MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡ ಎಸ್ಕೇಪ್

ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡ ಎಸ್ಕೇಪ್

ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಕೊಲೆಯೆಂದು ಪೋಷಕರು ಆರೋಪಿಸಿದ್ದಾರೆ. ಗಂಡ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದು, ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

1 Min read
Mahmad Rafik
Published : Sep 14 2025, 02:34 PM IST
Share this Photo Gallery
  • FB
  • TW
  • Linkdin
  • Whatsapp
15
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ
Image Credit : Asianet News

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಮಂಡ್ಯ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಇದು ಕೊ*ಲೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಮಹಿಳೆ ಸಾವಿನ ಬೆನ್ನಲ್ಲೇ ಆಕೆಯ ಗಂಡ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಮಹಿಳೆ ಗಂಡನ ಮುಂದೆ ಶವ ಇರಿಸಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

25
 26 ವರ್ಷದ ಹರ್ಷಿತಾ ಮೃತ ಮಹಿಳೆ
Image Credit : Asianet News

26 ವರ್ಷದ ಹರ್ಷಿತಾ ಮೃತ ಮಹಿಳೆ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಹರ್ಷಿತಾ ಮೃತ ಮಹಿಳೆ. ಎಂಟು ವರ್ಷಗಳ ಹಿಂದೆ ನಂದೀಶ್ ಎಂಬಾತನೊಂದಿಗೆ ಹರ್ಷಿತಾ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಆದ್ರೆ ಕಳೆದ ಎರಡು ವರ್ಷಗಳಿಂದ ಹರ್ಷಿತಾಗೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.

Related Articles

Related image1
ಗೌರಿ-ಗಣೇಶ ಹಬ್ಬಕ್ಕೆ ಕರೆಯಲು ತವರುಮನೆಯವರಿಲ್ಲದ್ದಕ್ಕೆ ಮನನೊಂದು ಗೃಹಿಣಿ ದುರಂತ ಅಂತ್ಯ!
Related image2
ಹುಬ್ಬಳ್ಳಿ: ಬೇರೊಬ್ಬಳ ಜೊತೆ ಸಂಬಂಧ ಮುಚ್ಚಿಟ್ಟು ಮದುವೆ; ಗಂಡನ ಮೋಸಕ್ಕೆ ಜೀವ ಬಿಟ್ಟ ಗೃಹಿಣಿ!
35
ಮಗಳಿಗೆ ಕಿರುಕುಳ
Image Credit : Asianet News

ಮಗಳಿಗೆ ಕಿರುಕುಳ

ಮದುವೆ ಬಳಿಕ ಮಂಡ್ಯ ತಾಲೂಕಿನ ಮಲ್ಲಯ್ಯನ ದೊಡ್ಡಿ ಗ್ರಾಮದಲ್ಲಿ ನಂದೀಶ್ ಮತ್ತು ಹರ್ಷಿತಾ ವಾಸವಾಗಿದ್ದರು. ಇದೇ ಮನೆಯಲ್ಲಿ ಹರ್ಷಿತಾ ಶವ ಪತ್ತೆಯಾಗಿದೆ. ಗಂಡ ಹಾಗು ಆತನ ಮನೆಯವರು ತಮ್ಮ ಮಗಳನ್ನು ಕೊಂದು ನೇಣು ಹಾಕಿರುದ್ದಾರೆ ಹರ್ಷಿತಾ ಪೋಷಕರು ದೂರು ದಾಖಲಿಸಿದ್ದಾರೆ. ಎರಡ್ಮೂರು ವರ್ಷಗಳಿಂದ ಮಗಳಿಗೆ ಕಿರುಕುಳ ಕೊಡಲಾಗುತ್ತಿತ್ತು. ಈ ಸಂಬಂಧ ರಾಜೀ ಪಂಚಾಯ್ತಿ ನಡೆಸಲಾಗಿತ್ತು ಎಂದು ಹರ್ಷಿತಾ ಪೋಷಕರು ಹೇಳಿದ್ದಾರೆ.

ಇದನ್ನೂ ಓದಿ: ಕೋಳಿ ಸಾರಿಗಾಗಿ ಜಗಳ: ಪತ್ನಿ ಶವ ನದಿಗೆ ಎಸೆದು ಪೊಲೀಸರ ದಿಕ್ಕು ತಪ್ಪಿಸಲು ಹೋಗಿ ತಗ್ಲಾಕೊಂಡ ಗಂಡ

45
ಪ್ರತಿಭಟನೆ
Image Credit : Asianet News

ಪ್ರತಿಭಟನೆ

ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆದ್ರೆ ಶವವನ್ನು ನಂದೀಶ್ ಮನೆ ಮುಂದೆ ಇರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ನಂದೀಶ್ ಮತ್ತು ಆತನ ಕುಟುಂಬಸ್ಥರು ಇಲ್ಲಿಗೆ ಬರಬೇಕು. ಬರದಿದ್ರೆ ಇಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಹರ್ಷಿತಾ ಪೋಷಕರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಯುವಕನೊಂದಿಗೆ ಸಂಬಂಧ; ಪತ್ನಿಯ ಕತ್ತು ಸೀಳಿ ಕೊಂದ ಗಂಡ ಅರೆಸ್ಟ್

55
ಪೋಷಕರ ಮನವೊಲಿಸುವ ಕಾರ್ಯ
Image Credit : Asianet News

ಪೋಷಕರ ಮನವೊಲಿಸುವ ಕಾರ್ಯ

ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಪೋಷಕರ ಮನವೊಲಿಸುವ ಕಾರ್ಯವನ್ನು ಗ್ರಾಮದ ಹಿರಿಯರು ಮಾಡುತ್ತಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಸಹ ಆಗಮಿಸಿದ್ದಾರೆ.

ಇದನ್ನೂ ಓದಿ: ಅವಾಚ್ಯ ನಿಂದನೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ; 3 ದಿನದ ಬಳಿಕ ಸಾವು, ಆರೋಪಿ ಸಲ್ನಾನ್‌ ವಿರುದ್ಧ ಎಫ್‌ಐಆರ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮಂಡ್ಯ
ಕ್ರೈಮ್ ನ್ಯೂಸ್
ಪತ್ನಿ
ಗಂಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved