MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • "ಇದ್ಯಾಕೋ ಅತಿಯಾಯ್ತು"...ಭೂಮಿಕಾ ಎಷ್ಟೇ ಚೆನ್ನಾಗಿ ಅಭಿನಯಿಸಿದ್ರೂ ಈ ವಿಚಾರಕ್ಕೆ ರಗಡ್ ಆದ ಪ್ರೇಕ್ಷಕ ಮಹಾಪ್ರಭು

"ಇದ್ಯಾಕೋ ಅತಿಯಾಯ್ತು"...ಭೂಮಿಕಾ ಎಷ್ಟೇ ಚೆನ್ನಾಗಿ ಅಭಿನಯಿಸಿದ್ರೂ ಈ ವಿಚಾರಕ್ಕೆ ರಗಡ್ ಆದ ಪ್ರೇಕ್ಷಕ ಮಹಾಪ್ರಭು

Amruthadhaare Serial: ಇದುವರೆಗೆ ಧಾರಾವಾಹಿಯಲ್ಲಿ ಏನಾದರೊಂದು ಟ್ವಿಸ್ಟ್ ನೋಡುತ್ತಲೇ ಬಂದಿರುವ ಪ್ರೇಕ್ಷಕರು ಈಗ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ವಿಶೇಷವಾಗಿ ಭೂಮಿಕಾ ಪಾತ್ರದ ಮೇಲೆ.

2 Min read
Author : Ashwini HR
Published : Sep 19 2025, 05:14 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ತನ್ನದೇ ಆದ ವೀಕ್ಷಕರ ಬಳಗವನ್ನು ಹೊಂದಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ, ಗೌತಮ್ ಪ್ರೇಕ್ಷಕರಿಗೆ ಹತ್ತಿರವಾದ ಪಾತ್ರಗಳು. ಆದರೆ ಇದುವರೆಗೆ ಧಾರಾವಾಹಿಯಲ್ಲಿ ಏನಾದರೊಂದು ಟ್ವಿಸ್ಟ್ ನೋಡುತ್ತಲೇ ಬಂದಿರುವ ಪ್ರೇಕ್ಷಕರು ಈಗ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ವಿಶೇಷವಾಗಿ ಭೂಮಿಕಾ ಪಾತ್ರದ ಮೇಲೆ.

26
Image Credit : Instagram

ಸದ್ಯ ಧಾರಾವಾಹಿಯಲ್ಲಿ ಭೂಮಿಕಾ ಮನೆ ಬಿಟ್ಟು ಬಿಂದ ಮೇಲೆ, ಗೌತಮ್‌ನಿಂದ ದೂರವಾಗಿ ಐದು ವರ್ಷಗಳ ನಂತರ ಏನಾಯ್ತು ಎಂಬುದನ್ನು ತೋರಿಸಲಾಗುತ್ತಿದೆ. ಭೂಮಿಕಾ ಮಗ ಈಗ ದೊಡ್ಡವನಾಗಿದ್ದು, ಮಲ್ಲಿ ಕೂಡ ಭೂಮಿಯ ಜೊತೆಯಲ್ಲೇ ಇದ್ದಾಳೆ. ಜೀವನ ಸಾಗಿಸಲು ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಭೂಮಿಕಾ ಮನಸ್ಸಿನಲ್ಲಿ ಇಂದಿಗೂ ಗೌತಮ್ ಇದ್ದರೂ, ಆಕೆ ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿಲ್ಲ. ಸ್ವತಃ ಗೌತಮ್  ಮುಂದೆ. ಅದೇ ವೀಕ್ಷಕರಿಗೆ ಈಗ ದೊಡ್ಡ ತಲೆನೋವಾಗಿದೆ.

Related Articles

Related image1
ಯಾರೂ ಊಹಿಸದ ರೋಚಕ ತಿರುವಿನಲ್ಲಿ ಅಮೃತಧಾರೆ... ಡ್ರೈವರ್ ಆದ ಕೋಟ್ಯಾಧಿಪತಿ ಗೌತಮ್‌ ದಿವಾನ್… ಭೂಮಿಕಾ ಏನಾದ್ಲು?
Related image2
Amruthadhaare Serial: ಅಮೃತಧಾರೆ ವೀಕ್ಷಕರು ಬಯಸಿದ ಘಳಿಗೆ ಬಂದೇ ಬಿಡ್ತು, ಉಲ್ಟಾ ಹೊಡೆದರೆ ಡೈರೆಕ್ಟರ್‌ ಕಥೆ ಅಷ್ಟೇ
36
Image Credit : Instagram

ಹೌದು, ಅಂತೂ ಕುಶಾಲನಗರದಲ್ಲಿ ವಾಸಿಸುತ್ತಿರುವ ಭೂಮಿಕಾಳನ್ನು ಈಗ ಗೌತಮ್ ಭೇಟಿಯಾಗಿದ್ದಾಗಿದೆ. ಇನ್ನೇನು ಬಿಡು ನಾಯಕ-ನಾಯಕಿ ಒಂದಾದರಲ್ಲ ಅನ್ನುವ ಹೊತ್ತಿಗೆ ಭೂಮಿಕಾ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತೆ ಶಕುಂತಲಾ ಬೆದರಿಕೆ ಹಾಕಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಗೌತಮ್‌ನಿಂದ ದೂರವಿರುವ ಬಗ್ಗೆ ಮಾತನಾಡಿದ್ದಾಳೆ. ಇದೇ ಸಮಯಕ್ಕೆ ಗೌತಮ್ ಮಗನನ್ನು ನೋಡುವ ಆಸೆಯಿಂದ ಭೂಮಿ ಮನೆಗೆ ಬಂದಿದ್ದಾನೆ.

46
Image Credit : Instagram

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೌತಮ್‌ ಈಗಾಗಲೇ ಮಗನನ್ನು ಮಾತನಾಡಿಸಿದ್ದಾನೆ, ಜೊತೆಗೆ ಐಸ್‌ಕ್ರೀಂ ತಿಂದಿದ್ದಾನೆ. ಆದರೆ ಆತನೇ ತನ್ನ ಮಗ ಎಂಬುದು ಗೊತ್ತಾಗಿಲ್ಲ. ಹಾಗಾಗಿ ಮಗನನ್ನು ನೋಡುವ ಆಸೆಯಿಂದ ಗೌತಮ್ ಮನೆಗೆ ಬಂದರೆ ಬಹುಶಃ ಭೂಮಿಕಾ ಅದಕ್ಕೂ ಅವಕಾಶ ಮಾಡಿಕೊಡುವ ಹಾಗೆ ಕಾಣುತ್ತಿಲ್ಲ.

56
Image Credit : facebook

ಇದನ್ನೆಲ್ಲಾ ನೋಡಿ ಬೇಸರಗೊಂಡ ವೀಕ್ಷಕರೊಬ್ಬರು " ಒಬ್ಬ ರಾಜಕಾರಣಿಗೇ ಅವಶ್ಯಕತೆಗಿಂತ ಹೆಚ್ಚು ನೀತಿ ಬೋಧನೆ ಮಾಡಲು, ಅವನನ್ನು ಎದುರು ಹಾಕಿಕೊಳ್ಳಲು ಭೂಮಿಕಾಗೆ ಧೈರ್ಯ, ತಾಕತ್ತು ಇದೆ. ಆದರೆ, ವರ್ಷಗಳ ಹಿಂದೆ ಶಕುಂತಲಾ ಹಾಕಿದ್ದ ಬೆದರಿಕೆಯ ವಿಷಯವನ್ನು ಈಗಲೂ ಗೌತಮನ ಹತ್ತಿರ ಹೇಳುವ ಧೈರ್ಯ ಭೂಮಿಕಾಗೆ ಇಲ್ಲ.ಇಷ್ಟು ವರ್ಷಗಳ ಬಳಿಕ ಭೇಟಿಯಾದಾಗ, ಯೋಗಕ್ಷೇಮ ವಿಚಾರಿಸುವ ಸೌಜನ್ಯವೂ ಇಲ್ಲ. ಅಷ್ಟು ಸಾಲದು ಅಂತ ಏನೂ ತಪ್ಪು ಮಾಡದಿರುವ ಗೌತಮನಿಗೆ ಬೈಯ್ದು ಅವಮಾನಿಸುವುದು ಬೇರೆ. ಯಾವುದಾದರೂ ಅರ್ಥ, ತರ್ಕ ಇದೆಯಾ?ಹಾಗಾಗಿ, ಭೂಮಿಕಾ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ, ಆಸ್ವಾದಿಸಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ.

66
Image Credit : Facebook

ಅಷ್ಟೇ ಅಲ್ಲ, "ಇದ್ಯಾಕೋ ಅತಿಯಾಯ್ತು" "ಭೂಮಿಕಾಗೆ ಎರಡು ಭಾರಿಸಬೇಕು, ಅತಿಯಾಗಿ ಆಡ್ತಾಳೆ. ಎಲ್ಲ ವಿಚಾರ ಮಾತಾಡಿ , ಹೇಗಿದ್ದೀರ ಅಂತ ಕೇಳೋ ಮನಸ್ಸಿಲ್ವಾ. ಬೇರೆಯವರಿಗೆ ಕ್ಲಾಸ್ ತಗೊಳ್ತಾಳೆ, ತಾನು ಮಾತ್ರ ಅರ್ಥ ಮಾಡ್ಕೋತಿಲ್ಲ". "ಭೂಮಿಕಾ ನಿನ್ನ ಪಾತ್ರವನ್ನು ನಿರ್ದೇಶಕ taken for granted ರೀತಿ ಮಾಡಿದ್ದಾರೆ... ಒಮ್ಮೆ ಬಹಳ ಜ್ಞಾನಿ ರೀತಿ ಮತ್ತೊಮ್ಮೆ ತಲೆ ಖಾಲಿ...". "ಒಂದು ಮುಗ್ಸಿ ಇಲ್ಲ ಅಂದ್ರೆ ಸಾಯಿಸಿ ಏನಿದು ಪದೇ ಪದೇ ಗೋಳು" ಅಂತೆಲ್ಲಾ ವೀಕ್ಷಕರು ಭೂಮಿಕಾ ಮೇಲೆ ಮುನಿಸು ತೋರಿರುವುದನ್ನು ನೀವಿಲ್ಲಿ ನೋಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಅಮೃತಧಾರೆ
ಕನ್ನಡ ಧಾರಾವಾಹಿ
ಟಿವಿ ಶೋ

Latest Videos
Recommended Stories
Recommended image1
Karna Serial ನಟ ಕಿರಣ್​ ರಾಜ್ ​ಬಂಪರ್​ ಆಫರ್​: ಸುಲಭದ ರೆಸಿಪಿ ಹೇಳಿ ಸರ್​ಪ್ರೈಸ್​ ಪಡೆಯಿರಿ- ಡಿಟೇಲ್ಸ್​ ಇಲ್ಲಿದೆ
Recommended image2
ಪ್ಯಾನ್‌ ಇಂಡಿಯಾ ನಟಿಯಾದ್ರೂ ಸ್ನೇಹ ಮರೆತಿಲ್ಲ; ಕನ್ನಡ ಸೀರಿಯಲ್‌ ನಟಿಯನ್ನು ಫಾಲೋ ಮಾಡ್ತಿರೋ Rashmika Mandanna
Recommended image3
Photo: ದೀಪಿಕಾ ದಾಸ್‌ ಜನ್ಮದಿನ; ಮುತ್ತಿನಂಥ ಪತ್ನಿಗೆ ಬಂಗಾರ, ವಜ್ರದ ಗಿಫ್ಟ್‌ ಕೊಟ್ಟ ಪತಿ ದೀಪಕ್‌ ಗೌಡ
Related Stories
Recommended image1
ಯಾರೂ ಊಹಿಸದ ರೋಚಕ ತಿರುವಿನಲ್ಲಿ ಅಮೃತಧಾರೆ... ಡ್ರೈವರ್ ಆದ ಕೋಟ್ಯಾಧಿಪತಿ ಗೌತಮ್‌ ದಿವಾನ್… ಭೂಮಿಕಾ ಏನಾದ್ಲು?
Recommended image2
Amruthadhaare Serial: ಅಮೃತಧಾರೆ ವೀಕ್ಷಕರು ಬಯಸಿದ ಘಳಿಗೆ ಬಂದೇ ಬಿಡ್ತು, ಉಲ್ಟಾ ಹೊಡೆದರೆ ಡೈರೆಕ್ಟರ್‌ ಕಥೆ ಅಷ್ಟೇ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved