MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಟ್ವಿಸ್ಟ್ ಮೇಲೆ ಟ್ವಿಸ್ಟ್..ನೀರು ಬಂತು, ಮೋರಿ ಕ್ಲೀನ್ ಆಯ್ತು; ವಠಾರಕ್ಕೆ ಅದೃಷ್ಟ ತಂದ ಗೌತಮ್ ಮಗಳು!

ಟ್ವಿಸ್ಟ್ ಮೇಲೆ ಟ್ವಿಸ್ಟ್..ನೀರು ಬಂತು, ಮೋರಿ ಕ್ಲೀನ್ ಆಯ್ತು; ವಠಾರಕ್ಕೆ ಅದೃಷ್ಟ ತಂದ ಗೌತಮ್ ಮಗಳು!

Amruthadhaare Gautams daughter: ಗೌತಮ್‌ಗೆ ಭೂಮಿ ಸಿಕ್ಕ ಬೆನ್ನಲ್ಲೇ ತನ್ನ ಮಗ ಯಾರೆಂದು ಗೊತ್ತಾಗಿ ಖುಷಿಯಿಂದ ಕುಣಿದಾಡಿದ್ದ. ಆದರೀಗ ಮಗಳೂ ಸಿಕ್ಕಾಗಿದೆ. ಆದರೆ ಆಕೆಯೇ ತನ್ನ ಮಗಳು ಎಂದು ಗೌತಮ್‌ಗೆ ಮಾತ್ರವಲ್ಲ, ಸ್ವತಃ ಧಾರಾವಾಹಿ ವೀಕ್ಷಕರಿಗೂ ತಿಳಿದಿಲ್ಲ . ಆದರೆ ನಿರ್ದೇಶಕರು ಕೊಟ್ಟಿರುವ ಸುಳಿವು…

2 Min read
Ashwini HR
Published : Oct 10 2025, 05:03 PM IST
Share this Photo Gallery
  • FB
  • TW
  • Linkdin
  • Whatsapp
16
ಆ ಮಗು ಎಲ್ಲಿಗೆ ಹೋಯ್ತು?
Image Credit : Instagram

ಆ ಮಗು ಎಲ್ಲಿಗೆ ಹೋಯ್ತು?

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್-ಭೂಮಿ ಯಾವಾಗ ಒಂದಾಗ್ತಾರೆ ಅಂತ ವೀಕ್ಷಕರು ಕಾದಿದ್ದೇ ಕಾದದ್ದು. ಏತನ್ಮಧ್ಯೆ ಧಾರಾವಾಹಿ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಸಿಕ್ಕಿದೆ. ಹೌದು, ಗೌತಮ್‌ಗೆ ಮಗಳು ಹತ್ತಿರವಾಗುವ ಸಮಯ ಬಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಶಕುಂತಲಾ ಮತ್ತು ಜೈದೇವ್‌ ಸಖತ್ತಾಗೆ ಪ್ಲಾನ್ ಮಾಡಿ, ಭೂಮಿ-ಗೌತಮ್‌ ಮಗಳು ಹುಟ್ಟಿದ ತಕ್ಷಣವೇ ಕಿಡ್ನ್ಯಾಪ್ ಮಾಡಿಸಿದ್ದರು. ಕೊನೆಗೆ ಆ ಮಗು ಎಲ್ಲಿಗೆ ಹೋಯ್ತು? ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದರು.

26
ಹಾಡಿಹೊಗಳುತ್ತಿದ್ದಾರೆ ವಠಾರದ ಜನ
Image Credit : Instagram

ಹಾಡಿಹೊಗಳುತ್ತಿದ್ದಾರೆ ವಠಾರದ ಜನ

ಇತ್ತೀಚೆಗಷ್ಟೇ ಗೌತಮ್‌ಗೆ ಭೂಮಿ ಸಿಕ್ಕ ಬೆನ್ನಲ್ಲೇ ತನ್ನ ಮಗ ಯಾರೆಂದು ಗೊತ್ತಾಗಿ ಖುಷಿಯಿಂದ ಕುಣಿದಾಡಿದ್ದ. ಆದರೀಗ ಮಗಳೂ ಸಿಕ್ಕಾಗಿದೆ. ಆದರೆ ಆಕೆಯೇ ತನ್ನ ಮಗಳು ಎಂದು ಗೌತಮ್‌ಗೆ ಮಾತ್ರವಲ್ಲ, ಸ್ವತಃ ಧಾರಾವಾಹಿ ವೀಕ್ಷಕರಿಗೂ ತಿಳಿದಿಲ್ಲ ಬಿಡಿ. ಆದರೆ ನಿರ್ದೇಶಕರು ಕೊಟ್ಟಿರುವ ಸುಳಿವು ನೋಡಿದರೆ ಸದ್ಯ ಗೌತಮ್‌ ಜೊತೆಯಲ್ಲಿರುವ ಆ ಪುಟ್ಟ ಹುಡುಗಿ ಅವನದ್ದೇ ಮಗು ಎಂಬುದು ಗೊತ್ತಾಗುತ್ತದೆ. ಈಗ ಆ ಮಗು ಗೌತಮ್‌ ಜೀವನದಲ್ಲಿ ಬಂದ ಮೇಲೆ ಎಷ್ಟೆಲ್ಲಾ ಬದಲಾವಣೆ ಆಗ್ತಿದೆ ಅಂದ್ರೆ ಸ್ವತಃ ವಠಾರದ ಜನರೇ ಹಾಡಿಹೊಗಳುತ್ತಿದ್ದಾರೆ.

Related Articles

Related image1
‘ಇವರದ್ದೇ ದರ್ಬಾರು'...'ಲಕ್ಷ್ಮೀ ನಿವಾಸ'ದ ಈ ದೃಶ್ಯ ನೋಡಿ ಪಿತ್ತ ನೆತ್ತಿಗೇರಿಸಿಕೊಂಡ ಫ್ಯಾನ್ಸ್‌
Related image2
ರವಿ ಕಾಣದ್ದು ಕವಿ ಕಂಡ ಅನ್ನೋ ಹಾಗೆ ಶಕುಂತಲಾ ನೋಡಿದ್ಮೇಲೆ ವೀಕ್ಷಕರಿಗೆ ಅನಿಸಿದ್ದೇನು?
36
ದಿನಕ್ಕೊಂದು ಟ್ವಿಸ್ಟ್
Image Credit : Instagram

ದಿನಕ್ಕೊಂದು ಟ್ವಿಸ್ಟ್

ಈಗ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್‌ ಎದುರಾಗಿದೆ. ಅದೇನಪ್ಪಾ ಅಂದ್ರೆ ಗೌತಮ್ ಆ ಹುಡುಗಿಯನ್ನ ಮನೆಗೆ ಕರೆದುಕೊಂಡ ಬಂದ ಮೇಲೆ ವಠಾರದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಬಗೆಹರಿದಿವೆ. ಅಷ್ಟೇ ಅಲ್ಲ, ಹುಡುಗಿಯ ಕೈನಲ್ಲಿ ತ್ರಿಶೂಲಾಕಾರದ ಮಚ್ಚೆಯನ್ನ ಸೂಕ್ಷ್ಮವಾಗಿ ಗಮನಿಸಿದ ಹಿರಿಯರೊಬ್ಬರು ಅದು ಸಾಮಾನ್ಯ ಮಗುವಲ್ಲ, ಅದೃಷ್ಟದ ಮಗು ಎಂದಿದ್ದಾರೆ. ವಿಶೇಷವೆಂದ್ರೆ ಸದ್ಯಕ್ಕೆ ಆ ಹುಡುಗಿ ಯಾರ ಜೊತೆಯೂ ಮಾತನಾಡುತ್ತಿಲ್ಲ. ಇದನ್ನೆಲ್ಲಾ ನೋಡಿದ ವೀಕ್ಷಕರು ಏನಿದು ದಿನಕ್ಕೊಂದು ಟ್ವಿಸ್ಟ್ ಅಂದಿದ್ದಾರೆ.

46
ಎಲ್ಲವೂ ಕಣ್ಣಾಮುಚ್ಚಾಲೆ
Image Credit : Instagram

ಎಲ್ಲವೂ ಕಣ್ಣಾಮುಚ್ಚಾಲೆ

ಅಷ್ಟೇ ಅಲ್ಲ, ಧಾರಾವಾಹಿಯಲ್ಲಿ ಎಲ್ಲರೂ ಒಂದಾಗುತ್ತಿದ್ದಾರೆ. ಈಗ ಭೂಮಿಕಾ ಜೊತೆಗಿರುವ ಆಕೆಯ ಮಗ ಆಕಾಶ್, ತಾತ-ಮೊಮ್ಮಗನ ಜೊತೆಗೂಡಿ ಕುಣಿದು ಕುಪ್ಪಳಿಸುತ್ತಿದ್ದಾನೆ. ಆದರೆ ಈತನೇ ನಮ್ಮ ಮೊಮ್ಮಗ ಎಂಬುದು ಭೂಮಿ ತಂದೆ-ತಾಯಿಗೆ ಗೊತ್ತಾಗಿಲ್ಲ. ಎಲ್ಲವೂ ಒಂದು ರೀತಿ ಕಣ್ಣಾಮುಚ್ಚಾಲೆ ರೀತಿ ನಡೆದುಕೊಂಡು ಹೋಗುತ್ತಿದೆ.

56
ಕೆಟ್ಟ ದೃಷ್ಟಿ ಬೀಳದಿರಲಿ
Image Credit : Instagram

ಕೆಟ್ಟ ದೃಷ್ಟಿ ಬೀಳದಿರಲಿ

ಇದೆಲ್ಲದರ ಮಧ್ಯೆ ಶಕುಂತಲಾ-ಜೈದೇವ್ ಮಾತ್ರ ಆಸ್ತಿಗಾಗಿ ಭಾರೀ ಪ್ಲಾನ್ ಮಾಡುತ್ತಲೇ ಬರುತ್ತಿದ್ದಾರೆ. ಇಷ್ಟೆ ಆದರೆ ಪರ್ವಾಗಿಲ್ಲ. ಇವರ ಕೆಟ್ಟ ದೃಷ್ಟಿ ಪುನಃ ಗೌತಮ್ ಫ್ಯಾಮಿಲಿ ಮೇಲೆ ಬಿತ್ತೋ ಕಥೆ ಎತ್ತ ಸಾಗುವುದೋ ಗೊತ್ತಿಲ್ಲ. ಆದರೆ ಸದ್ಯ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿರುವುದಂತು ಸುಳ್ಳಲ್ಲ. ಆದ್ರೆ ಇದನ್ನೇ ತುಂಬಾ ಡ್ರ್ಯಾಗ್ ಮಾಡ್ಬೇಡಿ ಅಂತಿದ್ದಾರೆ ವೀಕ್ಷಕರು.

66
ಮಗಳು ಸಿಕ್ಕಿದ್ದೂ ವೀಕ್ಷಕರಿಗೂ ಖುಷಿ.
Image Credit : instagram

ಮಗಳು ಸಿಕ್ಕಿದ್ದೂ ವೀಕ್ಷಕರಿಗೂ ಖುಷಿ.

ಧಾರಾವಾಹಿಯಲ್ಲಿ ಗೌತಮ್‌ಗೆ ಆಕೆಯೇ ತನ್ನ ಮಗಳು ಎಂದು ಗೊತ್ತಾದ ಮೇಲೆ ಎಷ್ಟು ಖುಷಿಪಡುತ್ತಾನೋ ಅಷ್ಟೇ ಖುಷಿ ವೀಕ್ಷರಿಗಾಗಿದೆ. ಹಾಗಾಗಿ ವೀಕ್ಷಕರು ಮಾಡಿರುವ ಕಾಮೆಂಟ್ ನೋಡಿದ್ರೆ ನಿಮ್ಮ ಮುಖದಲ್ಲೂ ಸಂತಸ ತರಿಸಬಹುದು. "ಅಂತು ಡುಮ್ಮ ಸರ್ ಯುವರಾಣಿ ಸಿಕ್ಕಳು. ಆದಷ್ಟು ಬೇಗ ಭೂಮಿ ಗೌತಮ್ ಸರ್ ಒಂದಾಗಲಿ", "ಡೈರೆಕ್ಟರ್ ಸರ್ ಅದೆಷ್ಟು ಅಂತ ಎಳ್ಕೊಂಡು ಹೋಗ್ತೀರಾ, ಒಂದಲ್ಲ ಒಂದು ದಿನ ಎಲ್ರು ಒಂದಾಗ್ಲೇ ಬೇಕು ಅಲ್ವಾ ಬೇಗ ಒಂದು ಮಾಡಿ ಪುಣ್ಯ ಕಟ್ಕೋಳಿ. ಸತತವಾಗಿ ಒಂದು ತಿಂಗಳು ಆಯ್ತು ನಮ್ ಗುಂಡು ಸರ್ ಭೂಮಿ ವೇದನೆ ನೋಡೋಕ್ ಆಗ್ತಾ ಇಲ್ಲ", "ಇದು ಪಕ್ಕ, ನಮ್ ಗುಂಡು ಭೂ ಮಗಳು ಅನ್ನೋರು ಲೈಕ್ ಮಾಡಿ" "ಗೌತಮ್ ದಿವಾನ್ ಅವರಂತಹ ಅಣ್ಣ,ಗಂಡ,ಅಪ್ಪ, ಎಲ್ಲ ತರತಹದ ಕ್ಯಾರೆಕ್ಟರ್ ಇರೋರು ಎಲ್ಲರಿಗೂ ಬೇಕು. ಸಮಾಜಕ್ಕೆ ಒಳ್ಳೇ ವ್ಯಕ್ತಿ ಅನಿಸಿಕೊಳ್ಳಲಿ ಅಷ್ಟೇ" ಅಂತೆಲ್ಲಾ ಖುಷ್‌ ಖುಷಿಯಾಗಿ ಹೇಳಿದ್ದಾರೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಅಮೃತಧಾರೆ
ಟಿವಿ ಶೋ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved