MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • ಕಾರ್ತಿಕ ಮಾಸದ ದೀಪೋತ್ಸವ: ದೀಪದಾನದಿಂದ ಧನಲಕ್ಷ್ಮೀ ಪೂಜೆಯವರೆಗೆ ಪಾವನ ಸಂಪ್ರದಾಯ

ಕಾರ್ತಿಕ ಮಾಸದ ದೀಪೋತ್ಸವ: ದೀಪದಾನದಿಂದ ಧನಲಕ್ಷ್ಮೀ ಪೂಜೆಯವರೆಗೆ ಪಾವನ ಸಂಪ್ರದಾಯ

ಅಶ್ವಿನಿ ಹುಣ್ಣಿಮೆಯಿಂದ ಕಾರ್ತಿಕ ಮಾಸದ ದೀಪೋತ್ಸವ ಆರಂಭವಾಗಿ ದೀಪದಾನ, ಧನಲಕ್ಷ್ಮೀ ಪೂಜೆ, ಯಮದೀಪ, ನರಕ ಚತುರ್ದಶಿ ಮತ್ತು ಬಲಿಪಾಡ್ಯಮಿ ಆಚರಣೆಗಳ ಮೂಲಕ ಬೆಳಕು, ಭಕ್ತಿ ಹಾಗೂ ದಾನದ ಮಹತ್ವವನ್ನು ದೈವಜ್ಞ ಹರೀಶ್ ಕಶ್ಯಪ ಹೇಳಿದ್ದಾರೆ.

1 Min read
Sushma Hegde
Published : Oct 15 2025, 04:36 PM IST
Share this Photo Gallery
  • FB
  • TW
  • Linkdin
  • Whatsapp
15
ಅಶ್ವಿನಿ ಮಾಸ
Image Credit : Google

ಅಶ್ವಿನಿ ಮಾಸ

ಅಶ್ವಿನಿ ಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ದೀಪಗಳ ಉತ್ಸವ, ದೀಪದಾನ, ದೀಪಾಲಂಕಾರ ಆರಂಭ ವಾಗುತ್ತದೆ. ವೈಶಾಖ, ಮಾಘಮಾಸಗಳಂತೆ ಕಾರ್ತಿಕ ಮಾಸ ತೀರ್ಥ ಸ್ನಾನವೂ ಮಹಾ ಪುಣ್ಯಕರವೆಂದು ಶಾಸ್ತ್ರಗಳು ಸಾರಿದೆ. ಸೂರ್ಯನ ತುಲಾ, ವೃಶ್ಚಿಕ ಸಂಚಾರವು ಇದ್ದ ಭೂಮಿಗೆ ಬೆಳಕು ಕಮ್ಮಿ ಯಾಗಿ ಶೀತ ಕಾಲ ಆವರಿಸುವುದರಿಂದ, ಸೂರ್ಯ ನಾರಾಯಣನಿಗೆ ಕೃತಜ್ಞತೆ ಸಲ್ಲಿಸುವ ಮಾಸವೇ ದೀಪಗಳ ಅಲಂಕಾರ ಮಾಸವೆನಿಸಿದೆ.

25
ದಾನ
Image Credit : Asianet News

ದಾನ

ದಾನದಿಂದ ತೃಪ್ತಿ ಫಲ, ಅನ್ನದಾನದಿಂದ ಅಕ್ಷಯವಾದ ಸುಖ ಪ್ರಾಪ್ತಿ.ತಿಲದಾನದಿಂದ ಸಂತಾನ ಪ್ರಾಪ್ತಿ, ದೀಪದಾನದಿಂದ ತೇಜೊವಂತ ಕಣ್ಣುಗಳು ದೊರೆಯುವುದು ಎಂದು ಪದ್ಮ ಪುರಾಣ ಹೇಳುತ್ತದೆ. ಜೋಡಿ ದೀಪ, ತೈಲ, ತುಪ್ಪಗಳ ದಾನ ಮಾಡುವುದು ಪುಣ್ಯಕರ, ಹೀಗಾಗಿ ಕಾರ್ತಿಕ ಮಾಸದಲ್ಲಿ ದೀಪದಾನಕ್ಕೆ ವಿಶೇಷ ಮಹತ್ವವಿದೆ.

Related Articles

Related image1
ಶತ್ರುಗಳನ್ನು ಕ್ಷಮಿಸುವ 3 ರಾಶಿಚಕ್ರ ಚಿಹ್ನೆಗಳು
Related image2
ಬುಧ ದೇವನಿಗೆ ಇಷ್ಟವಾಗುವ ರಾಶಿ, ಈ ಜನರು ಅಂಬಾನಿಯಂತೆ ವ್ಯವಹಾರದಲ್ಲಿ ಮುಂದು
35
ಅಶ್ವಿನಿ ಬಹುಳ ತ್ರಯೋದಶಿ
Image Credit : our own

ಅಶ್ವಿನಿ ಬಹುಳ ತ್ರಯೋದಶಿ

ಅಶ್ವಿನಿ ಬಹುಳ ತ್ರಯೋದಶಿ- ಧನಲಕ್ಷ್ಮೀ ಪೂಜೆ, ನೀರು ತುಂಬುವ ಹಬ್ಬ, ಸಂಜೆಯ ವೇಳೆ ಮನೆಯ ದಕ್ಷಿಣಕ್ಕೆ ಎರಡು ದೀಪಗಳ ಇಟ್ಟು ಯಮದೀಪದಾನ ಮಾಡುವುದು, ಯಮನು ನಮಗೆ ಧರ್ಮ ಮಾರ್ಗವನ್ನು ತೋರಲಿ ಎಂದು ಶ್ರೀ ಗಂಗಾಜನಕ ವಿಷ್ಣುವನ್ನು ಪೂಜಿಸುವುದು.

45
 ನರಕ ಚತುರ್ದಶಿ
Image Credit : PTI

ನರಕ ಚತುರ್ದಶಿ

ಮೂರನೆ ದಿನ ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ, ವಾಹನ ಪೂಜೆ ನಡೆಸಿ, ಸಂಜೆ ದೀಪಾಲಂಕಾರ ಮಾಡಿ ಲಕ್ಷ್ಮೀ ನಾರಾಯಣ ಪೂಜೆ ಮಾಡುವುದು. ನಂತರ ನರಕಾಸುರನ ಸಂಹಾರ ಕಥನ ಓದಿ, ಶ್ರೀ ಕೃಷ್ಣನಿಗೆ ತುಳಸಿ ಸಹಿತ ಪೂಜಿಸಿ ನಮಿಸುವುದು. ಇದೇ ದಿನ ಬೆಳಗ್ಗೆ ಎಣ್ಣೆ ಹಚ್ಚಿ ಅಬ್ಯಂಗ ಸ್ನಾನ ಮಾಡುವುದು,

55
ದೀಪಾವಳಿ ಅಮವಾಸ್ಯೆ
Image Credit : our own

ದೀಪಾವಳಿ ಅಮವಾಸ್ಯೆ

ಮೂರನೇ ದಿನ ದೀಪಾವಳಿ ಅಮವಾಸ್ಯೆ, ಅಂದು ಯಮತರ್ಪಣ, ಪಿತೃ ತರ್ಪಣ ಆಚರಣೆ ಉಂಟು. ಕುಲದಲ್ಲಿ ನಾನಾ ಬಗೆಯ ಅಪಮೃತ್ಯುಗಳಿಂದ ತೀರಿಕೊಂಡವರಿಗೆ ಸದ್ಗತಿಯಾಗಲೂ ಯಮತರ್ಪಣ ವಿಧಿ ಹೇಳಲಾಗಿದೆ. ಅಂದು ಸಂಜೆ ಬಲೀಂದ್ರ ಪೂಜಾ ಆರಂಭವಾಗಿ ಮಾರನೆಯ ದಿನ ಬಲಿಪಾಡ್ಯಮಿ ಹಬ್ಬ ಎರ್ಪಡುವುದು.

ಶ್ರೀ ರಾಮನ ರೂಪಿ ಮಹಾವಿಷ್ಣುವಿನ ಅವತಾರ ದಿನವೇ ಬಲಿಂದ್ರ ಪೂಜೆ, ಇದರ ಕಥನವನ್ನು ಓದಿ. ಮಹಾಭಕ್ತ ಪ್ರಹ್ಲಾದನ ವಂಶ ದೀಪಕನಾದ ಬಲಿರಾಜನೇ ಭವಿಷ್ಯದ ಇಂದ್ರನಾಗುವನು. ಈಗಿನಿಂದಲೇ ಬಲಿಪಾಡ್ಯಗಳಿಂದ ಶ್ರೀ ಹರಿಯ ಪೂಜಿಸುತ್ತಾ ನಮ್ಮ ಭವಿಷ್ಯದ ಹುಟ್ಟುಗಳಲ್ಲಿ ಹರಿ ಭಕ್ತ ನಮಗೆ ಉಂಟಾಗಲಿ ಎಂದೇ ಬಲಿರಾಜನಲ್ಲಿ ಪ್ರಾರ್ಥಿಸುವುದು ಬಲಿಪೂಜೆಯ ಹಿನ್ನೆಲೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 4ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಇದೆ. ಜ್ಯೋತಿಷ್ಯ, ಲೈಫ್‌ಸ್ಟೈಲ್‌ ನೆಚ್ಚಿನ ಕ್ಷೇತ್ರ. ಉತ್ತರ ಕನ್ನಡದ ಹುಡುಗಿ. ಚಿತ್ರಕಲೆ ಪಂಚಪ್ರಾಣ. ಓದು, ಪ್ರಕೃತಿ ಸೌಂದರ್ಯ ಸವಿಯುವುದು ಇಷ್ಟ.
ದೀಪಾವಳಿ
ಜ್ಯೋತಿಷ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved