MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಡಾಕ್ಟರ್​ ಫ್ಯಾಮಿಲಿಯಲ್ಲಿ ಎಂಜಿನಿಯರಿಂಗ್​ ನಟಿ ನಾನು... ಕುತೂಹಲದ ವಿಷ್ಯ ತಿಳಿಸಿದ ಮಹತಿ ಭಟ್​

ಡಾಕ್ಟರ್​ ಫ್ಯಾಮಿಲಿಯಲ್ಲಿ ಎಂಜಿನಿಯರಿಂಗ್​ ನಟಿ ನಾನು... ಕುತೂಹಲದ ವಿಷ್ಯ ತಿಳಿಸಿದ ಮಹತಿ ಭಟ್​

ಬಾಲನಟಿಯಾಗಿ ಎಂಟ್ರಿ ಕೊಟ್ಟು ಇದೀಗ ನಾಯಕಿಯಾಗಿ ಮಿಂಚುತ್ತಿರೋ ನಟಿ ಮಹತಿ ವೈಷ್ಣವಿ ಭಟ್​ ಅವರು ಎಂಜಿನಿಯರಿಂಗ್​ ಬಿಟ್ಟು, ವೈದ್ಯರ ಫ್ಯಾಮಿಲಿಯಿಂದ ನಟನೆಗೆ ಬಂದಿರುವ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 

2 Min read
Suchethana D
Published : Aug 09 2025, 01:30 PM IST
Share this Photo Gallery
  • FB
  • TW
  • Linkdin
  • Whatsapp
19
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್​ನಲ್ಲಿ ನಟನೆ
Image Credit : our own

ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್​ನಲ್ಲಿ ನಟನೆ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ನಾಯಕಿಯ ಮುದ್ದಿನ ಪುಟ್ಟ ತಂಗಿ ಅಂಜಲಿ ಪಾತ್ರಕ್ಕೆ ಜೀವ ತುಂಬಿದ ನಟಿ ಮಹತಿ ವೈಷ್ಣವಿ ಭಟ್​ (Mahathi Vaishnavi Bhat), ಅವರು ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ರೇಣುಕೆ ಪಾತ್ರದಲ್ಲಿ ಮಹತಿ ವೈಷ್ಣವಿ ನಟಿಸುತ್ತಿದ್ದಾರೆ. ಉಧೋ ಉಧೋ ರೇಣುಕಾ ಯಲ್ಲಮ್ಮರ ಬಾಲ್ಯ ಮುಗಿದಿದ್ದು, ಈಗ ಯೌವ್ವನಾವಸ್ಥೆಯಲ್ಲಿ ರೇಣುಕೆ ಮತ್ತು ಯಲ್ಲಮ್ಮನ ಕಥೆ ಆರಂಭವಾಗಿದ್ದು, ಇದರಲ್ಲಿ ಬೆಳೆದು ನಿಂತ ರೇಣುಕೆಯಾಗಿ ಮಹತಿ ಅಭಿನಯಿಸುತ್ತಿದ್ದಾರೆ.

29
ಬಾಲ ಕಲಾವಿದೆಯಿಂದ ನಾಯಕಿಯಾಗಿ...
Image Credit : our own

ಬಾಲ ಕಲಾವಿದೆಯಿಂದ ನಾಯಕಿಯಾಗಿ...

ಬಾಲ ಕಲಾವಿದೆಯಾಗಿ ನಟಿಸಿದ ಮಹತಿ ಈ ಮೂಲಕ ನಾಯಕಿಯಾಗಿ ಮಿಂಚಿದ್ದಾರೆ. ಇದೀಗ ನಟಿ, ತಮ್ಮ ಡಾಕ್ಟರ್​ ಕುಟುಂಬದ ಕುತೂಹಲದ ಮಾಹಿತಿಯನ್ನು ಶೇರ್​ ಮಾಡಿಕೊಂಡಿದ್ದಾರೆ. ಅಪ್ಪ-ಅಮ್ಮ ಅಣ್ಣ ಎಲ್ಲರೂ ಡಾಕ್ಟರ್​. ನನಗೆ ಮಾತ್ರ ಡಾಕ್ಟರ್​ ಆಗಲು ಇಷ್ಟವಿರದೇ ಎಂಜಿನಿಯರಿಂಗ್​ ಪದವಿ ಪಡೆದೆ. ಆದರೆ ನಟಿಯಾದೆ ಎಂದು ಮಹತಿ ಕನ್ನಡತಿ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ವೈದ್ಯೆ ಆಗಬಾರದು ಎನ್ನುವ ಕಾರಣಕ್ಕೆ ಪಿಯುಸಿಯಲ್ಲಿ ಬಯೋಲಾಜಿ ತೆಗೆದುಕೊಳ್ಳದೇ ಸಿಎಸ್​ ತೆಗೆದುಕೊಂಡಿದ್ದೆ ಎಂದಿದ್ದಾರೆ.

Related Articles

Related image1
'ಅಮೃತಧಾರೆ' ಭಾಗ್ಯಮ್ಮ ಕೇಳ್ತಿರೋ ಈ ಒಗಟಿಗೆ ನಿಮ್ಗೆ ಉತ್ತರ ಗೊತ್ತಾ? ಮಲ್ಲಿ ಪಾಸ್​... ನೀವು?
Related image2
Su From So Part-2 ಬರ್ತಿದ್ಯಾ? ಸಿನಿಮಾಕ್ಕೆ ನಿಜವಾಗಿ ಖರ್ಚಾಗಿದ್ದೆಷ್ಟು, ಗಳಿಸಿದ್ದೆಷ್ಟು? ರಾಜ್​ ಶೆಟ್ಟಿ ಹೇಳಿದ್ದೇನು ಕೇಳಿ...
39
ಎಂಜಿನಿಯರಿಂಗ್​ ಪದವಿ ಪಡೆದ ಮಹತಿ
Image Credit : our own

ಎಂಜಿನಿಯರಿಂಗ್​ ಪದವಿ ಪಡೆದ ಮಹತಿ

ಆಗಿನಿಂದಲೂ ಆ್ಯಕ್ಟಿಂಗ್​ ಕಡೆಗೆ ಒಲವು ಇತ್ತು. ಆದ್ದರಿಂದ ಡಾಕ್ಟರ್​ ಆದರೆ ಆ್ಯಕ್ಟಿಂಗ್​ ಮಾಡಲು ಆಗುವುದಿಲ್ಲ ಎನ್ನುವುದು ತಿಳಿದಿತ್ತು. ಅದಕ್ಕಾಗಿಯೇ ಎಂಜಿನಿಯರಿಂಗ್​ ಪಡೆದೆ ಎಂದಿದ್ದಾರೆ ನಟಿ. ಕೊನೆ ನಟನೆಯಲ್ಲಿ ತೊಡಗಿಸಿಕೊಳ್ಳಲು ಅಣ್ಣ, ಅಜ್ಜ-ಅಜ್ಜಿ ಎಲ್ಲರೂ ತುಂಬಾ ಸಪೋರ್ಟ್​ ಮಾಡಿದ್ರು. ಆರಂಭದಲ್ಲಿ ನನ್ನೊಬ್ಬಳನ್ನೇ ಬೆಂಗಳೂರಿಗೆ ಕಳುಹಿಸಲು ಅಪ್ಪ-ಅಮ್ಮನಿಗೆ ಭಯವಾಗಿತ್ತು. ಆ ಸಮಯದಲ್ಲಿ ಅಜ್ಜ-ಅಜ್ಜಿನೇ ನೀವೇನೂ ಹೆದರಬೇಡಿ, ನಾವು ನೋಡಿಕೊಳ್ತೇವೆ ಎಂದು ಭರವಸೆ ಕೊಟ್ಟಿದ್ದರಿಂದ ಇಲ್ಲಿಯವರೆಗೆ ಬೆಳೆಯಲು ಸಾಧ್ಯವಾಯಿತು ಎಂದಿದ್ದಾರೆ.

49
ಸೀರಿಯಲ್​ ಜೊತೆ ಓದಿನಲ್ಲೂ ಮುಂದು
Image Credit : our own

ಸೀರಿಯಲ್​ ಜೊತೆ ಓದಿನಲ್ಲೂ ಮುಂದು

ಇನ್ನು ಮಹತಿ ವಿದ್ಯಾಭ್ಯಾಸದ ಬಗ್ಗೆ ಹೇಳೋದಾದರೆ ಗಟ್ಟಿಮೇಳ ಸೀರಿಯಲ್ ಸಮಯದಲ್ಲಿ ಶೂಟಿಂಗ್ ಜೊತೆಗೆ SSLC ಓದುವನ್ನು ಮಾಡುತ್ತಿದ್ದ ಇವರು 95% ಮಾರ್ಕ್ ಪಡೆದಿದ್ದರು. ಇದೀಗ ಪಿಯುಸಿಯಲ್ಲೂ ಸಹ 98% ಅಂಕಗಳನ್ನು ಪಡೆದಿದ್ದಾರೆ. ಗಟ್ಟಿಮೇಳದ ಸೀರಿಯಲ್ ಮುಗಿದ ಬಳಿಕ CET ಪರೀಕ್ಷೆಗೆ ಬರೆದಿದ್ದರು. ಆದರೂ ನಟನೆಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.

59
ಡ್ರಾಮಾ ಜೂನಿಯರ್ಸ್ ಮೂಲಕ ಪರಿಚಯ
Image Credit : our own

ಡ್ರಾಮಾ ಜೂನಿಯರ್ಸ್ ಮೂಲಕ ಪರಿಚಯ

ಡ್ರಾಮಾ ಜೂನಿಯರ್ಸ್ (Drama Juniors) ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದ ಮಹತಿ ವೈಷ್ಣವಿ, ಡ್ರಾಮಾ ಜೂನಿಯರ್ಸ್ ಸೀಸನ್ ಒಂದರಲ್ಲಿ ಅದ್ಭುತವಾಗಿ ಅಭಿನಯಿಸಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಳಿಕ ಸಿಂಧೂರ ಧಾರಾವಾಹಿಯಲ್ಲಿ ಅಂಜಲಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟ ಮಹತಿ, ನಂತರ ಗಟ್ಟಿಮೇಳದ ಅಂಜಲಿಯಾಗಿ ಜನಪ್ರಿಯತೆ ಗಳಿಸಿದರು.

69
ಸಿನಿಮಾಗಳಲ್ಲಿಯೂ ಮಿಂಚುತ್ತಿರೋ ನಟಿ
Image Credit : our own

ಸಿನಿಮಾಗಳಲ್ಲಿಯೂ ಮಿಂಚುತ್ತಿರೋ ನಟಿ

ಸೀರಿಯಲ್ ಮಾತ್ರವಲ್ಲ ಮಹತಿ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. ನಾವು ಎಳೆಯರು ನಾವು ಗೆಳೆಯರು ಎನ್ನುವ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ಮಹತಿ ನಟಿಸಿದ್ದರು, ಇದಲ್ಲದೇ ಇತ್ತೀಚೆಗಷ್ಟೇ ಬಿಡುಗಡೆಯಾದ ತತ್ಸಮ ತದ್ಭವ ಸಿನಿಮಾದಲ್ಲಿ ಮೇಘನಾ ರಾಜ್ (Meghana Raj) ಮಗಳ ಪಾತ್ರದಲ್ಲೂ ಮಹತಿ ಅದ್ಭುತ ಅಭಿನಯ ನೀಡಿದ್ದಾರೆ.

79
ಭಕ್ತಿಪ್ರಧಾನ ಸೀರಿಯಲ್ ನಲ್ಲಿ ಮಹತಿ
Image Credit : our own

ಭಕ್ತಿಪ್ರಧಾನ ಸೀರಿಯಲ್ ನಲ್ಲಿ ಮಹತಿ

ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ರೇಣುಕೆ ಪಾತ್ರದಲ್ಲಿ ಮಹತಿ ವೈಷ್ಣವಿ ನಟಿಸುತ್ತಿದ್ದಾರೆ. ಉಧೋ ಉಧೋ ರೇಣುಕಾ ಯಲ್ಲಮ್ಮರ ಬಾಲ್ಯ ಮುಗಿದಿದ್ದು, ಈಗ ಯೌವ್ವನಾವಸ್ಥೆಯಲ್ಲಿ ರೇಣುಕೆ ಮತ್ತು ಯಲ್ಲಮ್ಮನ ಕಥೆ ಆರಂಭವಾಗಿದ್ದು, ಇದರಲ್ಲಿ ಬೆಳೆದು ನಿಂತ ರೇಣುಕೆಯಾಗಿ ಮಹತಿ ಅಭಿನಯಿಸುತ್ತಿದ್ದಾರೆ.

89
ಭಕ್ತಿಪ್ರಧಾನ ಸೀರಿಯಲ್ ನಲ್ಲಿ ಮಹತಿ
Image Credit : our own

ಭಕ್ತಿಪ್ರಧಾನ ಸೀರಿಯಲ್ ನಲ್ಲಿ ಮಹತಿ

ಈ ಭಕ್ತಿಪ್ರಧಾನ ಸೀರಿಯಲ್ ನಲ್ಲಿ ರೇಣುಕೆ ಪಾತ್ರಕ್ಕಾಗಿ ಮಹತಿ ಬಹಳಷ್ಟು ಕಲಿತಿದ್ದಾರಂತೆ. ಸಕಲ ವಿದ್ಯೆಗಳನ್ನು ಬಲ್ಲ ಮಹಾರಾಣಿಯಾಗಿರೋದರಿಂದ ಮಹತಿ ಕುದುರೆ ಸವಾರಿ, ಬಿಲ್ಲುಗಾರಿಕೆ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಕಲಿತ್ತಿದ್ದಾರೆ. ಪಾತ್ರಕ್ಕಾಗಿ ಎಲ್ಲವನ್ನೂ ಕಲಿಯೋಕೆ ಸಿದ್ಧ ಎನ್ನುತ್ತಾರೆ ಈ ನಟಿ.

99
ತೂಕ ಇಳಿಸಿಕೊಂಡ ನಟಿ
Image Credit : our own

ತೂಕ ಇಳಿಸಿಕೊಂಡ ನಟಿ

ಅಷ್ಟೇ ಅಲ್ಲ, ಈ ಪಾತ್ರಕ್ಕಾಗಿ ತೂಕವನ್ನು ಸಹ ಇಳಿಸಿಕೊಂಡಿದ್ದಾರೆ ಇವರು. ಅಮೋಘ ವಿನ್ಯಾಸದ ಸೆಟ್‌ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ದೇವಿ ಅಂಶದ ಎರಡು ಶಕ್ತಿಗಳು ಒಂದಾಗಿ ಮುಂಬರುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ ? ಎಂಬುದು ಈ ಧಾರಾವಾಹಿಯ ಕಥೆಯಾಗಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by ಕರ್ನಾಟಕ ಟಿವಿ (@karnataka_tv)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved