Owl omen: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗೂಬೆ, ಪಾರಿವಾಳ, ಬೆಕ್ಕಿನಂತಹ ಕೆಲವು ಪ್ರಾಣಿಗಳು ಮನೆಗೆ ಬರುವುದು ಒಂದು ಬಗೆಯ ಸಂಕೇತವಾಗಿದೆ. ಇವುಗಳ ಆಗಮನ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ತರಬಹುದು. 

ಕೆಲವೊಂದು ಪ್ರಾಣಿಗಳು ಮನೆಯನ್ನು ಪ್ರವೇಶಿಸಿದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಹಾಗೇ ಕೆಲವೊಂದು ಪ್ರಾಣಿಗಳು ಮನೆಯನ್ನು ಪ್ರವೇಶಿಸಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಇದರ ಕುರಿತು ಉಲ್ಲೇಖಗಳಿವೆ. ಇದ್ದಕ್ಕಿದ್ದಂತೆ ಮನೆಗೆ ಈ ಪ್ರಾಣಿ, ಪಕ್ಷಿಗಳು ಪ್ರವೇಶಿಸುವುದರಿಂದ ಹಣದ ಸಮಸ್ಯೆಯನ್ನು, ಆರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಷ್ಟು ಮಾತ್ರವಲ್ಲ, ಇವುಗಳು ನಮ್ಮ ಭವಿಷ್ಯದ ಕುರಿತು ಕೂಡ ಸಂದೇಶವನ್ನು ನೀಡುತ್ತದೆ ಎನ್ನಲಾಗಿದೆ. ದುರದೃಷ್ಟವನ್ನು ತರುವ ಆ ಪ್ರಾಣಿ, ಪಕ್ಷಿಗಳಾವುವು ನೋಡಿ.

ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಮನೆಯೊಳಗೆ ನುಗ್ಗುವುದು ಅಷ್ಟು ಒಳ್ಳೆಯದಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಾವಳಿಯಂದು ಗೂಬೆಗಳ ಆಗಮನವನ್ನು ಶುಭವೆಂದು ಪರಿಗಣಿಸಲಾಗಿದೆ. ದೀಪಾವಳಿಯಂದು, ಇದು ಲಕ್ಷ್ಮಿ ದೇವಿಯ ಆಗಮನವನ್ನು ಸೂಚಿಸುತ್ತದೆ. ಆದರೆ ಇತರ ದಿನಗಳಲ್ಲಿ ಅದು ಮನೆಗೆ ಆಗಮಿಸುವುದು ಹಾನಿಕಾರಕ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ ಮತ್ತು ಮನೆಯ ಪ್ರಗತಿಯನ್ನು ನಾಶಮಾಡುತ್ತದೆ ಎನ್ನುವ ನಂಬಿಕೆಯಿದೆ.

ಪಾರಿವಾಳವು ಶಾಂತ ಹಕ್ಕಿ ಎಂಬುದರಲ್ಲಿ ಸಂದೇಹವಿಲ್ಲ ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಪಾರಿವಾಳದ ಆಗಮನವನ್ನು ಅಸಹ್ಯವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಪಾರಿವಾಳಗಳು ಗೂಡು ಕಟ್ಟಿದಾಗ ಅದು ಆ ಮನೆಗೆ ಹಾನಿಯನ್ನು ನೀಡುತ್ತದೆ. ಪಾರಿವಾಳವು ರಾಹುಗೆ ಸಂಬಂಧಿಸಿದೆ ಮತ್ತು ಮನೆಯಲ್ಲಿ ಉಳಿಯುವ ಮೂಲಕ ಆ ಸ್ಥಳವು ನಿರ್ಜನವಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಬರುತ್ತದೆ. ಜನರು ವೈಫಲ್ಯಗಳನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ.

ಬೆಕ್ಕು ಮನೆಯೊಳಗೆ ಬರುವುದು ಮಾತ್ರವಲ್ಲ, ಅವುಗಳ ಧ್ವನಿ ಕೂಡ ಕೆಟ್ಟದ್ದು ಎನ್ನುವ ನಂಬಿಕೆಯಿದೆ. ಬೆಕ್ಕನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಕಪ್ಪು ಬೆಕ್ಕು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಆದರೆ ನಂಬಿಕೆಗಳ ಪ್ರಕಾರ, ಬೆಕ್ಕು ಎಂದಿಗೂ ಸಕಾರಾತ್ಮಕವಾಗಿ ಯೋಚಿಸುವುದಿಲ್ಲ, ಅವುಗಳು ತಾವು ನೆಲೆಯಾಗಿರುವ ಮನೆಯಲ್ಲಿ ಅಥವಾ ಸ್ಥಳದಲ್ಲಿ ಎಂದಿಗೂ ಕೆಟ್ಟದ್ದನ್ನು ಬಯಸುತ್ತವೆ. ಬೆಕ್ಕು ಮನೆಯಲ್ಲಿ ಮರಿ ಹಾಕಿದರೂ ಅವುಗಳನ್ನು ಅಸಹ್ಯವೆನ್ನಲಾಗುತ್ತದೆ. ಆದಾಗ್ಯೂ, ಅನೇಕ ದೇಶಗಳಲ್ಲಿ, ಬೆಕ್ಕನ್ನು ಸಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ.

ರಣಹದ್ದು ಸಹ ಶುಭವೆಂದು ಪರಿಗಣಿಸಲಾಗುವುದಿಲ್ಲ. ರಣಹದ್ದು ಸತ್ತ ಜೀವಿಗಳನ್ನು ತಿನ್ನುತ್ತದೆ ಆದ್ದರಿಂದ ಇದನ್ನು ದುರುದ್ದೇಶಪೂರಿತ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ರಣ ಹದ್ದುಗಳು ಯಾವ ಮನೆಯಲ್ಲಿ ವಾಸವಾಗಿರುತ್ತವೆಯೋ ಆ ಮನೆ ಎಂದಿಗೂ ಬೆಳೆಯಲು ಸಾಧ್ಯವಿಲ್ಲ. ಮನೆಯ ಸದಸ್ಯರ ನಡುವೆ ಯಾವಾಗಲೂ ಜಗಳ ನಡೆಯುತ್ತದೆ ಮತ್ತು ಅವರ ಪ್ರಗತಿ ಎಂದಿಗೂ ಸಾಧ್ಯವಿಲ್ಲ. ಆ ಮನೆಯಲ್ಲಿನ ಧನಾತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಹಣದ ಸಮಸ್ಯೆಯನ್ನೂ ಕೂಡ ಎದುರಿಸಬೇಕಾಗುತ್ತದೆ. ರಣಹದ್ದು ಮನೆಯೊಳಗೆ ಬಂದಾಗಲೆಲ್ಲಾ ಶಾಂತಿ ಮಂತ್ರವನ್ನು ಜಪಿಸಬೇಕೆಂದು ಧಾರ್ಮಿಕ ನಂಬಿಕೆಗಳಲ್ಲಿ ಹೇಳಲಾಗಿದೆ.

ನಾಯಿ ಮತ್ತು ಮಾನವ ಪ್ರಾಚೀನ ಕಾಲದಿಂದಲೂ ಸಂಬಂಧ ಹೊಂದಿವೆ. ಹೆಚ್ಚಿನ ಜನರು ನಾಯಿಗಳನ್ನು ಮನೆಗಳಲ್ಲಿ ಸಾಕಿಕೊಳ್ಳುತ್ತಾರೆ. ಜ್ಯೋತಿಷ್ಯದಲ್ಲಿ, ನಾಯಿ ರಾಹು, ಕೇತು ಮತ್ತು ಶನಿಯೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನಲಾಗಿದೆ. ಆದರೆ ಹೊರಗಿನ ನಾಯಿ ಮನೆಯೊಳಗೆ ಬಂದರೆ ಅದನ್ನು ಅಸಹ್ಯವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಹೊರಗಿನಿಂದ ಬಂದ ನಾಯಿಗಳು ನಕಾರಾತ್ಮಕ ಶಕ್ತಿಯನ್ನು ತಮ್ಮಲ್ಲಿಟ್ಟುಕೊಂಡು ಮನೆಗೆ ಬರುತ್ತದೆ. ಇದು ಹಣದ ನಷ್ಟಕ್ಕೆ ಮತ್ತು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇವುಗಳ ಕುರಿತು ಲಾಲ್ ಕಿತಾಬ್‌ನಲ್ಲೂ ಉಲ್ಲೇಖಿಸಲಾಗಿದೆ. ಆದರೆ ನಾಯಿಯೊಂದು ಮನೆಯಲ್ಲಿ ಮರಿ ಹಾಕುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ.

ಧರ್ಮಗ್ರಂಥಗಳಲ್ಲಿ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಮನೆಗಳಿಗೆ ಬಾವಲಿಗಳು ಬರುವುದನ್ನು ಕೆಟ್ಟದೆಂದು ಪರಿಗಣಿಸಲಾಗುತ್ತದೆ. ಬಾವಲಿಗಳು ಕತ್ತಲೆಯ ಸಂಕೇತವಾಗಿದೆ. ಬಾವಲಿಗಳು ಯಾವ ಮನೆಯನ್ನು ಪ್ರವೇಶಿಸುತ್ತದೆಯೋ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸಿಸುತ್ತವೆ ಮತ್ತು ಜೀವನದಲ್ಲಿ ತೊಂದರೆಗಳು ಪ್ರಾರಂಭವಾಗುತ್ತವೆ, ಆರೋಗ್ಯವೂ ಹದಗೆಡುತ್ತದೆ. ಕೆಲವು ಕೆಟ್ಟ ಸುದ್ದಿಗಳು ಬರಬಹುದು.