MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಧ್ರುವಂತ್‌ ಡ್ರಾಮಾ ಬಯಲು ಮಾಡಿದ ಕಾಕ್ರೋಚ್‌ ಸುಧಿ; Mallamma ಈಗಲಾದರೂ ಎಚ್ಚೆತ್ತುಕೊಳ್ತಾರಾ?

BBK 12: ಧ್ರುವಂತ್‌ ಡ್ರಾಮಾ ಬಯಲು ಮಾಡಿದ ಕಾಕ್ರೋಚ್‌ ಸುಧಿ; Mallamma ಈಗಲಾದರೂ ಎಚ್ಚೆತ್ತುಕೊಳ್ತಾರಾ?

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಯಾರು ಇನ್ನು ಆಟವನ್ನೇ ಶುರು ಮಾಡಿಲ್ಲ ಎಂದು ಕಿಚ್ಚ ಸುದೀಪ್‌ ಪ್ರಶ್ನೆ ಮಾಡಿದ್ದಾರೆ. ಆಗ ಎಲ್ಲರೂ ಮಲ್ಲಮ್ಮ ಅವರ ಆಟಕ್ಕೆ ಧ್ರುವಂತ್‌ ಮುಳ್ಳಾಗಿದ್ದಾರೆ ಎಂದು ಹೇಳಿದ್ದಾರೆ.  

1 Min read
Padmashree Bhat
Published : Oct 26 2025, 08:26 AM IST
Share this Photo Gallery
  • FB
  • TW
  • Linkdin
  • Whatsapp
15
ಆಟ ಶುರು ಮಾಡದ ಮಲ್ಲಮ್ಮ
Image Credit : Colors Kannada

ಆಟ ಶುರು ಮಾಡದ ಮಲ್ಲಮ್ಮ

ಆಗ ಗಿಲ್ಲಿ ನಟ ಅವರು ಕೂಡ ಮಲ್ಲಮ್ಮ, ಇನ್ನು ಆಟ ಶುರು ಮಾಡಿಲ್ಲ ಎಂದು ಹೇಳುತ್ತಾರೆ. ಹೀಗೆ ಪ್ರತಿಯೊಬ್ಬರು ಅವರವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೆ ಕಾಕ್ರೋಚ್‌ ಸುಧಿ ಮಾತ್ರ, ಧ್ರುವಂತ್‌ ಬಗ್ಗೆ ದೊಡ್ಡ ದೂರು ಹೇಳಿದ್ದಾರೆ.

25
ಕಾಕ್ರೋಚ್ ಸುಧಿ ಬಯಲು ಮಾಡಿದ್ದೇನು?
Image Credit : Colors Kannada

ಕಾಕ್ರೋಚ್ ಸುಧಿ ಬಯಲು ಮಾಡಿದ್ದೇನು?

ಕಾಕ್ರೋಚ್ ಸುಧಿ ಅವರು, “ಮಲ್ಲಮ್ಮ ಮುಗ್ಧೆ ಇರಬಹುದು, ಆದರೆ ಒಳ್ಳೆಯ ಆಟಗಾರ್ತಿ. ನಾನು ಟಿಫನ್‌ ಮಾಡಲು ಚಮಚ ಬೇಕು ಎಂದರೆ ಧ್ರುವಂತ್‌ಗೆ ಯಾರೋ ಚಮಚ ಎಂದು ಅನಿಸುತ್ತದೆ. ಮಲ್ಲಮ್ಮ ಇಲ್ಲಿ ಇಲ್ಲ ಅಂದ್ರೆ, ಮಲ್ಲಮ್ಮ ಇಲ್ಲ, ನಾನು ಆಟ ಆಡಲ್ಲ, ಹೊರಗಡೆ ಹೋಗ್ತೀನಿ ಅಂತ ಹೇಳ್ತಾರೆ, ಧ್ರುವಂತ್‌ ಎಮೋಶನಲ್‌ ಡ್ರಾಮಾ ಅನಿಸ್ತಿದೆ, ನಾಟಕ ಅನಿಸ್ತಿದೆ. ಆಚೆ ಮಲ್ಲಮ್ಮ, ಧ್ರುವಂತ್‌ ಸಿಕ್ಕಿದ್ರೆ ಈ ರೇಂಜ್‌ಗೆ ಆಡ್ತಿರಲಿಲ್ಲ ಅನಿಸುತ್ತದೆ” ಎಂದು ಹೇಳಿದ್ದಾರೆ.

Related Articles

Related image1
BBK 12: ವೀಕ್ಷಕರ ಮನಸ್ಸು ಕದ್ದಿರೋ ಸೂರಜ್‌ ಸಿಂಗ್‌ ವಯಸ್ಸೆಷ್ಟು? ಹೊರಗಡೆ ಗರ್ಲ್‌ಫ್ರೆಂಡ್‌ ಇದ್ದಾರಾ?
Related image2
BBK 12: ಸಿಕ್ಕಾಪಟ್ಟೆ ಫೈಟ್‌ ಕೊಟ್ರೂ ಕೂಡ ಈ ವಾರ ಮನೆಯಿಂದ ಹೊರಗಡೆ ಹೋಗೋರು ಯಾರು?
35
ಬಕೆಟ್‌ ಹಿಡಿದು ಜೀವನ ಮಾಡಬೇಡಿ
Image Credit : Colors Kannada

ಬಕೆಟ್‌ ಹಿಡಿದು ಜೀವನ ಮಾಡಬೇಡಿ

“ಬಿಗ್‌ ಬಾಸ್‌ ಬಕೆಟ್‌ ಕೊಟ್ಟಿರೋದು ಸ್ನಾನ ಮಾಡೋಕೆ, ಬಕೆಟ್‌ ತಗೊಂಡು ಇಡೀ ಜೀವನ ಮಾಡಿ ಅಂತ ಕೊಟ್ಟಿಲ್ಲ” ಎಂದು ಕಾಕ್ರೋಚ್‌ ಸುಧಿ ಹೇಳಿದ್ದಾರೆ. ಈ ಮಾತುಗಳು ಧ್ರುವಂತ್‌ಗೆ ಬೇಸರ ತಂದಿದೆ.

45
ಮೆಟ್ಟಿನಲ್ಲಿ ಹೊಡೆದಂಗಾಯ್ತು
Image Credit : Colors Kannada

ಮೆಟ್ಟಿನಲ್ಲಿ ಹೊಡೆದಂಗಾಯ್ತು

ಹಾರ್ಟ್‌ ಯಾರಿಗೆ ಕೊಡಬೇಕು ಎಂದಾಗ ಮಲ್ಲಮ್ಮ ಸೂರಜ್‌ ಹೆಸರು ಹೇಳಿದರು, ನನಗೆ ಮೆಟ್ಟಿನಲ್ಲಿ ಹೊಡೆದಹಾಗೆ ಆಯ್ತು ಎಂದು ಧ್ರುವಂತ್‌ ಹೇಳಿಕೊಂಡು ಅತ್ತಿದ್ದರು. ಅದಾದ ಬಳಿಕ ಅವರು ಮಲ್ಲಮ್ಮ ಮಡಿಲಲ್ಲಿ ಮಲಗಿದ್ದರು. ಒಟ್ಟಿನಲ್ಲಿ ಧ್ರುವಂತ್‌ ಒಂದು ನಿರ್ಧಾರಕ್ಕೂ ಬದ್ಧರಲ್ಲ ಎನ್ನಲಾಗ್ತಿದೆ.

55
ಧ್ರುವಂತ್‌ ಏನ್‌ ಮಾಡ್ತಾರೆ?
Image Credit : Colors Kannada

ಧ್ರುವಂತ್‌ ಏನ್‌ ಮಾಡ್ತಾರೆ?

ಈ ಬಾರಿ ಇಷ್ಟೆಲ್ಲ ಆರೋಪ ಬಂದಿರೋದಿಕ್ಕೆ ಧ್ರುವಂತ್‌ ಅವರು ಮುಂದಿನ ದಿನಗಳಲ್ಲಿ ಹೇಗೆ ಇರಲಿದ್ದಾರೆ? ಯಾವ ರೀತಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ. ವೈಲ್ಡ್‌ಕಾರ್ಡ್‌ ಎಂಟ್ರಿ ಆಗುತ್ತಿದ್ದಂತೆ, ಆಟದ ಸ್ವರೂಪ ಸ್ವಲ್ಪ ಬದಲಾದ ಹಾಗಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಟಿವಿ ಶೋ
ಕಲರ್ಸ್ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved