MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಮಗಳು ಸಿಕ್ಕರೂ ಗೌತಮ್‌ ಮನೆ ಸೇರೋಕಿದೆ ನೂರಾರು ಸವಾಲು! ಮುಂದಾಗೋದೆಲ್ಲ ಖುಷಿ ವಿಷ್ಯವಲ್ಲ!

Amruthadhaare Serial: ಮಗಳು ಸಿಕ್ಕರೂ ಗೌತಮ್‌ ಮನೆ ಸೇರೋಕಿದೆ ನೂರಾರು ಸವಾಲು! ಮುಂದಾಗೋದೆಲ್ಲ ಖುಷಿ ವಿಷ್ಯವಲ್ಲ!

'ಅಮೃತಧಾರೆ' ಧಾರಾವಾಹಿಯಲ್ಲಿ ಅನಾಥಾಶ್ರಮದಲ್ಲಿರುವ ಪುಟಾಣಿ ಕಂದಮ್ಮ ತನ್ನ ಮಗಳು ಅಂತ ಸುಳಿವು ಸಿಕ್ಕಿದ್ದು, ಆತ ಅನಾಥಾಶ್ರಮಕ್ಕೆ ಹೋಗಿ ಮಗಳನ್ನು ಮುದ್ದಾಡಿದ್ದಾನೆ. ಆದರೆ ಕಾನೂನಿನ ಪ್ರಕಾರ ಆ ಪುಟಾಣಿಯೇ ಗೌತಮ್‌ ಮಗಳು ಎನ್ನೋದು ಸಾಬೀತಾಗಬೇಕು. ಹೀಗಾಗಿ ಇನ್ನೂ ಒಂದು ವಾರ ಬೇಕು. 

1 Min read
Padmashree Bhat
Published : Aug 12 2025, 10:02 AM IST| Updated : Aug 12 2025, 10:18 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : zee5

ಇನ್ನೊಂದು ಕಡೆ ಭೂಮಿಕಾ ಹಾಗೂ ಭಾಗ್ಯಳನ್ನು ಮುಗಿಸಲು ಶಕುಂತಲಾ-ಜಯದೇವ್‌ ರೆಡಿಯಾಗಿದ್ದಾರೆ. ಮನೆಯಲ್ಲಿರುವ ಶಕುಂತಲಾ, ಮನೆಯಿಂದ ಹೊರಗಡೆ ಇರೋ ಜಯದೇವ್‌ ಇಬ್ಬರೂ ಸೇರಿಕೊಂಡು ಒಂದಿಲ್ಲೊಂದು ಪ್ಲ್ಯಾನ್‌ ಮಾಡುತ್ತಿದ್ದಾರೆ. ಇದರ ವಿರುದ್ಧ ಭೂಮಿ, ಸೃಜನ್‌ ಹೋರಾಡಬೇಕಿದೆ.

25
Image Credit : zee5

ಯಾರು ಏನೇ ಹೇಳಿದರೂ ಕೂಡ ಶಕುಂತಲಾ ಕೆಟ್ಟವಳು, ಹಣದ ಆಸೆಗೆ ಮೋಸ ಮಾಡಿದ್ದಾಳೆ, ಕುತಂತ್ರ ಮಾಡಿದ್ದಾಳೆ ಅಂದರೆ ಗೌತಮ್‌ ನಂಬೋದಿಲ್ಲ. ಗೌತಮ್‌ನನ್ನು ಶಕುಂತಲಾ ನಾಯಿ ಅಂತ ಕೂಡ ಕರೆದಿದ್ದಳು. ಅದಕ್ಕೆ ಭೂಮಿ ಧರ್ಮದೇಟು ಕೊಟ್ಟಿದ್ದಳು. ಶಕುಂತಲಾಳಿಂದ ಭೂಮಿ-ಗೌತಮ್‌ ಮಧ್ಯೆ ಸಮಸ್ಯೆ ಬರದಿದ್ರೆ ಸಾಕು.

Related Articles

Related image1
Amruthadhaare ಭರ್ಜರಿ ಟ್ವಿಸ್ಟ್​: ಗೌತಮ್​ ಕೈಸೇರಿದ ಹೆಣ್ಣುಪಾಪು! ಶಕುಂತಲಾ ಫೋನ್​ ಟ್ರ್ಯಾಪ್​?
Related image2
'ಗೌರಿ ಧಾರಾವಾಹಿ' ಹೀರೋ ಆದ ಕರಣ್‌ ಕೆ ಆರ್‌ Amruthadhaare Serial ಬಿಡ್ತಾರಾ? ಅಲ್ಲಿ ಪಾರ್ಥನ ಸಾವಾಗಲಿದೆಯಾ?
35
Image Credit : zee5

ಭೂಮಿಕಾಗೆ ತಾನು ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿರೋದು ಗೊತ್ತಿಲ್ಲ. ಇದೇ ವಿಷಯ ಇಟ್ಕೊಂಡು ಭೂಮಿಕಾ-ಗೌತಮ್‌ ಮಧ್ಯೆ ಶಕುಂತಲಾ ಬಿರುಕು ತರುತ್ತಾಳಾ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಮಗಳ ವಿಷಯ ಏನಾಗಲಿದೆಯೋ ಏನೋ!

45
Image Credit : Instagram

ಇನ್ನೂ ಒಂದು ವಾರಗಳ ಕಾಲ ಆ ಮಗು ಅನಾಥಾಶ್ರಮದಲ್ಲಿ ಇರುತ್ತದೆ. ಡಿಎನ್‌ಎ ರಿಪೋರ್ಟ್‌ನಲ್ಲಿ ಗೌತಮ್‌ ಮಗಳು ಆ ಪುಟಾಣಿ ಎನ್ನೋದು ಪಕ್ಕಾ ಆದರೆ ಮಾತ್ರ ಆ ಮಗು ಗೌತಮ್‌ ಮನೆ ಸೇರುವುದು. ಮಗಳು ಬದುಕಿರೋದು ಶಕುಂತಲಾ-ಜಯದೇವ್‌ಗೆ ಗೊತ್ತಾದರೆ ಅವರು ಸುಮ್ಮನಿರೋದು ಡೌಟ್.‌ ಏನಾದರೂ ಮಾಡಿ ಗೌತಮ್‌ನಿಂದ ಆ ಮಗುವನ್ನು ದೂರ ಮಾಡಬಹುದು.

55
Image Credit : zee5

ಮಗಳು ಪತ್ತೆ ಆದಳು ಅಂತ ಅದು ಇಷ್ಟು ಬೇಗ ಗೌತಮ್‌ ಮನೆ ಸೇರುವುದು ಎಂದು ಹೇಳಲಾಗದು. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಬರೋದು ಬಾಕಿ ಇದೆ. ಈ ಧಾರಾವಾಹಿಯಲ್ಲಿ ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿ ಪಾತ್ರದಲ್ಲಿ ಛಾಯಾ ಸಿಂಗ್‌, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಜಯದೇವ್‌ ಪಾತ್ರದಲ್ಲಿ ರಾಣವ್‌ ಅವರು ನಟಿಸುತ್ತಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸೆಲೆಬ್ರಿಟಿಗಳು
ಟಿವಿ ಶೋ
ಅಮೃತಧಾರೆ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved