MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕರ್ಮ ಯಾರನ್ನೂ ಬಿಡಲ್ಲ ಗುರು; ಸಂತೋಷ್‌ಗೆ ಇದು ಆಗಬೇಕಾಗಿತ್ತು! ಯಾರಿಗೂ ಹೇಳ್ಬೇಡಿ ಕತೆಯಾಯ್ತಾ

ಕರ್ಮ ಯಾರನ್ನೂ ಬಿಡಲ್ಲ ಗುರು; ಸಂತೋಷ್‌ಗೆ ಇದು ಆಗಬೇಕಾಗಿತ್ತು! ಯಾರಿಗೂ ಹೇಳ್ಬೇಡಿ ಕತೆಯಾಯ್ತಾ

Zee Kannada Serial Lakshmi Nivasa serial update: ದುರಾಸೆಯಿಂದ ಪೋಷಕರಿಗೆ ಮೋಸ ಮಾಡಿದ ಸಂತೋಷ್‌ಗೆ ಕರ್ಮಫಲ ಸಿಕ್ಕಿದೆ. ಹಣ ಕಳೆದುಕೊಂಡು ಸಾಲ ಮಾಡಲು ಹೋದಾಗ, ತಾನು ಕಟ್ಟಿದ ಮನೆಯೇ ತನ್ನದಲ್ಲ ಎಂಬ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾನೆ. ಇದು ಕರ್ಮದ ಫಲ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

1 Min read
Mahmad Rafik
Published : Nov 03 2025, 08:16 AM IST
Share this Photo Gallery
  • FB
  • TW
  • Linkdin
  • Whatsapp
15
ಕರ್ಮ ಯಾರನ್ನೂ ಬಿಡಲ್ಲ
Image Credit : Zee Kannada

ಕರ್ಮ ಯಾರನ್ನೂ ಬಿಡಲ್ಲ

ಕರ್ಮ ಯಾರನ್ನೂ ಬಿಡಲ್ಲ ಎಂಬುದನ್ನು ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ತೋರಿಸಲಾಗಿದೆ. ದುಡಿಯದ ಅಪ್ಪ-ಅಮ್ಮ ಜೊತೆಯಲ್ಲಿದ್ದರೆ ಖರ್ಚು ಅಂತ ತಿಳಿದು ಇಬ್ಬರನ್ನ ಮನೆಯಿಂದ ಹೊರಗೆ ಹಾಕಿದ್ದನು. ಸುಳ್ಳು ಹೇಳಿ ಅಪ್ಪನಿಂದ ಹಣ ಪಡೆದುಕೊಂಡಿದ್ದ ಸಂತೋಷ್‌ಗೆ ಬಿಗ್‌ ಶಾಕ್ ಎದುರಾಗಿದೆ.

25
ದುರಾಸೆಯುಳ್ಳ ವ್ಯಕ್ತಿ
Image Credit : Zee Kannada

ದುರಾಸೆಯುಳ್ಳ ವ್ಯಕ್ತಿ

ದುರಾಸೆಯುಳ್ಳ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ಸಂತೋಷ್ ಪಾತ್ರದ ಮೂಲಕ ತೋರಿಸಲಾಗಿದೆ. ಬಡ್ಡಿ ಆಸೆಗಾಗಿ ಸಂತೋಷ್ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಇದೀಗ ಮನೆಯ ಮೇಲೆ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗಿದ್ದ ಸಂತೋಷ್‌ಗೆ ಬರಸಿಡಿಲು ಬಡಿದಿದೆ.

Related Articles

Related image1
ಓ ದೇವ್ರೇ ಇದು ಮಾತ್ರ ಸುಳ್ಳಾಗದಿರಲಿ: ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಪ್ರಾರ್ಥನೆ
Related image2
ಲಕ್ಷ್ಮೀ ನಿವಾಸ, ಅಣ್ಣಯ್ಯ ಸೀರಿಯಲ್‌ನಲ್ಲಿ ಚಮತ್ಕಾರ; ಒಂದು ಬದಲಾವಣೆಗೆ ವೀಕ್ಷಕರು ಫುಲ್ ಖುಷ್!
35
ಸಂತೋಷ್ ಮಾಡಿಕೊಂಡ ಎಡವಟ್ಟು
Image Credit : Zee Kannada

ಸಂತೋಷ್ ಮಾಡಿಕೊಂಡ ಎಡವಟ್ಟು

ಬ್ಯಾಂಕ್ ಅಧಿಕಾರಿಗಳು ಮನೆಯ ದಾಖಲೆಗಳನ್ನು ಪರಿಶೀಲಿಸಿದಾಗ ಸಂತೋಷ್ ಮಾಡಿಕೊಂಡ ಎಡವಟ್ಟು ಗಮನಕ್ಕೆ ಬಂದಿದೆ. ಮನೆಯನ್ನು ಕಟ್ಟಿರೋದು ಬೇರೆಯವರ ನಿವೇಶನದಲ್ಲಿ ಅನ್ನೋ ಸತ್ಯ ಸಂತೋಷ್‌ಗೆ ಗೊತ್ತಾಗಿದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಸಂತೋಷ್‌ಗೆ ಬ್ಯಾಂಕ್ ಅಧಿಕಾರಿಗಳು ಹೇಳಿದ ಮಾತು ಕೇಳಿ ದಿಗ್ಬ್ರಮೆಗೊಂಡಿದ್ದಾನೆ.

45
 ಹಣವೂ ಹೋಯ್ತು, ಕಟ್ಟಿಸಿದ ಮನೆಯೂ ಕೈ ತಪ್ಪಿ ಹೋಗುವ ಆತಂಕ
Image Credit : Zee Kannada

ಹಣವೂ ಹೋಯ್ತು, ಕಟ್ಟಿಸಿದ ಮನೆಯೂ ಕೈ ತಪ್ಪಿ ಹೋಗುವ ಆತಂಕ

ಇತ್ತ ಹಣವೂ ಹೋಯ್ತು, ಕಟ್ಟಿಸಿದ ಮನೆಯೂ ಕೈ ತಪ್ಪಿ ಹೋಗುವ ಆತಂಕದಲ್ಲಿ ಸಂತೋಷ್ ಇದ್ದಾನೆ. ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿದ ನೆಟ್ಟಿಗರು ಇದಪ್ಪಾ ವರಸೆ ಎಂದು ಕಮೆಂಟ್ ಮಾಡಿದ್ದಾರೆ. ಕರ್ಮ ಯಾರನ್ನು ಬಿಡಲ್ಲ. ಅಪ್ಪ ಅಮ್ಮನಿಗೆ ಮೋಸ ಮಾಡಿದಕ್ಕೆ ಸರಿಯಾಗೇ ಆಗ್ತಿದೆ ಎಂದು ಹೇಳಿದ್ದಾರೆ.

55
ಯಾರಿಗೂ ಹೇಳಬೇಡಿ ಸಿನಿಮಾ
Image Credit : Zee Kannada

ಯಾರಿಗೂ ಹೇಳಬೇಡಿ ಸಿನಿಮಾ

ಸಂತೋಷ್‌ ಕಥೆ ಅನಂತ್‌ ನಾಗ್ ನಟನೆಯ ಯಾರಿಗೂ ಹೇಳಬೇಡಿ ಸಿನಿಮಾದಂತಾಗಿದೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಕರ್ಮವೆಂಬುದು ಯಾರನ್ನು ಬಿಡುವುದಿಲ್ಲ ಅದಕ್ಕೆ ಬಡವ ಶ್ರೀಮಂತ ಬಲ್ಲಿದನೆಂಬ ಬೇಧ ,ಬಾವ ಗೊತ್ತಿಲ್ಲ. ತಂದೆ ತಾಯಿಯ ಶಾಪ ನಿನಗೆ ತಟ್ಟಿದೆ, ಮಗನೆ ನಿನಗೆ ಅನುಭವಿಸು ಎಂದು ಶಪಿಸಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved