MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Amruthadhaare & Brahmagantu: ಎರಡು ಸೀರಿಯಲ್​ಗಳು ಒಟ್ಟಿಗೇ ಫಿನಿಷ್​? ಏನಿದು ಅಂತೀರಾ?

Amruthadhaare & Brahmagantu: ಎರಡು ಸೀರಿಯಲ್​ಗಳು ಒಟ್ಟಿಗೇ ಫಿನಿಷ್​? ಏನಿದು ಅಂತೀರಾ?

ಅಮೃತಧಾರೆ ಮತ್ತು ಬ್ರಹ್ಮಗಂಟು ಸೀರಿಯಲ್​ ಕಥೆ ಸುಮಾರಾಗಿ ಒಂದೇ ರೀತಿಯ ಹೋಲಿಕೆ ಇದ್ದು, ಇವೆರಡೂ ಸೀರಿಯಲ್​ಗಳನ್ನು ಒಂದೇ ಎಪಿಸೋಡ್​ನಲ್ಲಿ ಮುಗಿಸೋ ಪ್ಲ್ಯಾನ್ ಇದು. ಏನಿದು ವಿಷ್ಯ? 

2 Min read
Author : Suchethana D
Published : Aug 14 2025, 09:57 AM IST
Share this Photo Gallery
  • FB
  • TW
  • Linkdin
  • Whatsapp
19
ಅಮೃತಧಾರೆ ಮತ್ತು ಬ್ರಹ್ಮಗಂಟು ಒಟ್ಟಿಗೇ ಮುಗಿಸೋ ಪ್ಲ್ಯಾನ್​?
Image Credit : Instagram

ಅಮೃತಧಾರೆ ಮತ್ತು ಬ್ರಹ್ಮಗಂಟು ಒಟ್ಟಿಗೇ ಮುಗಿಸೋ ಪ್ಲ್ಯಾನ್​?

ಅಮೃತಧಾರೆ ಸೀರಿಯಲ್​ ಈಚೆಗಷ್ಟೆ 700 ಕಂತುಗಳನ್ನು ಪೂರೈಸಿದೆ. ಅದೇ ಇನ್ನೊಂದೆಡೆ ಬ್ರಹ್ಮಗಂಟು ಸೀರಿಯಲ್​ ಕೂಡ ಶರವೇಗದಿಂದ ಟಿಆರ್​ಪಿಯಲ್ಲಿ ಮುನ್ನುಗ್ಗುತ್ತಾ ಸಾಗಿದೆ. ಇವೆರಡು ಸೀರಿಯಲ್​ಗಳಲ್ಲಿ ಕೆಲವೊಂದು ಕಾಮನ್​ ಕಥೆ ಇದೆ. ಅಮೃತಧಾರೆಯಲ್ಲಿ ಚಿಕ್ಕಮ್ಮ ವಿಲನ್​ ಶಕುಂತಲಾಳನ್ನು ಗೌತಮ್​ ಕುರುಡಾಗಿ ನಂಬಿದ್ದರೆ, ಬ್ರಹ್ಮಗಂಟುವಿನಲ್ಲಿ ಅತ್ತಿಗೆ ವಿಲನ್​ ಸೌಂದರ್ಯಳನ್ನು ನಾಯಕ ಚಿರು ನಂಬಿದ್ದಾನೆ. ಎರಡೂ ಸೀರಿಯಲ್​ಗಳಲ್ಲಿ ನಾಯಕಿಯರಿಗೆ ತಮ್ಮ ಗಂಡನ ಬಳಿ ಈ ವಿಲನ್​ಗಳ ನಿಜ ಗುಣವನ್ನು ಬಯಲು ಮಾಡುವುದೇ ದೊಡ್ಡ ಸವಾಲಾಗಿದೆ. ಇದಕ್ಕಾಗಿ 2-3 ವರ್ಷ ಸೀರಿಯಲ್​ ನಡೆಯುತ್ತಾ ಇದೆ. ಆದರೆ ಇವೆರಡೂ ಸೀರಿಯಲ್​ ಒಂದೇ ಎಪಿಸೋಡ್​ನಲ್ಲಿ ಅಂತಿಮಗೊಳಿಸಿದ್ರೆ?

29
ಎರಡೂ ಸೀರಿಯಲ್​ ಒಂದೇ ದಿನ ಫಿನಿಷ್​?
Image Credit : zee5

ಎರಡೂ ಸೀರಿಯಲ್​ ಒಂದೇ ದಿನ ಫಿನಿಷ್​?

ಇದೇನು ಅಂತೀರಾ? ಮೊದಲಿಗೆ ಅಮೃತಧಾರೆ ಸೀರಿಯಲ್​ ಕುರಿತು ಹೇಳುವುದಾದರೆ, ಮಧ್ಯವಯಸ್ಸಿನ ನಾಯಕ-ನಾಯಕಿ ಜಗಳವಾಡುತ್ತಲೆ ಮದುವೆಯಾಗಿ ಕೊನೆಗೆ ಪ್ರೀತಿಯಲ್ಲಿ ಬಿದ್ದು, ಈಗ ಅವಳಿ ಮಕ್ಕಳ ಅಪ್ಪ-ಅಮ್ಮ ಆಗಿದ್ದಾರೆ. ಸದ್ಯ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಅತ್ತೆ ಶಕುಂತಲಾ ಕಿಡ್​ನ್ಯಾಪ್​ ಮಾಡಿಸಿದ್ದಾಳೆ. ಆ ಮಗು ಗೌತಮ್​ ಕೈಸೇರುವ ಹೊತ್ತಿನಲ್ಲಿ, ಆ ಮಗು ಸಿಕ್ಕ ಬಗ್ಗೆ ಶಕುಂತಲಾಗೆ ಹೇಳಿ ಎಡವಟ್ಟು ಕೂಡ ಮಾಡಿಕೊಂಡಿದ್ದಾನೆ. ಈಗ ಆ ಮಗುವನ್ನು ಶಕುಂತಲಾ ಏನು ಮಾಡುತ್ತಾಳೋ ಎನ್ನುವ ಗಾಬರಿಯಲ್ಲಿ ವೀಕ್ಷಕರು ಇದ್ದಾರೆ.

Related Articles

Related image1
ಸಿದ್ದರಾಮಯ್ಯ- ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ! 'ಕೊತ್ತಲವಾಡಿ' ಕುರಿತು ಯಶ್​ ಅಮ್ಮ ಪ್ರತಿಕ್ರಿಯೆ...
Related image2
ತಾಂಡವ್​ಗೆ ಅವನದ್ದೇ ಮನೆಗೆ ಆಹ್ವಾನ ಕೊಟ್ಟ ಆದಿ! ರೋಚಕ ತಿರುವಿನಲ್ಲಿ Bhagyalakshmi Serial
39
ಮಗುವನ್ನು ಕೊಲ್ಲಿಸಲು ಶಕುಂತಲಾ ಪ್ಲ್ಯಾನ್​
Image Credit : zee5

ಮಗುವನ್ನು ಕೊಲ್ಲಿಸಲು ಶಕುಂತಲಾ ಪ್ಲ್ಯಾನ್​

ಅದೇ ಇನ್ನೊಂದೆಡೆ, ತಮ್ಮನ್ನು ಕೊಲ್ಲಲು, ಮಗುವನ್ನು ಕೊಲ್ಲಿಸಲು ಶಕುಂತಲಾ ಮತ್ತು ಜೈದೇವ ಸೇರಿ ಪ್ಲ್ಯಾನ್​ ಮಾಡಿರೋ ವಿಷ್ಯ ಭೂಮಿಕಾಗೆ ತಿಳಿದಿದೆ. ಭಾಗ್ಯಮ್ಮಾ ಇದನ್ನು ಹೇಳಿದ್ದಾಳೆ. ಈ ಬಗ್ಗೆ ಭೂಮಿಕಾ ಶಕುಂತಲಾ ಬಳಿ ಹೇಳಿದಾಗ, ಶಕುಂತಲಾ ಯಾವುದೇ ಅಂಜಿಕೆ ಇಲ್ಲದೇ ಎಲ್ಲವನ್ನೂ ಒಪ್ಪಿಕೊಂಡಿದ್ದಾಳೆ. ನಿನ್ನಿಂದ ಏನೂ ಮಾಡಲು ಆಗುವುದಿಲ್ಲ, ಗೌತಮ್​ ನಾನು ಸಾಕಿದ ನಾಯಿ, ಅವನು ನಿನ್ನನ್ನು ನಂಬುವುದಿಲ್ಲ ಎಂದು ಹೇಳುವ ಮೂಲಕ ಭೂಮಿಕಾಳಿಂದ ಕಪಾಳಮೋಕ್ಷನೂ ಮಾಡಿಸಿಕೊಂಡು ಆಗಿದೆ.

49
ಶಕುಂತಲಾ ಮತ್ತು ಜೈದೇವನ ಫೋನ್​ ಟ್ರ್ಯಾಪ್​
Image Credit : Instagram

ಶಕುಂತಲಾ ಮತ್ತು ಜೈದೇವನ ಫೋನ್​ ಟ್ರ್ಯಾಪ್​

ಮತ್ತೊಂದೆಡೆ ಭೂಮಿಕಾ ಮತ್ತು ಸೃಜನ್​ ಸೇರಿ ಶಕುಂತಲಾ ಮತ್ತು ಜೈದೇವನ ಫೋನ್​ ಟ್ರ್ಯಾಪ್​ ಮಾಡಿದ್ದಾರೆ. ಅವರು ಮಗುವನ್ನು ಕೊಲ್ಲಲು ಮಾಡಿದ ಪ್ಲ್ಯಾನ್ ತಿಳಿದಿದೆ. ಆದರೆ ಅಷ್ಟೊತ್ತಿಗಾಗಲೇ ವಿಲನ್​ಗಳಿಗೆ ಈ ವಿಷಯ ತಿಳಿದುಬಿಟ್ಟಿದೆ. ಅಲ್ಲಿಗೆ ಭೂಮಿಕಾ ಪ್ಲ್ಯಾನ್​ ಫ್ಲಾಪ್​ ಆಗಿದೆ. ಈಗ ಗೌತಮ್​ಗೆ ಹೇಗೆ ಹೇಳುವುದು ಎನ್ನುವ ಚಿಂತೆಯಲ್ಲಿ ಇದ್ದಾಳೆ ಅವಳು. ಆದರೂ, ಮೊದಲು ಮಾಡಿದ ಟ್ರ್ಯಾಪ್​ ಬಗ್ಗೆ ಗೌತಮ್​ಗೆ ವಿಷಯ ತಿಳಿಸಿದ್ದಾಳೆ.

59
ಶಕುಂತಲಾ ವಿರುದ್ಧ ಸಾಕ್ಷಿ ಬೇಕಿದೆ
Image Credit : Instagram

ಶಕುಂತಲಾ ವಿರುದ್ಧ ಸಾಕ್ಷಿ ಬೇಕಿದೆ

ಅಲ್ಲಿ ಜೈದೇವನ ದನಿ ಮಾತ್ರ ಇರೋದ್ರಿಂದ ಶಕುಂತಲಾ ವಿರುದ್ಧ ಸಾಕ್ಷಿ ಇನ್ನೂ ಭೂಮಿಕಾಗಿ ಸಿಕ್ಕಿಲ್ಲ, ಗೌತಮ್​ ಕೂಡ ನಂಬುವ ಸ್ಥಿತಿಯಲ್ಲಿ ಇದೆ. ಆದರೆ ಈಗಿರೋ ವಿಷ್ಯ ಏನೆಂದರೆ, ಇನ್ನು ಶಕುಂತಲಾಗೆ ವಿಷ್ಯ ಗೊತ್ತಾಗಲು ಸೀರಿಯಲ್​ ಎಷ್ಟು ವರ್ಷ ಎಳೆಯುತ್ತಾರೋ ಗೊತ್ತಿಲ್ಲ.

69
ಅತ್ತಿಗೆ ವಿರುದ್ಧ ತಿರುಗಿಬಿದ್ದ ದೀಪಾ
Image Credit : Instagram

ಅತ್ತಿಗೆ ವಿರುದ್ಧ ತಿರುಗಿಬಿದ್ದ ದೀಪಾ

ಅದೇ ಇನ್ನೊಂದೆಡೆ, ಬ್ರಹ್ಮಗಂಟು ಸೀರಿಯಲ್​ನಲ್ಲಿ ಚಿರುಗೆ ಅತ್ತಿಗೆ ನಿಜ ಗುಣವನ್ನು ಬಯಲು ಮಾಡುವುದು ನಾಯಕಿ ದೀಪಾಗೆ ಕಷ್ಟವಾಗಿದೆ. ಅವಳು ಎಲ್ಲರನ್ನೂ ಕೊಲ್ಲಿಸಲು ಮಾಡಿರುವ ಸಂಚು ದೀಪಾಗೆ ತಿಳಿದಿದ್ದರೂ ಅದಕ್ಕೆ ಸಾಕ್ಷಿ ಇಲ್ಲ. ಇದೀಗ ಮೋಸದಿಂದ ಅರ್ಚನಾಳ ಮದುವೆಯನ್ನು ಯಾವನದ್ದೋ ಜೊತೆ ಮಾಡಿಸಲು ಹೊರಟಿದ್ದಾಳೆ ಸೌಂದರ್ಯ. ಅರ್ಚನಾ ಮದುವೆಯಾಗಬೇಕು ಎಂದಿರೋ ರಾಹುಲ್​ಗೆ ಅಪಘಾತ ಮಾಡಿಸಿದ್ದಾಳೆ. ಆದರೆ ಇದಕ್ಕೆ ಸಾಕ್ಷಿ ಇಲ್ಲ.

79
ರ್ಚನಾ ಮತ್ತು ರಾಹುಲ್​ನನ್ನು ಮದುವೆ
Image Credit : Instagram

ರ್ಚನಾ ಮತ್ತು ರಾಹುಲ್​ನನ್ನು ಮದುವೆ

ಏನೇ ಆದರೂ ಅರ್ಚನಾ ಮತ್ತು ರಾಹುಲ್​ನನ್ನು ಮದುವೆ ಮಾಡಿಸುವುದಾಗಿ ಸೌಂದರ್ಯಗೆ ದೀಪಾ ಸವಾಲು ಹಾಕಿದ್ರೆ, ಅತ್ತ ಸೌಂದರ್ಯ ಈ ಮದುವೆ ಆಗಲು ಬಿಡುವುದಿಲ್ಲ. ಅರ್ಚನಾ ಮದುವೆ ಬೇರೆಯವರ ಜೊತೆ ಮಾಡಿಸುವುದಾಗಿ ಹೇಳಿದ್ದಾಳೆ. ಒಟ್ಟಿನಲ್ಲಿ ಅಮೃತಧಾರೆ ಮತ್ತು ಬ್ರಹ್ಮಗಂಟುವಿನಲ್ಲಿ ವಿಲನ್​ಗಳ ನಿಜ ರೂಪ ಬಯಲಾಗಬೇಕಿದೆ ಅಷ್ಟೇ.

89
ಒಟ್ಟಿಗೇ ಮುಗಿಸಲು ಪ್ಲ್ಯಾನ್​ ಹೇಳಿದ್ದಾರೆ ನೆಟ್ಟಿಗರು
Image Credit : our own

ಒಟ್ಟಿಗೇ ಮುಗಿಸಲು ಪ್ಲ್ಯಾನ್​ ಹೇಳಿದ್ದಾರೆ ನೆಟ್ಟಿಗರು

ಆದರೆ ಈ ಎರಡೂ ಸೀರಿಯಲ್​ಗಳು ಒಟ್ಟಿಗೇ ಮುಗಿಸಲು ಪ್ಲ್ಯಾನ್​ ಹೇಳಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಈ ಮೊಬೈಲ್​ ಯುಗದಲ್ಲಿ ನಾಯಕಿಯರು ವಿಲನ್​ಗಳ ಬಣ್ಣ ಬಯಲು ಮಾಡಲು ಸಾಕ್ಷಿ ಹುಡುಕುತ್ತಿರೋದಕ್ಕೆ ಸಾಕಷ್ಟು ಸೀರಿಯಲ್​ಗಳು ಟ್ರೋಲ್​ಗೆ ಒಳಗಾಗುತ್ತಲೇ ಇರುತ್ತವೆ. ಕೈಯಲ್ಲಿ ಸದಾ ಮೊಬೈಲ್​​ ಹಿಡಿದು ಸಾಗುವ ನಾಯಕಿಯರು, ವಿಲನ್​ಗಳ ಜೊತೆ ಮಾತನಾಡುವುದನ್ನು ರೆಕಾರ್ಡ್​ ಮಾಡಿಕೊಂಡು ಗಂಡನಿಗೆ ತೋರಿಸಿದ್ರೆ ಇನ್ಯಾವ ಸಾಕ್ಷಿಯೂ ಬೇಡ್ವೇ ಬೇಡ. ಅಲ್ಲಿಯೇ ವಿಲನ್​ಗಳು ತಮ್ಮ ತಪ್ಪನ್ನು ಹೇಳಿಕೊಂಡಿರುತ್ತಾರೆ.

99
ಮೊಬೈಲ್​ ಫೋನ್​ ಇದೆಯಲ್ವಾ?
Image Credit : our own

ಮೊಬೈಲ್​ ಫೋನ್​ ಇದೆಯಲ್ವಾ?

ತಾವು ಮಾಡ್ತಿರೋ ಕೆಟ್ಟ ಕೆಲಸಗಳ ಬಗ್ಗೆ ಹೇಳಿರ್ತಾರೆ. ಆದರೆ ನಾಯಕಿಯರು ಸಾಕ್ಷಿ ಹುಡುಕಿಕೊಂಡು ಏನೇನೋ ಸರ್ಕಸ್​ ಮಾಡುವುದು ಮಾತ್ರ ಸ್ವಲ್ಪ ಸತ್ಯಕ್ಕೆ ದೂರವಾದ ವಿಷ್ಯವೇ ಆಗಿದೆ. ಇದೇ ಕಾರಣಕ್ಕೆ ಎರಡೂ ಸೀರಿಯಲ್​ಗಳಲ್ಲಿ ವಿಲನ್​ಗಳ ಮಾತನ್ನು ರಿಕಾರ್ಡ್​ ಮಾಡಿಕೊಂಡು ಗಂಡಂದಿರಿಗೆ ತೋರಿಸಿ ಒಂದೇ ದಿನ ಮುಗಿಸೋ ಪ್ಲ್ಯಾನ್​ ಹೇಳ್ತಿದ್ದಾರೆ ನೆಟ್ಟಿಗರು. ಹೇಗಿದೆ ಈ ಪ್ಲ್ಯಾನ್​?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
'ನಮ್ಮ ಹನುಮ ಕನ್ನಡಿಗ' : ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!
Recommended image2
ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Recommended image3
ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?
Related Stories
Recommended image1
ಸಿದ್ದರಾಮಯ್ಯ- ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ! 'ಕೊತ್ತಲವಾಡಿ' ಕುರಿತು ಯಶ್​ ಅಮ್ಮ ಪ್ರತಿಕ್ರಿಯೆ...
Recommended image2
ತಾಂಡವ್​ಗೆ ಅವನದ್ದೇ ಮನೆಗೆ ಆಹ್ವಾನ ಕೊಟ್ಟ ಆದಿ! ರೋಚಕ ತಿರುವಿನಲ್ಲಿ Bhagyalakshmi Serial
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved