MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • 'ಇಲ್ಲೇ ಹುಟ್ಟಿ ಬೆಳೆದು, ಊರು ಉದ್ಧಾರ ಮಾಡೋರ್‌ ನಾವು' ಎಂದ Darshan Thoogudeepa; ಫ್ಯಾನ್ಸ್‌ ಬಹುಪರಾಕ್!

'ಇಲ್ಲೇ ಹುಟ್ಟಿ ಬೆಳೆದು, ಊರು ಉದ್ಧಾರ ಮಾಡೋರ್‌ ನಾವು' ಎಂದ Darshan Thoogudeepa; ಫ್ಯಾನ್ಸ್‌ ಬಹುಪರಾಕ್!

ನಟ ದರ್ಶನ್‌ ತೂಗುದೀಪ ನಟನೆಯ 'ದಿ ಡೆವಿಲ್'‌ ಸಿನಿಮಾದ 'ನೆಮ್ಮದಿಯಾಗ್‌ ಇರ್ಬೇಕ್'‌ ಹಾಡು ರಿಲೀಸ್‌ ಆಗಿದೆ. ಈ ಹಾಡಿನ ಸಾಹಿತ್ಯವೇ ಈಗ ಸೌಂಡ್‌ ಮಾಡ್ತಿದೆ. 

1 Min read
Padmashree Bhat
Published : Aug 24 2025, 10:48 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : youtube

ನಟ ದರ್ಶನ್‌ ತೂಗುದೀಪ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಹೀಗಾಗಿ ಈ ಹಿಂದೆಯೇ ರಿಲೀಸ್‌ ಆಗಬೇಕಿದ್ದ ಇದ್ರೆ ನೆಮ್ಮದಿಯಾಗ್‌ ಇರ್ಬೇಕ್‌ ಹಾಡು ಇಂದು ರಿಲೀಸ್‌ ಆಗಿದೆ.

26
Image Credit : youtube

ಒಂದಿಷ್ಟು ರ್ಯಾಪ್‌ ಮಿಶ್ರಿತವಾಗಿ ಈ ಹಾಡಿದೆ. ನೂರಾರು ಡ್ಯಾನ್ಸರ್‌ಗಳ ಜೊತೆಯಲ್ಲಿ ದರ್ಶನ್‌ ಡ್ಯಾನ್ಸ್‌ ಮಾಡಿದ್ದಾರೆ. ಇಲ್ಲಿ ಒಂದಿಷ್ಟು ಸಿಗ್ನೇಚರ್‌ ಡ್ಯಾನ್ಸ್‌ ಸ್ಟೆಪ್‌ಗಳಿದ್ದಂತೆ ಕಾಣುತ್ತಿದೆ. ʼದಿ ಡೆವಿಲ್‌ʼ ಸಿನಿಮಾದಲ್ಲಿ ದರ್ಶನ್‌ ಅವರ ಇಂಟ್ರಡಕ್ಷನ್‌ ಸಾಂಗ್‌ ಎಂದು ಕಾಣುತ್ತಿದೆ.

Related Articles

Related image1
'ಮೂವರು ಅರೆಸ್ಟ್ ಬಳಿಕ ಕೆಟ್ಟ ಕಮೆಂಟ್ ನಿಂತಿವೆ' ದರ್ಶನ್‌ ಫ್ಯಾನ್ಸ್‌ಗೆ ಬಿಸಿ ಮುಟ್ಟಿಸಿದ ನಟಿ ರಮ್ಯಾ
Related image2
'ಮೂವರು ಅರೆಸ್ಟ್ ಬಳಿಕ ಕೆಟ್ಟ ಕಮೆಂಟ್ ನಿಂತಿವೆ' ದರ್ಶನ್‌ ಫ್ಯಾನ್ಸ್‌ಗೆ ಬಿಸಿ ಮುಟ್ಟಿಸಿದ ನಟಿ ರಮ್ಯಾ
36
Image Credit : youtube

ಸಂತು ಮಾಸ್ಟರ್‌ ಕೊರಿಯೋಗ್ರಫಿ, ಅನಿರುದ್ಧ್‌ ಶಾಸ್ತ್ರೀ ಸಾಹಿತ್ಯ, ಬಿ ಅಜನೀಶ್‌ ಲೋಕನಾಥ್‌ ಸಂಗೀತ ಈ ಹಾಡಿಗಿದೆ. ಅಂದಹಾಗೆ ಈ ಹಾಡು ರಿಲೀಸ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಈ ಹಾಡು ರಿಲೀಸ್‌ ಆಗಿ ಅರ್ಧ ಗಂಟೆಗೆ 4 ಲಕ್ಷ ವೀಕ್ಷಣೆ ಸಿಕ್ಕಿದೆ. ಈ ಮೂಲಕ ಒಂದೇ ದಿನಕ್ಕೆ 10 ಮಿಲಿಯನ್‌ ವೀಕ್ಷಣೆ ಆದರೂ ಆಶ್ಚರ್ಯವಿಲ್ಲ.

46
Image Credit : youtube

ಈ ಸಾಹಿತ್ಯವನ್ನು ನೋಡಿದರೆ, ಅಭಿಮಾನಿಗಳನ್ನು ಉದ್ದೇಶಿಸಿ ದರ್ಶನ್‌ ಮಾತನಾಡಿದಂತಿದೆ. “ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ನಿಯತ್ತು, ಊರು ಉದ್ಧಾರ ಮಾಡೋರು ನಾವು. ಬೇಡ ನಮಗೆ ಬೇರೆಯವರ ಕಥೆ ಪುರಾಣ, ನೇರ ನುಡಿಯಲ್ಲೇ ಹೇಳ್ತೀವಿ. ನಿನ್ನ ಬೆಳವಣಿಗೆ ನಿನ್ನ ಕೈಯಲ್ಲಿ, ನಿನ್ನ ಫ್ಯೂಚರ್‌ ಬ್ರೈಟ್”‌ ಎಂಬ ಸಾಹಿತ್ಯ ಈ ಹಾಡಿನಲ್ಲಿದೆ.

56
Image Credit : youtube

ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳಲ್ಲಿ ದರ್ಶನ್‌ ಅವರಿಗೆ ಇಂಟ್ರಡಕ್ಷನ್‌ ಸಾಂಗ್‌ ಇಡಲಾಗಿದೆ. ಅವುಗಳಿಗೆ ಹೋಲಿಕೆ ಮಾಡಿದರೆ ಈ ಹಾಡು ತುಂಬ ಡಿಫರೆಂಟ್‌ ಎನ್ನಬಹುದು. ದರ್ಶನ್‌ ಮನದಲ್ಲಿರುವ ಮಾತುಗಳು ಈ ಹಾಡು ಆಗಿವೆಯಾ ಎಂದು ಡೌಟ್‌ ಬರೋದಂತೂ ಪಕ್ಕಾ. ನಟ ದರ್ಶನ್‌ ಅವರು ಜೈಲಿನಲ್ಲಿದ್ದು, ಈ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ ಎಂದು ಕಾದು ನೋಡಬೇಕಿದೆ.

66
Image Credit : youtube

ಅಂದಹಾಗೆ ಈ ಸಿನಿಮಾಕ್ಕೆ ಪ್ರಕಾಶ್‌ ವೀರ್‌ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ 40 ಕೋಟಿ ರೂಪಾಯಿ ಹಣ ಹೂಡಲಾಗಿದೆ ಎನ್ನಲಾಗಿದೆ. ರಾಜಸ್ಥಾನ, ಬೆಂಗಳೂರು, ಮಲೇಷಿಯಾ ಮುಂತಾದ ಕಡೆ ಈ ಸಿನಿಮಾ ಶೂಟಿಂಗ್‌ ಅಗಿದೆ. ನಟ ದರ್ಶನ್‌ ನಟನೆಯ ಶೂಟಿಂಗ್‌, ಡಬ್ಬಿಂಗ್‌ ಕೆಲಸ ಕೂಡ ಮುಗಿದಿದೆಯಂತೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ದರ್ಶನ್ ತೂಗುದೀಪ
ಕನ್ನಡ ಚಲನಚಿತ್ರಗಳು
ಸಿನಿಮಾ
ಸ್ಯಾಂಡಲ್‌ವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved