MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಪವಿತ್ರಾ ಗೌಡ ಫೋಟೋವನ್ನು ಕೈಮೇಲೆ ಹಚ್ಚೆ ಹಾಕಿಸ್ಕೊಂಡ ಅಭಿಮಾನಿ!‌ ತಲೆ ತಲೆ ಚಚ್ಚಿಕೊಂಡ ನಟಿ, ಮಾಡೆಲ್!‌

ಪವಿತ್ರಾ ಗೌಡ ಫೋಟೋವನ್ನು ಕೈಮೇಲೆ ಹಚ್ಚೆ ಹಾಕಿಸ್ಕೊಂಡ ಅಭಿಮಾನಿ!‌ ತಲೆ ತಲೆ ಚಚ್ಚಿಕೊಂಡ ನಟಿ, ಮಾಡೆಲ್!‌

ಸಿನಿಮಾದವರು ಅಥವಾ ಸಾಧಕರ ಹೆಸರನ್ನು ಅಭಿಮಾನಿಗಳು ಹಚ್ಚೆ ಹಾಕಿಸಿಕೊಂಡಿರೋದನ್ನು ನೋಡಿರ್ತೀರಿ, ಅಂತೆಯೇ ನಟಿ, ಮಾಡೆಲ್‌, ಉದ್ಯಮಿ ಪವಿತ್ರಾ ಗೌಡ ಅವರ ಫೋಟೋವನ್ನು ಅಭಿಮಾನಿಯೊಬ್ಬ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್‌ ಆಗ್ತಿದೆ. 

1 Min read
Padmashree Bhat
Published : Aug 12 2025, 03:08 PM IST| Updated : Aug 12 2025, 03:13 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಹೌದು, ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪ ಕೇಸ್‌ನಲ್ಲಿ ಕೇಳಿಬರುತ್ತಿರುವ ಪವಿತ್ರಾ ಗೌಡ ಅವರ ಅಭಿಮಾನಿ ಸಿದ್ದು ಎನ್ನುವವರು ಈ ರೀತಿ ಮಾಡಿದ್ದಾರಂತೆ. ಅಂದಹಾಗೆ ಇವರು ನಟ ದರ್ಶನ್‌ ತೂಗುದೀಪ ಅಭಿಮಾನಿಯಂತೆ.

25
Image Credit : Asianet News

ಪವಿತ್ರಾ ಗೌಡ ಅವರ ರೆಡ್‌ ಕಾರ್ಪೆಟ್‌ ಸ್ಟುಡಿಯೋಗೆ ಬಂದು ಹಚ್ಚೆ ಹಾಕಿಸಿಕೊಂಡಿರೋದನ್ನು ತೋರಿಸಿದ್ದಾರೆ. ಅದನ್ನು ನೋಡಿ ಪವಿತ್ರಾ ಅವರು ನಕ್ಕಿದ್ದಲ್ಲದೆ ತಲೆ ಚಚ್ಚಿಕೊಂಡಿದ್ದಾರೆ.

Related Articles

Related image1
ರೇಣುಕಾಸ್ವಾಮಿ ಕೇಸ್: ದರ್ಶನ್, ಪವಿತ್ರಾ ಗೌಡ ಸೇರಿ 14 ಮಂದಿ ಹಾಜರಾತಿ ಹಾಕಿ ಕಳಿಸಿದ ಕೋರ್ಟ್
Related image2
Now Playing
ದರ್ಶನ್ ಬೇಲ್​ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?
35
Image Credit : Asianet News

ಈ ವಿಡಿಯೋಕ್ಕೆ ವಿವಿಧ ರೀತಿಯ ಕಾಮೆಂಟ್‌ಗಳು ಬಂದಿದೆ. ಒಂದು ಕೈ ಮೇಲೆ ದರ್ಶನ ಟ್ಯಾಟೋ ಹಾಕಿಸ್ಕೋ, ನಾವು 2025 ರಲ್ಲಿ ಇದ್ದೇವೆ. ಇನ್ನು ನಮ್ಮ ಜನಗಳಿಗೆ ಯಾರನ್ನು ಆರಾಧಿಸಬೇಕು ಯಾರನ್ನು ಆರಾಧಿಸಬಾರದು ಅನ್ನೋದೇ ಗೊತ್ತಾಗ್ತ ಇಲ್ಲ ಎಂದು ಕೂಡ ಕೆಲವರು ಕಾಮೆಂಟ್‌ ಮಾಡಿದ್ದಾರೆ.

45
Image Credit : Asianet News

“ನೀವು ನನ್ನ ಮೇಲೆ ತೋರಿಸಿದ ಪ್ರೀತಿ, ವಾತ್ಸಲ್ಯವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಿಮ್ಮ ಹಾವಭಾವ ನನ್ನ ಹೃದಯವನ್ನು ಮುಟ್ಟಿತು, ಆದರೆ ಪ್ರಾಮಾಣಿಕವಾಗಿ, ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನೀವು ಹಚ್ಚೆ ಹಾಕಿಸಿಕೊಳ್ಳುವ ಮಟ್ಟಕ್ಕೆ ಹೋಗಬೇಕಾಗಿಲ್ಲ. ನಿಮ್ಮ ಬೆಂಬಲ ಮತ್ತು ದಯೆ ನನ್ನ ಮೇಲೆ ಇದ್ದರೆ ನನ್ನ ಜೀವನದ ಶಾಶ್ವತ ನೆನಪು. ಧನ್ಯವಾದಗಳು” ಎಂದು ಪವಿತ್ರಾ ಗೌಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಹೇಳಿದ್ದಾರೆ.

55
Image Credit : others

ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಅವರು ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಮಗಳ ಪರೀಕ್ಷೆ ನಡೆಯುತ್ತಿದೆ, ಜಾಮೀನು ರದ್ದು ಮಾಡಬೇಡಿ ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ದರ್ಶನ್ ತೂಗುದೀಪ
ಸ್ಯಾಂಡಲ್‌ವುಡ್
ರೇಣುಕಾಸ್ವಾಮಿ ಪ್ರಕರಣ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved