MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಗರಿಕೆ ಹುಲ್ಲನ್ನು ಇಷ್ಟಪಡುವ ಗಣೇಶನಿಗೆ ಯಾಕೆ ತುಳಸಿ ದಳ ಅರ್ಪಿಸಬಾರದು… ಇಲ್ಲಿದೆ ಮಾಹಿತಿ…

ಗರಿಕೆ ಹುಲ್ಲನ್ನು ಇಷ್ಟಪಡುವ ಗಣೇಶನಿಗೆ ಯಾಕೆ ತುಳಸಿ ದಳ ಅರ್ಪಿಸಬಾರದು… ಇಲ್ಲಿದೆ ಮಾಹಿತಿ…

ಗಣೇಶ ಚತುರ್ಥಿಯಂದು ಗಣೇಶನಿಗೆ ಮೋದಕ, ಗರಿಕೆ ಮತ್ತು ವಿವಿಧ ರೀತಿಯ ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ, ಆದರೆ ತುಳಸಿ ಎಲೆಗಳನ್ನು ಅರ್ಪಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಕಥೆಯನ್ನು ತಿಳಿದುಕೊಳ್ಳೋಣ.

1 Min read
Pavna Das
Published : Aug 25 2025, 09:07 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಇನ್ನೇನು ಗಣೇಶ ಹಬ್ಬ ಬರಲಿದೆ. ಹಬ್ಬಕ್ಕೆ ಎಲ್ಲೆಡೆ ಸಂಪೂರ್ಣ ತಯಾರಿ ಕೂಡ ನಡೆಯುತ್ತಿದೆ. ಗಣೇಶನಿಗೆ ಸಾಮಾನ್ಯವಾಗಿ ಆತನಿಗೆ ಪ್ರಿಯವಾದ ಮೋದಕಗಳು, ಗರಿಕೆ ಮತ್ತು ವಿವಿಧ ಖಾದ್ಯಗಳನ್ನು ಅರ್ಪಿಸಲಾಗುತ್ತದೆ. ಇದರಿಂದ ಗಣೇಶ ಪ್ರಸನ್ನನಾಗಿ ಆಶೀರ್ವಧಿಸುತ್ತಾನೆ.

26
Image Credit : Getty

ಆದರೆ ನಿಮಗೆ ಗೊತ್ತಾ? ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಬಾರದು, ಅರ್ಪಿಸೋದಿಲ್ಲ. ಯಾಕಪ್ಪಾ ಹೀಗೆ ಎಂದು ಯೋಚನೆ ಮಾಡಿದ್ದೀರಆ? ಈ ಒಂದು ಸಂಪ್ರದಾಯದ ಕುರಿತಾಗಿ ಪೌರಾಣಿಕ ಕಥೆ ಏನೆಂದು ತಿಳಿಯೋಣ.

Related Articles

Related image1
Ganesh Chaturthi 2025: ಗಣೇಶನ ವಿಗ್ರಹ ಕೊಳ್ಳೋ ಮುನ್ನ ಈ ಕಡೆಯೂ ಗಮನ ಹರಿಸಿ
Related image2
Now Playing
gowri ganesha : ಊರಿಗೆ ಊರೇ ಗಣೇಶ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದ 'ಕ್ಷೇತ್ರಪತಿ' ನವೀನ್!
36
Image Credit : Istock

ಧಾರ್ಮಿಕ ಗ್ರಂಥಗಳಲ್ಲಿ ಹೇಳುವಂತೆ ಒಮ್ಮೆ ತುಳಸಿ ದೇವಿಯು ತೀರ್ಥಯಾತ್ರೆಯಲ್ಲಿದ್ದಾಗ, ಗಂಗಾ ನದಿಯ ದಡದಲ್ಲಿ ಗಣೇಶ ಧ್ಯಾನದಲ್ಲಿ ತೊಡಗಿರುವುದನ್ನು ನೋಡಿದಳು. ಗಣೇಶನ ಈ ದೈವಿಕ ರೂಪವನ್ನು ನೋಡಿದ ತುಳಸಿಗೆ ಆತನ ಮೇಲೆ ಆಕರ್ಷಣೆ ಉಂಟಾಯಿತಂತೆ ಮತ್ತು ಅವನನ್ನು ಮದುವೆಯಾಗುವ ಬಯಕೆ ತುಳಸಿ ಮನಸ್ಸಿನಲ್ಲಿ ಹುಟ್ಟಿತು.

46
Image Credit : Istock

ಈ ಬಗ್ಗೆ ತುಳಸಿಯು ಗಣೇಶನ ಬಳಿ ಹೇಳಿದಾಗ, ಗಣೇಶ ಆಕೆಯ ಪ್ರೇಮದ ನಿವೇದನೆಯನ್ನು ನಿರಾಕರಿಸಿ, ತಾನು ಬ್ರಹ್ಮಚಾರಿ ಎಂದು ಹೇಳಿದನು. ಗಣೇಶ ಅವಳ ಪ್ರಸ್ತಾಪವನ್ನು ತಿರಸ್ಕರಿಸಿದಾಗ, ತುಳಸಿ ಕೋಪಗೊಂಡು ಗಣೇಶನಿಗೆ ಎರಡು ಮದುವೆಗಳು ಆಗಲಿ ಎಂದು ಶಪಿಸಿದಳು.

56
Image Credit : stockPhoto

ತುಳಸಿ ಈ ರೀತಿಯಾಗಿ ಶಪಿಸಿರೋದನ್ನು ನೋಡಿ, ಗಣೇಶ ಕೂಡ ಕೋಪಗೊಂಡು ತುಳಸಿಯು ಅಸುರ ಶಂಖಚೂಡನನ್ನು ಮದುವೆಯಾಗುವಂತೆ ಶಪಿಸಿದರು. ಆದರೆ ಬಳಿಕ ತನ್ನ ಮಾತಿಗೆ ಮರುಗಿದರಂತೆ.

66
Image Credit : Freepik

ನಂತರ ಗಣೇಶ ತಪ್ಪನ್ನು ಅರಿತು, ತುಳಸಿ ವಿಷ್ಣು ಮತ್ತು ಶ್ರೀಕೃಷ್ಣನಿಗೆ ತುಂಬಾ ಪ್ರಿಯಳು ಅನ್ನೋದನ್ನು ಅರಿತು , ನನ್ನ ಪೂಜೆಯಲ್ಲಿ ಎಂದಿಗೂ ತುಳಸಿಯನ್ನು ಬಳಕೆ ಮಾಡಬಾರದು ಎಂದು ಶಪಿಸಿದರಂತೆ. ಅಂದಿನಿಂದ ಇಂದಿನವರೆಗೆ, ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಎಂದಿಗೂ ಅರ್ಪಿಸುವುದಿಲ್ಲ ಎನ್ನಲಾಗುತ್ತೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಗಣೇಶ ಚತುರ್ಥಿ
ಹಬ್ಬ
ಜ್ಯೋತಿಷ್ಯ
ತುಳಸಿ ಗಿಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved