MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ನಾಳೆಯಿಂದ ಬ್ಯಾಕ್ ನೀತಿಯಲ್ಲಿ ಮಹತ್ವದ ಬದಲಾವಣೆ, ಇನ್ನು ಕಾಯಬೇಕಿಲ್ಲ ತಕ್ಷಣಕ್ಕೆ ಹಣ

ನಾಳೆಯಿಂದ ಬ್ಯಾಕ್ ನೀತಿಯಲ್ಲಿ ಮಹತ್ವದ ಬದಲಾವಣೆ, ಇನ್ನು ಕಾಯಬೇಕಿಲ್ಲ ತಕ್ಷಣಕ್ಕೆ ಹಣ

ನಾಳೆಯಿಂದ ಬ್ಯಾಕ್ ನೀತಿಯಲ್ಲಿ ಮಹತ್ವದ ಬದಲಾವಣೆ, ಇನ್ನು ಕಾಯಬೇಕಿಲ್ಲ ತಕ್ಷಣಕ್ಕೆ ಹಣ ಪಡೆಯಲು ಸಾಧ್ಯವಿದೆ. ಚೆಕ್ ಕ್ಲೀಯರ್ ಕುರಿತು ಆರ್‌ಬಿಐ ಮಹತ್ವದ ಆದೇಶ ನೀಡಿದ್ದು, ನಾಳೆಯಿಂದ ಜಾರಿಯಾಗುತ್ತಿದೆ.

2 Min read
Author : Chethan Kumar
Published : Oct 03 2025, 06:10 PM IST
Share this Photo Gallery
  • FB
  • TW
  • Linkdin
  • Whatsapp
15
ಬ್ಯಾಂಕಿಂಗ್ ನೀತಿಯಲ್ಲಿ ಮಹತ್ವದ ಬದಲಾವಣೆ
Image Credit : Pixabay

ಬ್ಯಾಂಕಿಂಗ್ ನೀತಿಯಲ್ಲಿ ಮಹತ್ವದ ಬದಲಾವಣೆ

ಹೊಸ ನೀತಿ ಜಾರಿಗೆ ತಂದ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ ನೀತಿ ನಾಳೆ (ಅ.04) ರಿಂದ ಜಾರಿಯಾಗುತ್ತಿದೆ. ನಾಳೆಯಿಂದ ಚೆಕ್ ಕ್ಲೀಯರ್ ಆಗಲು ಕಾಯಬೇಕಿಲ್ಲ. ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲೀಯರ್ ಆಗಲಿದೆ. ಚೆಕ್ ಕ್ಲೀಯರ್ ಪ್ರಕ್ರಿಯೆಯನ್ನು ನಿರಂತರ ಮಾಡಲು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಈ ಮೂಲಕ ಚೆಕ್ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲು ದಿನವಿಡಿ ತೆಗೆದುಕೊಳ್ಳುತ್ತಿದ್ದ ಪ್ರಕ್ರಿಯೆ ನಾಳೆಯಿಂದೆ ಕೆಲವೇ ಗಂಟೆಗಳಲ್ಲಿ ಆಗಲಿದೆ.

25
ಚೆಕ್ ಕ್ಲೀಯರ್ ನಿರಂತರ ಪ್ರಕ್ರಿಯೆ
Image Credit : Asianet News

ಚೆಕ್ ಕ್ಲೀಯರ್ ನಿರಂತರ ಪ್ರಕ್ರಿಯೆ

ಚೆಕ್ ಕ್ಲಿಯರ್ ಆಗಲು ಕನಿಷ್ಠ ಒಂದು ವರ್ಕಿಂಗ್ ಡೇ ಅಗತ್ಯವಿಲ್ಲ

ಚೆಕ್ ಕ್ಲಿಯರ್ ಪ್ರಕ್ರಿಯೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇಷ್ಟು ದಿನ ಬ್ಯಾಂಕ್‌ಗೆ ಚೆಕ್ ಹಾಕಿದ ಬಳಿಕ ಖಾತೆಗೆ ವರ್ಗಾವಣೆ ಆಗಲು ಕನಿಷ್ಠ ಒಂದು ವರ್ಕಿಂಗ್ ಡೇ ಬೇಕಿತ್ತು. ಬ್ಯಾಚ್ ವೈಸ್ ಮಾಡಲಾಗುತ್ತಿತ್ತು. ಆದರೆ ಅಕ್ಟೋಬರ್ ನಾಲ್ಕರಿಂದ ಚೆಕ್ ಕ್ಲೀಯರ್ ನಿರಂತರ ಪ್ರಕ್ರಿಯೆಯಾಗಿದೆ. ಹೀಗಾಗಿ ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲೀಯರ್ ಆಗಲಿದೆ.

Related Articles

Related image1
ವಿಜಯಪುರ SBI Bank ದರೋಡೆ: ರಸ್ತೆಯಲ್ಲಿ ಬಿದ್ದ ಬ್ಯಾಗ್‌ನಲ್ಲಿ ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ನೋಟು ಪತ್ತೆ!
Related image2
ನಿಮ್ಮ ಹೆಸರಿನಲ್ಲಿ Joint Bank Account ಇದೆಯಾ? ನಿಮಗೂ IT ನೋಟಿಸ್ ಬರಬಹುದು, ಎಚ್ಚರ!
35
ಹೊಸ ಪದ್ಧತಿ ಹೇಗೆ ಕಾರ್ಯನಿರ್ವಹಿಸಲಿದೆ?
Image Credit : our own

ಹೊಸ ಪದ್ಧತಿ ಹೇಗೆ ಕಾರ್ಯನಿರ್ವಹಿಸಲಿದೆ?

ಹೊಸ ಪದ್ಧತಿ ಹೇಗೆ ಕಾರ್ಯನಿರ್ವಹಿಸಲಿದೆ?

ಹೊಸ ನೀತಿ ಪ್ರಕಾರ, ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಡೆಪಾಸಿಟ್ ಮಾಡುವ ಚೆಕ್ ಪ್ರತಿ ಗಂಟೆಗೆ ಕ್ಲೀಯರ್ ಮಾಡಲಾಗುತ್ತದೆ. ಚೆಕ್ ಡೆಪಾಸಿಟ್ ಆಗುತ್ತಿದ್ದಂತೆ ಸ್ಕ್ಯಾನ್ ಮಾಡಿ ಕ್ಲೀಯರ್ ಸೆಕ್ಷನ್‌ಗೆ ಕಳುಹಿಸಲಾಗುತ್ತದೆ. ಬೆಳಗ್ಗೆ 11 ಗಂಟೆಯಿಂದ ಬ್ಯಾಂಕ್ ಚೆಕ್ ಕ್ಲೀಯರೆನ್ಸ್ ಆರಂಭಗೊಳ್ಳಲಿದೆ. ಪ್ರತಿ ಗಂಟೆಗೆ ಕ್ಲೀಯರ್ ಪ್ರಕ್ರಿಯೆ ನಡೆಯಲಿದೆ. ಸಂಜೆ 7 ಗಂಟೆ ಒಳಗೆ ಚೆಕ್ ಪಾವತಿ ಬ್ಯಾಂಕ್ ಖಚಿತಪಡಿಸಬೇಕು, ಒಂದು ವೇಳೆ ಖಚಿತಪಡಿಸದಿದ್ದರೆ, ಆಟೋಮ್ಯಾಟಿಕ್ ಆಗಿ ಅಪ್ರೋವಲ್ ಆಗಲಿದೆ.

45
ಇನ್ನು ಮುಂದೆ ಕೆಲವೇ ಗಂಟೆಗಳು ಸಾಕು
Image Credit : Getty

ಇನ್ನು ಮುಂದೆ ಕೆಲವೇ ಗಂಟೆಗಳು ಸಾಕು

ಸದ್ಯ ಚೆಕ್ ಕ್ಲಿಯರ್‌ಗೆ ಎಷ್ಟು ಸಮಯ ಬೇಕು

ಸದ್ಯ ಬ್ಯಾಂಕ್‌ಗೆ ಚೆಕ್ ಡೆಪಾಸಿಟ್ ಮಾಡಿದ ಬಳಿಕ, ಸಿಬ್ಬಂದಿಗಳು ಈ ಚೆಕ್ ಪಾವತಿ ಬ್ಯಾಂಕ್‌ಗೆ ಅಪ್ರೋವಲ್‌ಗೆ ಕಳುಹಿಸುತ್ತಾರೆ. ಚೆಕ್ ಪಾವತಿ ಬ್ಯಾಂಕ್ ಅಪ್ರೋವಲ್ ಸಿಕ್ಕ ಬಳಿಕ ನಿಗಧಿತ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ 1 ರಿಂದ 2 ವರ್ಕಿಂಗ್ ಡೇ ಬೇಕಾಗಲಿದೆ. ಇನ್ನು ಮುಂದೆ ಕೆಲವೇ ಗಂಟೆಗಳು ಸಾಕು.

55
ಹಲವು ಘಟ್ಟ ದಾಟಿದ ಚೆಕ್
Image Credit : Freepik

ಹಲವು ಘಟ್ಟ ದಾಟಿದ ಚೆಕ್

ಧೇಶದ ಚೆಕ್ ಕ್ಲಿಯರ್ ಪ್ರಕ್ರಿಯೆ

1980ರ ದಶಕ ಹಾಗೂ ಅದಕ್ಕಿಂತ ಮೊದಲು ಬ್ಯಾಂಕ್ ಚೆಕ್ ಕ್ಲಿಯರ್ ಮ್ಯಾನ್ಯುಯೆಲ್ ಆಗಿ ಮಾಡಬೇಕಾಗಿತ್ತು. ಇದು ಕನಿಷ್ಠ ಒಂದು ವಾರಗಳ ಸಮಯ ತೆಗೆದುಕೊಳ್ಳುತ್ತಿತ್ತು. 1980ರ ಬಳಿಕ ಎಂಐಸಿಆರ್ ವ್ಯವಸ್ಥೆ ಜಾರಿಗೆ ಬಂತು. ಇದರಿಂದ 1 ರಿಂದ 3 ದಿನಗಳ ಅವಶ್ಯಕತೆ ಇತ್ತು. 2008ರಲ್ಲಿ ಚೆಕ್ ಟ್ರಾನ್ಸಾಕ್ಷನ್ ಸಿಸ್ಟಮ್(ಸಿಟಿಎಸ್) ಜಾರಿಗೆ ತರಲಾಯಿತು. ಇದರಿಂದ ಕನಿಷ್ಠ 1 ದಿನಕ್ಕೆ ಇಳಿಕೆಯಾಗಿತ್ತು. 2021ರಲ್ಲಿ ಚೆಕ್ ಕ್ಲೀಯರೆನ್ಸ್ ಪದ್ದತಿಯಲ್ಲಿ ರಾಷ್ಟ್ರದಲ್ಲಿ ಒಂದೇ ನೀತಿ ತರಲಾಗಿತ್ತು. ಇದೀಗ ಒಂದು ದಿನದಿಂದ ಗಂಟೆಗಳಿಗೆ ಇಳಿಕೆಯಾಗುತ್ತಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬ್ಯಾಂಕ್
ಭಾರತ ಸುದ್ದಿ

Latest Videos
Recommended Stories
Recommended image1
ರಾಮ್ ಚರಣ್ ಮಗ ಎಷ್ಟು ಸಾವಿರ ಕೋಟಿಗೆ ವಾರಸುದಾರ ಗೊತ್ತಾ? ಭಾರತದಲ್ಲೇ ಸ್ಟಾರ್ ರಿಚ್ ಕಿಡ್
Recommended image2
ಸಿನಿಮಾ ಬಿಡ್ತಾರಾ ಸಲ್ಮಾನ್ ಖಾನ್? ರಿಯಲ್ ಎಸ್ಟೇಟ್‌ನತ್ತ ನಟನ ಚಿತ್ತ ಈಗ
Recommended image3
ಉದ್ಯಮಿ ಸಿಜೆ ರಾಯ್‌‌ ಆತ್ಮ*ಹತ್ಯೆ‌ ಕೇಸ್ ಹಿಂದೆ ರಾಜಕಾರಣಿಗಳ‌ ಕೈವಾಡದ ಶಂಕೆ! ಶಾಸಕ ಎ ಮಂಜು ಹೇಳಿದ್ದೇನು?
Related Stories
Recommended image1
ವಿಜಯಪುರ SBI Bank ದರೋಡೆ: ರಸ್ತೆಯಲ್ಲಿ ಬಿದ್ದ ಬ್ಯಾಗ್‌ನಲ್ಲಿ ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ನೋಟು ಪತ್ತೆ!
Recommended image2
ನಿಮ್ಮ ಹೆಸರಿನಲ್ಲಿ Joint Bank Account ಇದೆಯಾ? ನಿಮಗೂ IT ನೋಟಿಸ್ ಬರಬಹುದು, ಎಚ್ಚರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved