MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Amruthadhaare ಭರ್ಜರಿ ಟ್ವಿಸ್ಟ್​: ಗೌತಮ್​ ಕೈಸೇರಿದ ಹೆಣ್ಣುಪಾಪು! ಶಕುಂತಲಾ ಫೋನ್​ ಟ್ರ್ಯಾಪ್​?

Amruthadhaare ಭರ್ಜರಿ ಟ್ವಿಸ್ಟ್​: ಗೌತಮ್​ ಕೈಸೇರಿದ ಹೆಣ್ಣುಪಾಪು! ಶಕುಂತಲಾ ಫೋನ್​ ಟ್ರ್ಯಾಪ್​?

ಅಮೃತಧಾರೆ ಸೀರಿಯಲ್​ಗೆ ಭರ್ಜರಿ ಟ್ವಿಸ್ಟ್​ ಸಿಕ್ಕಿದೆ. ಕಾಡಿನಲ್ಲಿ ಕಳೆದು ಹೋದ ಮಗು ಗೌತಮ್​ ಕೈಸೇರಿದೆ. ಅದೇ ಇನ್ನೊಂದೆಡೆ ಶಕುಂತಲಾ ಫೋನ್​ ಟ್ರ್ಯಾಪ್​ ಮಾಡುವ ಪ್ಲ್ಯಾನ್​ ನಡೀತಿದೆ. 

2 Min read
Suchethana D
Published : Aug 11 2025, 09:22 PM IST
Share this Photo Gallery
  • FB
  • TW
  • Linkdin
  • Whatsapp
17
ಬಚಾವಾದ ಭೂಮಿಕಾ
Image Credit : Instagram

ಬಚಾವಾದ ಭೂಮಿಕಾ

ಅಮೃತಧಾರೆಯಲ್ಲಿ ಇನ್ನೇನು ಭೂಮಿಕಾ ಮತ್ತು ಮಗು ಸತ್ತೇ ಹೋಗುತ್ತಾರಾ ಎನ್ನುವ ಆತಂಕದಲ್ಲಿದ್ದರು ವೀಕ್ಷಕರು. ಆದರೆ ಪಾರ್ಥನ ದೆಸೆಯಿಂದ ಈ ಇಬ್ಬರೂ ಬಚಾವ್​ ಆಗಿದ್ದಾರೆ. ಇವರನ್ನು ಅಪಘಾತ ಮಾಡಿ ಕೊಲ್ಲಲು ಶಕುಂತಲಾ ರೌಡಿಗಳನ್ನು ಬಿಟ್ಟಿದ್ದಳು. ಆದರೆ ಅವರ ಕಾರನ್ನು ಪಾರ್ಥ ಚಾಲನೆ ಮಾಡ್ತಿರೋದು ತಿಳಿಯುತ್ತಿದ್ದಂತೆಯೇ, ಅಪಘಾತವನ್ನು ನಿಲ್ಲಿಸಿದ್ದಳು. ಭೂಮಿಕಾ ಮಗುವಿನ ಜೊತೆ ಬರುತ್ತಲೇ ಪಾರ್ಥ ಎಲ್ಲಿ ಎಂದು ಕೇಳುವ ರೀತಿಯಲ್ಲಿಯೇ ಭೂಮಿಕಾಗೆ ಇದು ಇವಳದ್ದೇ ಕುತಂತ್ರ ಎಂದು ತಿಳಿದುಹೋಯಿತು.

27
 ಶಕುಂತಲಾಳ ಗ್ರಹಚಾರ ಬಿಡಿಸಲು ಯೋಚನೆ
Image Credit : Instagram

ಶಕುಂತಲಾಳ ಗ್ರಹಚಾರ ಬಿಡಿಸಲು ಯೋಚನೆ

ಹೇಗಾದರೂ ಮಾಡಿ ಶಕುಂತಲಾಳ ಗ್ರಹಚಾರ ಬಿಡಿಸಲು ಯೋಚನೆ ಮಾಡ್ತಿದ್ದಾಳೆ ಭೂಮಿಕಾ. ಆದರೆ ಅದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ. ಇದೀಗ ಭೂಮಿಕಾಗೆ ಸಾಥ್​ ಕೊಟ್ಟಿದ್ದಾರೆ ಸೃಜನ್​. ಭೂಮಿಕಾ ಅವನ ಬಳಿ ಎಲ್ಲಾ ವಿಷಯ ಹೇಳಿದ್ದಾಳೆ. ಇಬ್ಬರೂ ಸೇರಿ ಶಕುಂತಲಾ ಕುತಂತ್ರ ಬಯಲು ಮಾಡುವುದು ಹೇಗೆ ಎಂದುಪ್ಲ್ಯಾನ್ ಮಾಡುತ್ತಿದ್ದಾರೆ.

Related Articles

Related image1
ಡಾ.ಬ್ರೋಗೆ ಸಿಕ್ಕಿತು ಹೆಂಗಸಿನ ಅಸ್ಥಿ ಪಂಜರ! ಎಳೆ ಎಳೆಯಾಗಿ ಬಿಚ್ಚಿಟ್ಟ ಅದರ ಮಾಹಿತಿ...
Related image2
ಭಾಗ್ಯ-ಆದಿ ಮದ್ವೆಗೆ ಫ್ಯಾನ್ಸ್​ ಕಾತರ... ಇಬ್ಬರು ಮಕ್ಕಳ ಮುದ್ದಿನ ಅಪ್ಪನ ರಿಯಲ್​ ಪತ್ನಿ ಇವ್ರೇ ನೋಡಿ!
37
ಶಕುಂತಲಾಳ ಫೋನ್​ ಟ್ರ್ಯಾಪ್​ ಪ್ಲ್ಯಾನ್​
Image Credit : Instagram

ಶಕುಂತಲಾಳ ಫೋನ್​ ಟ್ರ್ಯಾಪ್​ ಪ್ಲ್ಯಾನ್​

ಆಗ ಸೃಜನ್​ ಶಕುಂತಲಾಳ ಫೋನ್​ ಟ್ರ್ಯಾಪ್​ ಮಾಡುವ ಪ್ಲ್ಯಾನ್​ ಮಾಡುತ್ತಾನೆ. ಆದರೆ ಇದು ಸರಿಯಲ್ಲ, ಇದು ಒಳ್ಳೆಯ ಮಾರ್ಗವಲ್ಲ. ಇಂಥ ಕೆಟ್ಟ ಯೋಚನೆ ಬೇಡ ಎನ್ನುತ್ತಾಳೆ ಭೂಮಿಕಾ. ಆದರೆ ಒಳ್ಳೆಯ ಕೆಲಸ ಮಾಡುವುದಿದ್ದರೆ, ಕೆಟ್ಟವರ ಬಣ್ಣ ಬಯಲು ಮಾಡುವುದಿದ್ದರೆ ಇಂಥ ಮಾರ್ಗ ಹಿಡಿಯಲೇಬೇಕು ಎನ್ನುವುದು ಸೃಜನ್​ ಮಾತು. ಇದಕ್ಕೆ ಭೂಮಿಕಾ ಇನ್ನೂ ಅನುಮತಿ ಕೊಟ್ಟಿಲ್ಲ. ಆದರೆ ಅನುಮತಿ ಕೊಟ್ಟರೆ ಸೃಜನ್​ ಏನು ಮಾಡುತ್ತಾನೆ, ಶಕುಂತಲಾ ಮಾತೆಲ್ಲಾ ಟ್ರ್ಯಾಪ್​ ಆಗತ್ತಾ ಎನ್ನುವುದು ತಿಳಿಯುತ್ತದೆ. ಆದರೆ ಸ್ವಲ್ಪವೇ ಎಡವಟ್ಟಾದರೂ ಇಬ್ಬರಿಗೂ ಸಮಸ್ಯೆಯಂತೂ ಇದ್ದದ್ದೇ.

47
ಗೌತಮ್​ ಕೈಸೇರಿದ ಮತ್ತೊಂದು ಮಗು
Image Credit : Instagram

ಗೌತಮ್​ ಕೈಸೇರಿದ ಮತ್ತೊಂದು ಮಗು

ಅದೇ ಇನ್ನೊಂದೆಡೆ, ಕಾಡಿನಲ್ಲಿ ಸಿಕ್ಕಿರೋ ಹೆಣ್ಣುಮಗು ಗೌತಮ್​ ಕೈಸೇರಿದೆ. ಅನಾಥಾಶ್ರಮದಲ್ಲಿ ಇರುವ ಮಗುವನ್ನು ಗೌತಮ್​ಗೆ ನೀಡಲಾಗಿದೆ. ಆದರೆ ಅದು ಆತನದ್ದೇ ಮಗು ಹೌದೋ ಅಲ್ಲವೋ ಎನ್ನುವ ಸಲುವಾಗಿ ಡಿಎನ್​ಎ ಟೆಸ್ಟ್​ಗೆ ವೈದ್ಯರನ್ನು ಕರೆಸಲಾಗಿದೆ. ಮಗು ಅವನದ್ದೇ ಆಗಿರಲಿ ಎಂದು ಸೀರಿಯಲ್​ ಪ್ರೇಮಿಗಳು ಹಾರೈಸುತ್ತಿದ್ದಾರೆ.

57
ಸೀರಿಯಲ್​ ರೋಚಕ ಹಂತ
Image Credit : Instagram

ಸೀರಿಯಲ್​ ರೋಚಕ ಹಂತ

ಈ ಮೂಲಕ ಸದ್ಯ ಸೀರಿಯಲ್​ ರೋಚಕ ಹಂತ ತಲುಪಿದೆ. ಅಷ್ಟಕ್ಕೂ ಭಾಗ್ಯಮ್ಮನಿಂದ ಶಕುಂತಲಾ ವಿಷ್ಯ ಭೂಮಿಕಾಗೆ ತಿಳಿದಿದೆ. ಭಾಗ್ಯಮ್ಮ ಶಕುಂತಲಾ ವಿಷಯವನ್ನು ಚಿತ್ರ ಬಿಡಿಸುವ ಮೂಲಕ ತೋರಿಸಿದ್ದಾಳೆ. ಮಗುವಿಗೆ ಶಕುಂತಲಾ ತೊಂದರೆ ಮಾಡುತ್ತಿದ್ದಾಳೆ ಎನ್ನುವುದು ಭೂಮಿಕಾಗೆ ಈಗ ತಿಳಿದಿದೆ. ಭಾಗ್ಯಳಿಗೆ ವಿಷಯ ತಿಳಿಯುತ್ತಿದ್ದಂತೆಯೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಕ್ಕೆ ಭೂಮಿಕಾ ತಡೆ ಒಡ್ಡಿದ್ದಳು. ಶಕುಂತಲಾ ಮಾತನ್ನು ಗೌತಮ್​ ನಂಬಿಬಿಟ್ಟಿದ್ದ. ಆದರೆ ಅದನ್ನು ಭೂಮಿಕಾ ನಂಬದೇ ಭಾಗ್ಯಮ್ಮ ಪರವಾಗಿ ನಿಂತಿದ್ದಳು.

67
ಭಾಗ್ಯಮ್ಮನಿಂದ ಗುಟ್ಟು ರಟ್ಟು
Image Credit : Instagram

ಭಾಗ್ಯಮ್ಮನಿಂದ ಗುಟ್ಟು ರಟ್ಟು

ಕೊನೆಗೆ ಏನೋ ಎಡವಟ್ಟಾಗುತ್ತಿದೆ ಎಂದು ತಿಳಿಯುತ್ತಲೇ ಅವಳನ್ನು ತನ್ನ ತವರಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಚಿತ್ರಬಿಡಿಸುವ ಮೂಲಕ ಭಾಗ್ಯ ಶಕುಂತಲಾ ಗುಟ್ಟನ್ನು ರಟ್ಟು ಮಾಡಿದ್ದಾಳೆ. ಅದನ್ನು ಹೋಗಿ ಭೂಮಿಕಾ ಶಕುಂತಲಾಗೆ ಹೇಳಿದ್ದಾಳೆ. ಮೊದಲಿಗೆ ಇದನ್ನು ಶಕುಂತಲಾ ಒಪ್ಪದಿದ್ದರೂ ಕೊನೆಗೆ ಹೌದು ನಾನೇ ಎಲ್ಲಾ ಮಾಡ್ತಿರೋದು, ನಿನ್ನಿಂದ ಏನೂ ಮಾಡಲು ಆಗಲ್ಲ ಎಂದಿದ್ದಾಳೆ.

77
ಶಕುಂತಲಾ ಜೊತೆ ಚಾಲೆಂಜ್​
Image Credit : Instagram

ಶಕುಂತಲಾ ಜೊತೆ ಚಾಲೆಂಜ್​

ಈಗ ಅಸಲಿ ಆಟ ಶುರುವಾಯ್ತು, ನೋಡೋಣ ಎಂದು ಶಕುಂತಲಾಗೆ ಭೂಮಿಕಾ ಚಾಲೆಂಜ್​ ಹಾಕಿದ್ದಾಳೆ. ಇಲ್ಲಿಯವರೆಗೆ ಅತ್ತೆಯ ಮೇಲೆ ಇದ್ದ ಸಂದೇಹವೆಲ್ಲವೂ ನಿಜವಾಗಿದೆ. ಇದರಿಂದ ಇದೀಗ ಸೀರಿಯಲ್​ನಲ್ಲಿ ಮತ್ತಷ್ಟು ರೋಚಕ ಟ್ವಿಸ್ಟ್​ ಸಿಗಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved