MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಅಮ್ಮನ ಸ್ಮರಣಾರ್ಥ ಮಠಕ್ಕೆ ಕಾರು ಕಾಣಿಕೆ ನೀಡಿದ ನಟ ವಿನೋದ್ ರಾಜ್!

ಅಮ್ಮನ ಸ್ಮರಣಾರ್ಥ ಮಠಕ್ಕೆ ಕಾರು ಕಾಣಿಕೆ ನೀಡಿದ ನಟ ವಿನೋದ್ ರಾಜ್!

ನಟ ವಿನೋದ್ ರಾಜ್ ಅವರು ತಮ್ಮ ತಾಯಿ, ಖ್ಯಾತ ನಟಿ ಡಾ. ಎಂ. ಲೀಲಾವತಿ ಅವರ ಸ್ಮರಣಾರ್ಥವಾಗಿ ಬಾಗಲಕೋಟೆಯ ಬನಹಟ್ಟಿಯ ಮಹಾಂತ ಮಂದಾರ ಮಠಕ್ಕೆ ಕಾರೊಂದನ್ನು ದಾನ ಮಾಡಿದ್ದಾರೆ. ಇದನ್ನು ಮಕ್ಕಳಿಗೆ ದಾಸೋಹಕ್ಕೆ ಬಳಸುವುದಕ್ಕೆ ಮನವಿ ಮಾಡಿದ್ದಾರೆ.

1 Min read
Sathish Kumar KH
Published : Sep 22 2025, 04:04 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಬೆಂಗಳೂರು (ಸೆ.22): ಖ್ಯಾತ ನಟಿ ಡಾ. ಎಂ. ಲೀಲಾವತಿ ಪುತ್ರ ಹಾಗೂ ನಟ ವಿನೋದ್ ರಾಜ್ ಅವರು, ತಮ್ಮ ತಾಯಿಯ ಸ್ಮರಣಾರ್ಥ ಬಾಗಲಕೋಟೆಯ ಬನಹಟ್ಟಿಯ ಮಹಾಂತ ಮಂದಾರ ಮಠಕ್ಕೆ ಕಾರೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ. 

25
Image Credit : Asianet News

ವಾಹನ ಹಸ್ತಾಂತರ ಮಾಡಿದ ವಿನೋದ್ ರಾಜ್: 

ನಟ ವಿನೋದ್ ರಾಜ್ ಅವರು ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಈ ವಾಹನವನ್ನು ಮಹಾಂತ ಮಂದಾರ ಮಠದ ಪೂಜ್ಯ ಶ್ರೀ ಮಹಾಂತ ದೇವರು ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು.

Related Articles

Related image1
ಲೀಲಾವತಿ ಪುತ್ರ ವಿನೋದ್ ರಾಜ್ ಈವರೆಗೆ ವಿದೇಶಕ್ಕೂ ಹೋಗದಿರಲು ಕಾರಣ ಬಿಚ್ಚಿಟ್ಟ ಅಣ್ಣಾವ್ರ ಅಭಿಮಾನಿ ಎನ್.ಆರ್. ರಮೇಶ್!
Related image2
ಶಿವರಾಜ್‌ಕುಮಾರ್-ವಿನೋದ್ ರಾಜ್‌ ಭೇಟಿ ವೇಳೆ ಯಾವ ಗುಟ್ಟು ಹೊರಬಿತ್ತು? ಓಹೋ, ಇದಾ ವಿಷ್ಯ?
35
Image Credit : Asianet News

ದಾಸೋಹಕ್ಕೆ ಪದಾರ್ಥಗಳ ಸಾಗಣೆಗೆ ಅನುಕೂಲ: 

ಈ ಕಾರು ಮಠದಲ್ಲಿ ನಡೆಯುವ ಮಕ್ಕಳ ದಾಸೋಹಕ್ಕೆ ಅಗತ್ಯವಾದ ಆಹಾರ ಪದಾರ್ಥಗಳ ಸಂಗ್ರಹ ಮತ್ತು ಸಾಗಾಣಿಕೆಗೆ ಸಹಕಾರಿಯಾಗಲಿದೆ. ಮಠಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ತಾಯಿಯ ಹೆಸರಿನಲ್ಲಿ ಈ ಸೇವೆ ಸಲ್ಲಿಸಿರುವುದಾಗಿ ವಿನೋದ್ ರಾಜ್ ತಿಳಿಸಿದ್ದಾರೆ.

45
Image Credit : Asianet News

ಈ ಸಂದರ್ಭದಲ್ಲಿ, ನೂತನ ವಾಹನಕ್ಕೆ ಸಾಂಪ್ರದಾಯಿಕವಾಗಿ ದೃಷ್ಟಿ ತೆಗೆದು ನಿಂಬೆಹಣ್ಣು ಹೊಡೆದು, ವಿನೋದ್ ರಾಜ್ ಅವರೇ ಕಾರು ಚಾಲನೆ ಮಾಡಿದರು. ಈ ಮೂಲಕ ಅವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದಾರೆ. 

ಮಠದ ಮಕ್ಕಳ ಅನ್ನದಾಸೋಹ ಸೇವೆಯಲ್ಲಿ ಈ ವಾಹನವು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

55
Image Credit : Asianet News

ನಟ ವಿನೋದ್ ರಾಜ್ ಅವರ ಈ ಸಮಾಜಮುಖಿ ಕಾರ್ಯಕ್ಕೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಉಡುಗೊರೆ ಕೇವಲ ವಾಹನವಲ್ಲ, ಅದು ಡಾ. ಎಂ. ಲೀಲಾವತಿ ಅವರ ಸೇವಾ ಮನೋಭಾವದ ಮುಂದುವರಿಕೆ ಎಂದು ಭಾವಿಸಲಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಸ್ಯಾಂಡಲ್‌ವುಡ್
ಬಾಗಲಕೋಟೆ
ಹಿಂದೂ
ಹಿಂದೂ ಧರ್ಮ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved