Bengaluru Needs a New Satellite City ಸ್ಪಾರ್ಟ್ಅಪ್ ಸಹಸಂಸ್ಥಾಪಕ ಸಾರಾಂಶ್ ಆನಂದ್ ಅವರ ಪ್ರಕಾರ, ಬೆಂಗಳೂರಿನ ಸಮಸ್ಯೆಗೆ ಮತ್ತಷ್ಟು ಫ್ಲೈಓವರ್ಗಳು ಪರಿಹಾರವಲ್ಲ. ಬದಲಾಗಿ, ದೆಹಲಿಗೆ ಗುರ್ಗಾಂವ್ ಇದ್ದಂತೆ, ಬೆಂಗಳೂರಿನಿಂದ 30-40 ಕಿ.ಮೀ ಅಂತರದಲ್ಲಿ ಹೊಸ ನಗರವನ್ನು ನಿರ್ಮಿಸುವುದು ಅನಿವಾರ್ಯ.
ಬೆಂಗಳೂರು (ಅ.18): ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯದ ಬಗ್ಗೆ ಭಾರೀ ಪ್ರಶ್ನೆಗಳು ಎದುರಾಗುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಹೊಸ ಫ್ಲೈಓವರ್ಗಳು, ಸುರಂಗರಸ್ತೆಗಳ ನಿರ್ಮಾಣ ಘೋಷಣೆ ಮಾಡಿದೆ. ಇದರ ನಡುವೆ ಮಾರ್ಇಟ್ಅಪ್ ಎನ್ನುವ ಸ್ಪಾರ್ಟ್ಅಪ್ನ ಸಹಸಂಸ್ಥಾಪಕ ಸಾರಾಂಶ್ ಆನಂದ್, ಬೆಂಗಳೂರಿಗೆ ಮತ್ತಷ್ಟು ಫ್ಲೈಓವರ್ಗಳು ಬೇಕಿಲ್ಲ. ಆದರೆ, ಬೆಂಗಳೂರಿಗೆ ಜೊತೆಯಲ್ಲೇ ಸಾಗುವ ಇನ್ನೊಂದು ನಗರ ಖಂಡಿತಾ ಅಗತ್ಯವಿದೆ ಎಂದು ತಮ್ಮ ಲಿಂಕ್ಡಿನ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರಿಗೆ ಕೇವಲ ಸ್ಯಾಟಲೈಟ್ ಸಿಟಿ ಬರೀ ಅಗತ್ಯ ಮಾತ್ರವಲ್ಲ. ಅದು ಅನಿವಾರ್ಯ. ಅದರಲ್ಲೂ 2 ಗಂಟೆಗಳ ಮೈಸೂರು ಪ್ರಯಾಣ ಸಾಮಾನ್ಯ ಎಂದು ಅನಿಸಲು ಆರಂಭಿಸಿರುವ ಹೊತ್ತಿನಲ್ಲಿ ಬೆಂಗಳೂರಿಗೆ ತುರ್ತಾಗಿ ಸ್ಯಾಟಲೈಟ್ ಸಿಟಿ ಅಗತ್ಯ ಎದ್ದು ಕಾಣುತ್ತಿದೆ ಎಂದಿದ್ದಾರೆ.
ಇಂದು ನಾವು ಎಲ್ಲಿದ್ದೆವವೋ ಅಲ್ಲೇ ಇದ್ದೇವೆ. ವೃತ್ತಿಪರರು ಪ್ರತಿದಿನ 4–5 ಗಂಟೆಗಳ ಕಾಲ ರಸ್ತೆಯಲ್ಲಿ ಕಳೆಯುತ್ತಿದ್ದಾರೆ ಮತ್ತು ಪ್ರತಿಭಟಿಸುವ ಬದಲು, ನಾವು ಅದಕ್ಕೆ ಹೊಂದಿಕೊಳ್ಳುತ್ತಿದ್ದೇವೆ.ಜನರು ಅಕ್ಷರಶಃ 140 ಕಿಮೀ ದೂರದಲ್ಲಿರುವ ಮೈಸೂರನ್ನು ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆಗಳಿಗೆ "ಸಮಂಜಸ" ಪರ್ಯಾಯ ಎಂದು ಕರೆಯಲು ಪ್ರಾರಂಭಿಸಿದ್ದಾರೆ.
ಬೆಂಗಳೂರು ಎಲ್ಲಾ ಸಂಭಾವ್ಯ ದಿಕ್ಕಿನಲ್ಲಿಯೂ ಅಸ್ತವ್ಯಸ್ತವಾಗಿ ಮತ್ತು ಸಮರ್ಥನೀಯವಲ್ಲದಂತೆ ವಿಸ್ತರಿಸಿದೆ ಮತ್ತು ನಾವು ಸಂಪರ್ಕವನ್ನು ನೋಡಿದಾಗ ಅದು ನಿಜವಾಗಿಯೂ ಕಂಡುಬರುತ್ತದೆ. ಉತ್ತರವು ವಿಮಾನ ನಿಲ್ದಾಣದಿಂದ, ಪೂರ್ವವು ಐಟಿ ಪಾರ್ಕ್ಗಳಿಂದ ಮತ್ತು ದಕ್ಷಿಣವು ಗೇಟ್ಡ್ ಟೌನ್ಶಿಪ್ಗಳಿಂದ ವಿಸ್ತರಿಸಲ್ಪಟ್ಟಿದೆ. ಆದರೆ ಮೂಲಸೌಕರ್ಯವು ಶಾಶ್ವತವಾಗಿ ವಿಸ್ತರಿಸಲು ಸಾಧ್ಯವಿಲ್ಲ.
ದೆಹಲಿ ಬದುಕಿದ್ದು ಗುರ್ಗಾಂವ್ನಿಂದ
ಈ ನಿರ್ಣಾಯಕ ಹಂತದಲ್ಲಿ ಬದುಕುಳಿದ ನಗರಗಳು ಈ ರೀತಿ ವಿಸ್ತರಿಸಲಿಲ್ಲ.. ಅವುಗಳು ಬದಲಾದ ರೀತಿಯೇ ಭಿನ್ನ ಎಂದಿದ್ದಾರೆ. ದೆಹಲಿ ಬದುಕಿದ್ದು ಗುರ್ಗಾಂವ್ನಿಂದ.ಒಂದು ಕಾಲದಲ್ಲಿ ಕೃಷಿಭೂಮಿಯಾಗಿದ್ದ ಗುರ್ಗಾಂವ್ ಈಗ ಹರಿಯಾಣದ ತೆರಿಗೆ ಆದಾಯದ 70% ರಷ್ಟು ಕೊಡುಗೆ ನೀಡುತ್ತದೆ ಮತ್ತು 250+ ಫಾರ್ಚೂನ್ 500 ಕಂಪನಿಗಳಿಗೆ ನೆಲೆಯಾಗಿದೆ.
ಅದೇ ರೀತಿ ನವೀ ಮುಂಬೈ. 1972ರಲ್ಲಿ ಪ್ಲ್ಯಾನ್ ಮಾಡಲಾದ ಸಿಟಿ. ಇಂದು 1.2 ಮಿಲಿಯನ್ ಜನರಿಗೆ ನೆಲೆಯಾಗಿದೆ. ತನ್ನದೇ ಐಟಿ ಪಾರ್ಕ್ಗಳನ್ನು ಹೊಂದಿದ್ದು, ಮುಂಬೈ ಮೇಲಿನ ಹೊರೆಯನ್ನು ಶೇ. 30ರಷ್ಟು ಕಡಿಮೆ ಮಾಡಿದೆ.
ಅದರೊಂದಿಗೆ ಸೈಬರಾಬಾದ್ (ಹೈದರಾಬಾದ್) ಬಂಜರು ಭೂಮಿಯಿಂದ ಹೈಟೆಕ್ ನಗರವಾಗಿ ಪರಿವರ್ತನೆಯಾಗಿದೆ. ಭಾರತದ ಎರಡನೇ ಅತಿದೊಡ್ಡ ಐಟಿ ಕೇಂದ್ರವಾಗಿ ರೂಪಾಂತರಗೊಂಡು, ಸಮಾನಾಂತರ ಆರ್ಥಿಕ ಕೇಂದ್ರವನ್ನು ಸೃಷ್ಟಿಸಿದೆ.
ಹೊಸ ನಗರ ನಿರ್ಮಾಣಕ್ಕೆ ಬದ್ಧರಾಗಬೇಕು
ಅದೇ ರೀತಿಯಲ್ಲಿ ಬೆಂಗಳೂರಿನ ವಿಚಾರಕ್ಕೆ ಬಂದಾಗ, ಮೈಸೂರಿನ ಅಭಿವೃದ್ಧಿಯು ಉತ್ತರವಲ್ಲ, ಬದಲಾಗಿ ಎಚ್ಚರಿಕೆಯ ಗಂಟೆಯಾಗಿದೆ. ಹೊಸ ನಗರವನ್ನು ನಿರ್ಮಿಸುವತ್ತ ಅಧಿಕಾರಿಗಳನ್ನು ತ್ವರಿತವಾಗಿ ಎಚ್ಚರಗೊಳ್ಳಲು ಇದು ಸಕಾಲ ಎಂದಿದ್ದಾರೆ. ಬೆಂಗಳೂರಿಗೆ ಬೇಕಾಗಿರುವುದು ಹೊಸ ರಸ್ತೆಗಳು ಅಥವಾ ಹೊಸ ಮೆಟ್ರೋ ಮಾರ್ಗಗಳು ಮಾತ್ರವಲ್ಲ, 30-40 ಕಿ.ಮೀ ಒಳಗೆ ಹೊಸ ನಗರವೂ ಬೇಕು, ಇದನ್ನು ಮೊದಲ ದಿನದಿಂದಲೇ ವಿಸ್ತೃತ ಬೆಳವಣಿಗೆ, ಸುಸ್ಥಿರ ಜೀವನ ಮತ್ತು ಸಂಪರ್ಕಿತ ಮೂಲಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
ಬೆಂಗಳೂರಿಗೆ ಉಪಗ್ರಹ ನಗರ ಬೇಕೇ ಎಂಬುದು ಪ್ರಶ್ನೆಯಲ್ಲ. ನಾವು ಅದನ್ನು ಈಗ ಯೋಜಿಸುತ್ತೇವೆಯೇ ಅಥವಾ ನಂತರ ಭಯಭೀತರಾಗಿ ನಿರ್ಮಿಸುತ್ತೇವೆಯೇ ಎನ್ನುವುದೇ ಮುಖ್ಯ ಎಂದು ಬರೆದಿದ್ದಾರೆ.

