ್ಲಿ ಯದು ಶ್ರೇಷ್ಠ

ಮಿಥುನ ರಾಶಿಯ ಬಳಿಕ ಕಣ್ಮರೆಯಾಗಿದ್ದ ನಟ ಈಗ ರಾಘವೇಂದ್ರ ಸ್ವಾಮಿಗಳ ತಂದೆ… ಸಂಭ್ರಮದಲ್ಲಿ ಯದು ಶ್ರೇಷ್ಠ

ಮಿಥುನ ರಾಶಿ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರದ ಮೂಲಕ ಗಮನ ಸೆಳೆದ ನಟ ಯಶು ಶ್ರೇಷ್ಠ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಯದು ರಾಘವೇಂದ್ರ ಮಹಾತ್ಮೆ ಮೂಲಕ ರಾಯನ ತಂದೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ, ಈ ಕುರಿತು ಸಂಭ್ರಮ ಹಂಚಿಕೊಂಡ ಯದು.

1 Min read
Pavna Das
Published : Sep 20 2025, 04:01 PM IST
Share this Photo Gallery
  • FB
  • TW
  • Linkdin
  • Whatsapp
16
ಮಿಥುನ ರಾಶಿ ನಟ
Image Credit : Instagram

ಮಿಥುನ ರಾಶಿ ನಟ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಮಿಥುನ ರಾಶಿ ಧಾರಾವಾಹಿ ನೆನಪಿದ್ಯಾ? ಖಂಡಿತವಾಗಿಯೂ ನಿಮಗೆ ನೆನಪಿರುತ್ತೆ. ಈ ಧಾರಾವಾಹಿಯಲ್ಲಿ ಮಿಥುನ್ ತಮ್ಮ ಸಮರ್ಥ್ ಪಾತ್ರದಲ್ಲಿ ಯದು ಶ್ರೇಷ್ಠ ನಟಿಸಿದ್ದರು. ಆ ಸೀರಿಯಲ್ ಬಳಿಕ ನಟ ತೆರೆ ಮೇಲೆ ಕಾಣಿಸಿಕೊಂಡಿದ್ದು ಕಡಿಮೆ.

26
ನಟನೆಯಿಂದ ದೂರ ಇದ್ದ ಯದು ಶ್ರೇಷ್ಠ
Image Credit : Instagram

ನಟನೆಯಿಂದ ದೂರ ಇದ್ದ ಯದು ಶ್ರೇಷ್ಠ

ಮಿಥುನ ರಾಶಿ ಬಳಿಕ ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ತಮ್ಮ ದೀರ್ಘಕಾಲದ ಗೆಳತಿ ವಿಶಾಖ ಹೇಮಂತ್ ಎನ್ನುವವರ ಜೊತೆಗೆ ವೈವಾಹಿಕ ಜೀವನಕ್ಕೆ ಯದುಶ್ರೇಷ್ಠ ಕಾಲಿಟ್ಟಿದ್ದರು. ಯದುಶ್ರೇಷ್ಠ - ವಿಶಾಖ ವಿವಾಹ ಮಹೋತ್ಸವ ಫೋಟೊಗಳು ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗಿದ್ದವು.

Related Articles

Related image1
Sri Raghavendra Mahathme Serial: 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರಾಗಿ ನಟಿಸೋರು ಯಾರು?
Related image2
Sri Raghavendra Swamy Mahathme: ಶ್ರೀ ರಾಘವೇಂದ್ರ ಸ್ವಾಮಿ ಭಕ್ತರಿಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ವಾಹಿನಿ!
36
ರಾಘವೇಂದ್ರ ಮಹಾತ್ಮೆಯಲ್ಲಿ ಯದು
Image Credit : Instagram

ರಾಘವೇಂದ್ರ ಮಹಾತ್ಮೆಯಲ್ಲಿ ಯದು

ಅಭಿಮಾನಿಗಳು ಈ ನಟನನ್ನು ಮತ್ತೆ ತೆರೆ ಮೇಲೆ ನೋಡಲು ಕಾಯುತ್ತಿದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ಒಂದು ಅದ್ಭುತವಾದ ಪಾತ್ರ ನಿರ್ವಹಿಸುತ್ತಿರುವ ಸಂಭ್ರಮದಲ್ಲಿದ್ದಾರೆ ಯದು. ಹೌದು, ಯದು ಶ್ರೇಷ್ಠ ರಾಯರ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ.

46
ಧಾರಾವಾಹಿ ಭಾಗವಾಗಿರುವುದು ನನ್ನ ಸೌಭಾಗ್ಯ
Image Credit : Instagram

ಧಾರಾವಾಹಿ ಭಾಗವಾಗಿರುವುದು ನನ್ನ ಸೌಭಾಗ್ಯ

ಈ ಕುರಿತು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿರುವ ಯದು ಶ್ರೇಷ್ಠ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಕಥೆಯನ್ನು ಮನೆ ಮನಗಳಿಗೆ ತಲುಪಿಸುವ ಪವಿತ್ರ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಅದ್ಭುತ ತಂಡದ ಭಾಗವಾಗಿರುವುದು ನನ್ನ ಸುಕೃತ.

56
ರಾಯರ ತಂದೆಯ ಪಾತ್ರದಲ್ಲಿ ಯದು
Image Credit : Instagram

ರಾಯರ ತಂದೆಯ ಪಾತ್ರದಲ್ಲಿ ಯದು

ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ರಾಯರ ಪೂರ್ವಾಶ್ರಮದ ತಂದೆ, ವೀಣೆ ತಿಮ್ಮಣ್ಣ ಭಟ್ಟರ ಪಾತ್ರವನ್ನು ನಿರ್ವಹಿಸಲು ನನಗೆ ಅವಕಾಶ ನೀಡಿದ ನಿರ್ಮಾಪಕರಾದ ಶ್ರೀ ಮಹೇಶ್ ಸುಖಧರೆ, ನನ್ನ ಮೇಲೆ ಅಕ್ಕರೆಯ ನಂಬಿಕೆ ಇಟ್ಟು ಪ್ರೋತ್ಸಾಹಿಸಿದ ನಿರ್ದೇಶಕರಾದ ಶ್ರೀ ನವೀನ್ ಕೃಷ್ಣ ಅವರಿಗೆ ಹಾಗೂ ಸಂಪೂರ್ಣ ಜೀ ಕನ್ನಡ ಹಾಗೂ ರಾಘವೇಂದ್ರ ಮಹಾತ್ಮೆತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು.

66
ವೀಣೆ ತಿಮ್ಮಣ್ಣ ಭಟ್ಟರು
Image Credit : Instagram

ವೀಣೆ ತಿಮ್ಮಣ್ಣ ಭಟ್ಟರು

ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9ಕ್ಕೆ, ತಿಮ್ಮಣ್ಣ ಭಟ್ಟರ ಪಾತ್ರದಲ್ಲಿ ನಿಮ್ಮೆದುರು ಕಾಣಿಸಿಕೊಳ್ಳಲಿದ್ದೇನೆ. ನೋಡಿ, ಹರಸಿ, ಹಾರೈಸಿ! ನಿಮ್ಮೆಲ್ಲರ ಪ್ರೀತಿ ಆಶೀರ್ವಾದಗಳು ಸದಾ ನಮ್ಮ ತಂಡದ ಮೇಲಿರಲಿ ಎಂದು ಹೇಳಿದ್ದಾರೆ. ಈಗಾಗಲೇ ಧಾರಾವಾಹಿಯಲ್ಲಿ ತಿಮ್ಮಣ್ಣ ಭಟ್ಟರ ಪಾತ್ರ ಪ್ರಸಾರವಾಗುತ್ತಿದ್ದು, ಜನರು ಕೂಡ ತುಂಬಾನೆ ಇಷ್ಟ ಪಟ್ಟಿದ್ದಾರೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved