MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Urban
  • Breaking: ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಕೇಸ್: ಕಾರ್ ನಿಲ್ಲಿಸದೇ ಸ್ಥಳದಿಂದ ಪರಾರಿಯಾದ ನಟಿ

Breaking: ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಕೇಸ್: ಕಾರ್ ನಿಲ್ಲಿಸದೇ ಸ್ಥಳದಿಂದ ಪರಾರಿಯಾದ ನಟಿ

ಬಿಗ್‌ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ.  ನಟಿ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

2 Min read
Mahmad Rafik
Published : Oct 24 2025, 09:58 AM IST
Share this Photo Gallery
  • FB
  • TW
  • Linkdin
  • Whatsapp
15
ನಟಿ ದಿವ್ಯಾ ಸುರೇಶ್
Image Credit : Social Media

ನಟಿ ದಿವ್ಯಾ ಸುರೇಶ್

ಬಿಗ್‌ಬಾಸ್ ಶೋನ ಮಾಜಿ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ವಿರುದ್ದ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಿಟ್ ಆಂಡ್ ರನ್ ಕೇಸ್ ದಾಖಲಾಗಿದೆ. ಅಕ್ಟೋಬರ್ 4ರ ರಾತ್ರಿ ಸುಮಾರು 1.45ಕ್ಕೆ ಅಪಘಾತ ಸಂಭವಿಸಿದ್ದು, ದಿವ್ಯಾ ಸುರೇಶ್ ಕಾರ್ ನಿಲ್ಲಿಸದೆಯೇ ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ದಿವ್ಯಾ ಸುರೇಶ್ ಕಾರ್ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

25
ಹಿಟ್ ಆಂಡ್ ರನ್ ಕೇಸ್
Image Credit : Social Media

ಹಿಟ್ ಆಂಡ್ ರನ್ ಕೇಸ್

ಅಕ್ಟೋಬರ್ 4ರಂದು ಅನಿತಾ, ಅನುಷಾ ಮತ್ತು ಕಿರಣ್ ಮೂವರು ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ದಿವ್ಯಾ ಸುರೇಶ್ ಅವರ ಕಾರ್ ಡಿಕ್ಕಿಯಾಗಿದ್ದರಿಂದ ಬೈಕ್‌ನಲ್ಲಿದ್ದ ಮೂವರು ಕೆಳಗೆ ಬಿದ್ದದ್ದಾರೆ. ಅನುಷಾ ಮತ್ತು ಕಿರಣ್‌ಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ರೆ, ಅನಿತಾ ಅವರ ಕಾಲಿನ ಮಂಡಿಚಿಪ್ಪು ನುಜ್ಜುಗುಜ್ಜಾಗಿದೆ. ಅಪಘಾತವಾದ್ರೂ ನಟಿ ದಿವ್ಯಾ ಸುರೇಶ್ ಕಾರ್ ನಿಲ್ಲಿಸದೇ ಹೋಗಿದ್ದಾರೆ.

Related Articles

Related image1
ದೀಪಾವಳಿ ಮುಗಿಸಿ ಬೆಂಗಳೂರಿಗೆ ಬರುತ್ತಿದ್ದವರ ದುರಂತ ಅಂತ್ಯಕ್ಕೆ ಕಾರಣವಾಯ್ತಾ ಚಾಲಕರ ಆ ತಪ್ಪು?
Related image2
ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಬಸ್; 20ಕ್ಕೂ ಅಧಿಕ ಪ್ರಯಾಣಿಕರು ಸಜೀವ ದಹನ
35
ದೂರು ದಾಖಲಿಸಿದ ಕಿರಣ್
Image Credit : Asianet News

ದೂರು ದಾಖಲಿಸಿದ ಕಿರಣ್

ಗಾಯಾಳು ಅನಿತಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ಖರ್ಚಾಗಿದೆ ಎಂದು ಅನಿತಾ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಅಪಘಾತದ ಬಳಿಕ ದಿವ್ಯಾ ಸುರೇಶ್ ಅವರು ಗಾಯಾಳುಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ. ಅಕ್ಟೋಬರ್ 7ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ಕಿರಣ್‌ ಎಂಬವರು ದೂರು ದಾಖಲಿಸಿದ್ದಾರೆ.

45
ಡಿಸಿಪಿ ಅನೂಪ್ ಹೇಳಿಕೆ
Image Credit : Asianet News

ಡಿಸಿಪಿ ಅನೂಪ್ ಹೇಳಿಕೆ

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಅನೂಪ್, ಬ್ಯಾಟರಾಯನಪುರ ಪೊಲೀಸ್ ಠಾಣೆಯ ಸಮೀಪದ ಎಂಎಂ ರಸ್ತೆಯಲ್ಲಿ ಅಕ್ಟೋಬರ್ 4ರಂದು ಅಪಘಾತ ಸಂಭವಿಸಿದೆ. ಎರಡು ದಿನ ಯಾರೂ ದೂರು ದಾಖಲಿಸಿರಲಿಲ್ಲ. ಅಕ್ಟೋಬರ್ 7ರಂದು ಕಿರಣ್ ಎಂಬವರು ದೂರು ದಾಖಲಿಸಿದ್ದಾರೆ. ತನಿಖೆಯಲ್ಲಿ ದಿವ್ಯಾ ಎಂಬವರ ಕಾರ್‌ನಿಂದ ಅಪಘಾತವಾಗಿರೋದು ತಿಳಿದು ಬಂದಿದೆ. ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡದ ಹೀರೋ ಪ್ರೀತಿಸಿದ್ದ ಆ ಹಿಂದಿ ನಟಿ ಯಾರು ಗೊತ್ತಾ?

55
ಕಾರ್ ನಿಲ್ಲಿಸದೇ ಹೋದ ದಿವ್ಯಾ ಸುರೇಶ್
Image Credit : Asianet News

ಕಾರ್ ನಿಲ್ಲಿಸದೇ ಹೋದ ದಿವ್ಯಾ ಸುರೇಶ್

ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ದೂರುದಾರ ಕಿರಣ್, ನಮ್ಮ ಕಸೀನ್‌ ಅನಾರೋಗ್ಯದ ಹಿನ್ನೆಲೆ ರಾತ್ರಿ ಆಸ್ಪತ್ರೆಗೆ ಹೊರಟಿದ್ದೇವು. ಟರ್ನ್‌ನಲ್ಲಿ ಕಪ್ಪು ಕಾರ್ ಡಿಕ್ಕಿಯಾಯ್ತು. ಮಹಿಳೆಯೊಬ್ಬರು ಕಾರ್ ಚಲಾಯಿಸುತ್ತಿರೋದು ಮಾತ್ರ ಕಾಣಿಸಿತು. ದೂರು ದಾಖಲಿಸಿದ ಬಳಿಕ ನಮಗೆ ಪೊಲೀಸರಿಂದ ಕಾರ್‌ ನಲ್ಲಿದ್ದು ದಿವ್ಯಾ ಸುರೇಶ್ ಎಂದು ಗೊತ್ತಾಗಿದೆ. ಗಾಯಾಳು ಅನಿತಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ನಟನೆಯ 'ಸ್ಪಿರಿಟ್' ಯಾರೆಲ್ಲಾ ಇದ್ದಾರೆ? 8 ಭಾಷೆಯ ಚಿತ್ರದಲ್ಲಿ ಬಾಲಿವುಡ್ ಹೀರೋ ವಿಲನ್!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ದಿವ್ಯಾ ಸುರೇಶ್
ಬಿಗ್ ಬಾಸ್
ಮನರಂಜನಾ ಸುದ್ದಿ
ಬೆಂಗಳೂರು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved