MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial:‌ ದಿಯಾ ಜಯದೇವ್‌ನನ್ನು ಮದುವೆ ಆದ ಉದ್ದೇಶವೇ ಬೇರೆ; ಕಹಿಸತ್ಯ ಬಯಲು!

Amruthadhaare Serial:‌ ದಿಯಾ ಜಯದೇವ್‌ನನ್ನು ಮದುವೆ ಆದ ಉದ್ದೇಶವೇ ಬೇರೆ; ಕಹಿಸತ್ಯ ಬಯಲು!

ಅಮೃತಧಾರೆ ಧಾರಾವಾಹಿಯಲ್ಲಿ ಬಂಗಾರದಂಥ ಮಲ್ಲಿಯನ್ನು ಬಿಟ್ಟು ಜಯದೇವ್‌ ಇನ್ನೊಂದು ಮದುವೆ ಆಗಿದ್ದಾನೆ. ದಿಯಾ ಉದ್ದೇಶ ಏನು? ದಿಯಾ ನನ್ನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದಾಳಾ ಅಂತ ಅವನು ಎಂದಿಗೂ ತಿಳಿದುಕೊಳ್ಳಲೇ ಇಲ್ಲ. ಈಗ ಅದೇ ಅವನಿಗೆ ಮುಳುವಾಗಲಿದೆ. 

1 Min read
Padmashree Bhat
Published : Sep 20 2025, 10:46 PM IST
Share this Photo Gallery
  • FB
  • TW
  • Linkdin
  • Whatsapp
15
ವಾರ್ನ್‌ ಮಾಡಿದ್ದರೂ ಜಯದೇವ್‌ ಹಿಂದೆ ಬಿದ್ದಳು
Image Credit : zee5

ವಾರ್ನ್‌ ಮಾಡಿದ್ದರೂ ಜಯದೇವ್‌ ಹಿಂದೆ ಬಿದ್ದಳು

ದಿಯಾಗೆ ಈ ಮನೆ ಆಳಬೇಕು ಎನ್ನೋ ಉದ್ದೇಶ ಇತ್ತು. ಹೀಗಾಗಿ ಅವಳು ಜಯದೇವ್‌ನನ್ನು ಪ್ರೀತಿ ಮಾಡೋ ನಾಟಕ ಮಾಡಿದಳು. ಸಾಕಷ್ಟು ಬಾರಿ ಗೌತಮ್‌ ವಾರ್ನ್‌ ಮಾಡಿದರೂ ಅವಳು ಕೇಳದೆ, ಜಯದೇವ್‌ ಹಿಂದೆ ಬಿದ್ದಳು.

25
ಜಯದೇವ್‌ ಹಣೆಬರಹ ಗೊತ್ತಿತ್ತು
Image Credit : zee5

ಜಯದೇವ್‌ ಹಣೆಬರಹ ಗೊತ್ತಿತ್ತು

ನನ್ನ ಬಿಟ್ಟ ಹಾಗೆ ನಿಮ್ಮನ್ನು ಬಿಡ್ತಾರೆ, ನೋಡ್ತಿರಿ ಅಂತ ಮಲ್ಲಿ, ದಿಯಾಗೆ ವಾರ್ನ್‌ ಮಾಡಿದ್ದಳು. ಅದನ್ನು ಅವಳು ಕೇಳಲಿಲ್ಲ. ಮದುವೆ ಆಗಿರೋ ಜಯದೇವ್‌ ತನ್ನ ಹಿಂದೆ ಬಿದ್ದಿದ್ದಾನೆ, ಮಲ್ಲಿಯನ್ನು ಮದುವೆ ಆಗೋ ಮುನ್ನ ಅವನು ಮಲ್ಲಿಯನ್ನು ಪ್ರಗ್ನೆಂಟ್‌ ಮಾಡಿದ್ದ ಎನ್ನೋದು ಗೊತ್ತಿದ್ದೂ ಕೂಡ, ದಿಯಾ ಅವನನ್ನು ಮದುವೆ ಆದಳು.

Related Articles

Related image1
Amruthadhaare Serial: ದಿಯಾ ಬೇಬಿ ಅಸಲಿ ಮುಖ ಬಯಲಾಯ್ತು! ಜಯದೇವ್‌ಗೆ ಈಗ ಐತಿ ಮಾರಿಹಬ್ಬ!
Related image2
Amruthadhaare Serial: ಬೇಡ ಎಂದ್ರೂ ಹೀಗೆ ಮಾಡಿದ್ರಲ್ರೋ.. ಅಮೃತಘಳಿಗೆಗೆ ಕಾಯ್ತಿದ್ದ ವೀಕ್ಷಕರಿಗೆ ನಿರಾಸೆ..
35
ದುಡ್ಡು ಖಾಲಿ ಮಾಡ್ತಿರೋ ಜಯದೇವ್‌, ಶಕುಂತಲಾ
Image Credit : zee5

ದುಡ್ಡು ಖಾಲಿ ಮಾಡ್ತಿರೋ ಜಯದೇವ್‌, ಶಕುಂತಲಾ

ಇನ್ನು ಶಕುಂತಲಾ ಹಾಗೂ ಜಯದೇವ್‌ ಮಾತ್ರ ಸ್ವಲ್ಪವೂ ದುಡಿಯದೆ, ಇರೋ ದುಡ್ಡನ್ನೆಲ್ಲ ಖಾಲಿ ಮಾಡುತ್ತಾರೆ. ನೀರು ಕೂಡ ಖಾಲಿಯಾಗುತ್ತದೆ ಎಂದು ತಿಳಿದು, ಖರ್ಚು ಮಾಡೋದುಂಟು. ಆದರೆ ಇಲ್ಲಿ ಅವರು ಬಟ್ಟೆ ಖರೀದಿ ಮಾಡುವಾಗ ಎಷ್ಟು ಬೆಲೆ ಆಗತ್ತೆ ಅಂತ ಕೇಳದೆ ಖರೀದಿ ಮಾಡ್ತಾರೆ.

45
ಪಾರ್ಥ, ಅಪೇಕ್ಷಾಗೆ ಬೇಸರ
Image Credit : zee5

ಪಾರ್ಥ, ಅಪೇಕ್ಷಾಗೆ ಬೇಸರ

ಈಗೊಂದು ಪಾರ್ಟಿ ಇಟ್ಟಿದ್ದಾರೆ. ಅದಕ್ಕೋಸ್ಕರ ಶಕುಂತಲಾ ಎಲ್ಲರಿಗೂ ಡಿಸೈನರ್‌ ಡ್ರೆಸ್‌ ರೆಡಿ ಮಾಡಿಸುತ್ತಿದ್ದಾಳೆ. ಮನೆಗೆ ಡಿಸೈನರ್‌ನ್ನು ಕರೆಸಿ ಡ್ರೆಸ್‌ ಸೆಲೆಕ್ಟ್‌ ಮಾಡುತ್ತಿದ್ದಾಳೆ. ರೇಟ್‌ ಎಷ್ಟಾದರೂ ಪರವಾಗಿಲ್ಲ, ನಮಗೆ ಡ್ರೆಸ್‌ ಬೇಕು ಎಂದು ಜಯದೇವ್‌ ಹೇಳಿದ್ದನು. ಈ ರೀತಿ ಹಣ ಖರ್ಚು ಮಾಡುವುದು ಅಪೇಕ್ಷಾ, ಪಾರ್ಥಗೆ ಸಿಟ್ಟು ತರಿಸಿದೆ.

55
ದಿಯಾಗೆ ಬೇಸರ!
Image Credit : zee5

ದಿಯಾಗೆ ಬೇಸರ!

ಶಕುಂತಲಾಳೇ ದಿಯಾಗೆ ಡ್ರೆಸ್ ಸೆಲೆಕ್ಟ್‌ ಮಾಡಿದ್ದಳು. ಆ ಡ್ರೆಸ್‌ ದಿಯಾಗೆ ಇಷ್ಟವಿರಲಿಲ್ಲ. ಶಕುಂತಲಾ ಡ್ರೆಸ್‌ ಸೆಲೆಕ್ಟ್‌ ಮಾಡಿರೋದು ದಿಯಾಗೆ ಸಿಟ್ಟು ತರಿಸಿದೆ. ಇದಾದ ಬಳಿಕ, ಅವಳು ಜಯದೇವ್‌ ಬಳಿ ಕಂಪ್ಲೆಂಟ್‌ ಮಾಡಿದ್ದಾಳೆ. “ನನಗೆ ಡ್ರೆಸ್‌ ಸೆಲೆಕ್ಟ್‌ ಮಾಡೋ ಸ್ವಾತಂತ್ರ್ಯ ಇಲ್ಲ” ಎಂದು ಹೇಳಿದ್ದಾಳೆ. ಆಗ ಜಯದೇವ್‌, “ನಮಗಿಂತ ದೊಡ್ಡವರು, ಹೀಗಾಗಿ ನಾವು ಗೌರವ ಕೊಡಬೇಕು. ನಾವು ಅವರ ಮಾತನ್ನು ಕೇಳಬೇಕಾಗುತ್ತದೆ, ಒಂದು ಡ್ರೆಸ್‌ ವಿಷಯ ಆಗಿದ್ದಕ್ಕೆ ಸುಮ್ಮನಿರು” ಎಂದು ಸಮಾಧಾನ ಮಾಡಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved