MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಸೂಪರ್‌ ಹಿಟ್‌ ಸೀರಿಯಲ್‌ ಹೀರೋಯಿನ್! ಹೊಸ ಟ್ವಿಸ್ಟ್

Amruthadhaare Serial: ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಸೂಪರ್‌ ಹಿಟ್‌ ಸೀರಿಯಲ್‌ ಹೀರೋಯಿನ್! ಹೊಸ ಟ್ವಿಸ್ಟ್

Amruthadhaare Serial Today Episode Update: ಅಮೃತಧಾರೆ ಧಾರಾವಾಹಿಗೆ ಹೊಸ ಪಾತ್ರದ ಎಂಟ್ರಿಯಾಗಿದೆ. ಸೂಪರ್‌ ಹಿಟ್‌ ಧಾರಾವಾಹಿಯ ಹೀರೋಯಿನ್‌ ಎಂಟ್ರಿ ಕೊಟ್ಟಿದ್ದಾರೆ.

1 Min read
Padmashree Bhat
Published : Aug 21 2025, 10:04 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : zee5

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಗೌತಮ್‌ ಅಜ್ಜಿಯ ಕನಕಾಭಿಷೇಕ ನಡೆಯುತ್ತಿದೆ. ಎಲ್ಲರೂ ಈ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಇನ್ನೊಂದು ಕಡೆ ಗೌತಮ್‌ಗೆ ಮಗಳು ಸಿಕ್ಕಿಲ್ಲ ಎನ್ನೋ ಬೇಸರ ಕೂಡ ಇದೆ. ಮಗಳಿಗೋಸ್ಕರ ಅವನು ತುಂಬ ಹುಡುಕಾಟ ಮಾಡುತ್ತಿದ್ದಾನೆ. ಮಗಳು ಹುಟ್ಟಿರೋ ವಿಷಯವೇ ಭೂಮಿಕಾಗೆ ಗೊತ್ತಿಲ್ಲ.

25
Image Credit : zee5

ಭೂಮಿಕಾಗೆ ಹೇಗೆ ತೊಂದರೆ ಕೊಡೋದು, ಹೇಗೆ ಅವಳ ಕೊಬ್ಬು ಇಳಿಸೋದು ಅಂತ ಶಕುಂತಲಾ, ಜಯದೇವ್‌ ಪ್ಲ್ಯಾನ್‌ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಶಕುಂತಲಾ, ಜಯದೇವ್‌ ನಿಜವಾದ ಮುಖವನ್ನು ಹೇಗೆ ಎಲ್ಲರ ಮುಂದೆ ಬಯಲು ಮಾಡೋದು ಅಂತ ಭೂಮಿಕಾ ಯೋಚಿಸುತ್ತಿದ್ದಾಳೆ. ಒಟ್ಟಿನಲ್ಲಿ ಭೂಮಿಕಾ, ಶಕುಂತಲಾ ನಡುವೆ ನೇರ ಯುದ್ಧ ಶುರುವಾಗಿದೆ.

Related Articles

Related image1
Amruthadhaare: ಒಂಟಿ​ ಜೈದೇವ್​ಗೆ ಹೆಣ್ಮಕ್ಕಳ ಕಾಟ- ಮದ್ವೆ ಬಿಡಿ, ಇದೆಲ್ಲಾ ಕೇಳ್ತಾರೆ ಎಂದು ವಿವರಿಸಿ ನಾಚಿಕೊಂಡ ನಟ!
Related image2
Amruthadhaare Serial: ‘ಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ಗೆ ಮಗಳು ಸಿಕ್ಕಾಯ್ತು! ಹೇಗೆ ಎನ್ನೋದು ರೋಚಕ!
35
Image Credit : our own

ಈಗ ಭೂಮಿಕಾ ಮನೆಗೆ ಹೊಸ ನಟಿಯ ಆಗಮನವಾಗಿದೆ. ಹೌದು, ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್‌ ಅವರು ಈ ಧಾರಾವಾಹಿಯಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂದು ಕಾಣುತ್ತಿದೆ. ಏಕಾಏಕಿ ಹೊಸ ಪಾತ್ರ ಶುರುವಾಗಿರೋದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

45
Image Credit : our own

ಕನಕಾಭಿಷೇಕದ ಮಧ್ಯೆ ಬಂದ ಗಂಗಾ, ಭೂಮಿಯನ್ನು ಹೊರಗಡೆ ಕರೆದು ಪ್ರೈವೇಟ್‌ ಆಗಿ ಮಾತಾಡ್ತಾಳೆ. “ನನ್ನ ಜೀವನ ಕಷ್ಟ ಆಗಿದೆ. ಚಿಕ್ಕಮಗಳೂರಿನ ನಿಮ್ಮ ಕಾಫಿ ಎಸ್ಟೇಟ್‌ನಲ್ಲಿ ನನಗೆ ಕೆಲಸ ಕೊಡಿಸಿ, ತುಂಬ ಉಪಕಾರ ಆಗುತ್ತದೆ. ಅಲ್ಲೇ ಸೆಟಲ್‌ ಆಗ್ತೀನಿ” ಅಂತ ಗೀತಾ ಅಲಿಯಾಸ್‌ ಗಂಗಾ ಹೇಳ್ತಾಳೆ. ಆಗ ಭೂಮಿಕಾ “ಓಕೆ” ಎನ್ನುತ್ತಾಳೆ.

55
Image Credit : zee5

ಹೊಸ ಪಾತ್ರಕ್ಕೂ, ಭೂಮಿಗೂ ಏನು ಸಂಬಂಧ, ಹೊಸ ಪಾತ್ರದ ಹಿನ್ನಲೆ ಏನು? ಇದ್ದಕ್ಕಿದ್ದಂತೆ ಹೊಸ ಪಾತ್ರ ಯಾಕೆ ಎಂಟ್ರಿ ಆಯ್ತು? ಇದರ ಹಿಂದೆ ಇರುವ ಕಥೆ ಏನು? ಈಗ ಇರುವ ಟ್ವಿಸ್ಟ್‌ಗಳ ಮಧ್ಯೆ ಹೊಸ ಕಥೆ ಶುರುವಾಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved