LIVE NOW
Published : Feb 13, 2026, 10:56 AM ISTUpdated : Feb 13, 2026, 02:08 PM IST

India News Live ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಪಕ್ಷಕ್ಕೆ ಅಭೂತಪೂರ್ವ ಗೆಲುವು: 11 ಕ್ಲಾಸ್ ವಿದ್ಯಾರ್ಥಿನಿ ಮೇಲೆ ನಾಲ್ಕು ಕಾರಿನಲ್ಲಿ ಅತ್ಯಾ**ಚಾರ, ವಿಡಿಯೋ ಸೆರೆ ಹಿಡಿದು ಬ್ಲಾಕ್‌ಮೇಲ್

ಸಾರಾಂಶ

2024 ರ ರಾಜಕೀಯ ದಂಗೆಯ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ( ಬಿಎನ್‌ಪಿ) ಅಭೂತಪೂರ್ವ ಗೆಲುವು ದಾಖಲಿಸಿದ್ದು, 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವಿನ ಜಯಭೇರಿ ಬಾರಿಸಿದೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ 13 ನೇ ಸಂಸತ್ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದ್ದಾರೆ. ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಪುತ್ರ ರೆಹಮಾನ್ ಅವರು ತಾಯಿಯ ನಿಧನದ ನಂತರ ಜನವರಿ 9 ರಂದು ಪಕ್ಷದ ಅಧ್ಯಕ್ಷರಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡಿದ್ದರು. ಭರ್ಜರಿ ಗೆಲುವು ಸಾಧಿಸಿದ ರೆಹಮಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

 

02:08 PM (IST) Feb 13

11 ಕ್ಲಾಸ್ ವಿದ್ಯಾರ್ಥಿನಿ ಮೇಲೆ ನಾಲ್ಕು ಕಾರಿನಲ್ಲಿ ಅತ್ಯಾ**ಚಾರ, ವಿಡಿಯೋ ಸೆರೆ ಹಿಡಿದು ಬ್ಲಾಕ್‌ಮೇಲ್

11 ಕ್ಲಾಸ್ ವಿದ್ಯಾರ್ಥಿನಿ ಮೇಲೆ ನಾಲ್ಕು ಕಾರಿನಲ್ಲಿ ಅತ್ಯಾ**ಚಾರ, ಅಪ್ರಾಪ್ತ ಬಾಲಕಿಯ ಮೇಲೆ ಎರಗಿದ ಆರೋಪಿ ಅಸೌಫ್ ಆಲಿ ಖಾನ್ ಸೇರಿದಂತೆ ಇತರ ಮೂವರು ಕೃತ್ಯ ಎಸಗಿದ್ದಾರೆ. ಆರೋಪಿಗಳು ವಿಡಿಯೋ ರೆಕಾರ್ಡ್ ಬ್ಲಾಕ್‌ಮೇಲ್ ಮಾಡಿದ ಘಟನೆ ನಡೆದಿದೆ.

 

Read Full Story

01:06 PM (IST) Feb 13

ಗೆಳತಿ ಜೊತೆ ಪಿಯುಸಿ ವಿದ್ಯಾರ್ಥಿ ಸ್ಪೀಡ್ ಡ್ರೈವ್, ಭೀಕರ ಅಫಘಾತದಲ್ಲಿ ಪುಟ್ಟ ಬಾಲಕ ಸಾವು, ಐವರು ಗಂಭೀರ

ಗೆಳತಿ ಜೊತೆ ಪಿಯುಸಿ ವಿದ್ಯಾರ್ಥಿ ಸ್ಪೀಡ್ ಡ್ರೈವ್, ಒಂದೆಡೆ ಪಾರ್ಟಿ ಮತ್ತು, ಮತ್ತೊಂದೆಡೆ ಗೆಳತಿಯ ಸಾಥ್, ಸ್ವರ್ಗಕ್ಕೆ ಮೂರೇ ಗೇಣು ಎಂದು ವೇಗವಾಗಿ ಕಾರು ಚಲಾಯಿಸಿದವ ಪಾದಾಚಾರಿಗಳ ಮೇಲೆ ಕಾರು ಹರಿಸಿ 6 ವರ್ಷದ ಬಾಲಕನ ಬಲಿತೆಗೆದುಕೊಂಡಿದ್ದಾನೆ. ಐವರು ಗಂಭೀರ.

 

Read Full Story

12:48 PM (IST) Feb 13

ಬಾಂಗ್ಲಾದೇಶ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?

2024ರ ದಂಗೆಯ ನಂತರ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ನೇತೃತ್ವದ ಬಿಎನ್‌ಪಿ ಗೆದ್ದಿದೆ. ಈ ರಾಜಕೀಯ ಬದಲಾವಣೆಯು ಭಾರತದ ಮೇಲೆ ಬೀರಬಹುದಾದ ಪರಿಣಾಮಗಳು, ವಿಶೇಷವಾಗಿ ಪಾಕಿಸ್ತಾನ-ಚೀನಾ-ಬಾಂಗ್ಲಾ ಮೈತ್ರಿಯ ಸಾಧ್ಯತೆ ಮತ್ತು ಭದ್ರತಾ ಸವಾಲುಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

Read Full Story

12:04 PM (IST) Feb 13

ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಮದುವೆ - 100 ಕೋಟಿ OTT ರೈಟ್ಸ್? ಆದ್ರೆ 'ಆ' ವಿಚಾರಕ್ಕೆ ಹೆದರಿದ ತಾರಾ ಜೋಡಿ!

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ವಿಡಿಯೋ ರೈಟ್ಸ್‌ಗೆ ಓಟಿಟಿ ವೇದಿಕೆಯೊಂದು 100 ಕೋಟಿ ರೂ. ಆಫರ್ ನೀಡಿದೆ ಎಂದು ವರದಿಯಾಗಿದೆ. ಆದರೆ, ತಮ್ಮ ಖಾಸಗಿ ಬದುಕನ್ನು ಕ್ಯಾಮೆರಾ ಮುಂದೆ ತೆರೆದಿಡಲು ಇಷ್ಟಪಡದ ಈ ಜೋಡಿ, ಈ ಬೃಹತ್ ಮೊತ್ತದ ಆಫರ್ ಅನ್ನು ತಿರಸ್ಕರಿಸಿದೆ ಎನ್ನಲಾಗಿದೆ.
Read Full Story

11:52 AM (IST) Feb 13

Digital Arrest Scam - ಡಿಜಿಟಲ್‌ ಅರೆಸ್ಟ್‌ಗಾಗಿ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ!

ಕಾಂಬೋಡಿಯಾದಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಬೃಹತ್ ಡಿಜಿಟಲ್ ಅರೆಸ್ಟ್ ವಂಚನಾ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ. ಮುಂಬೈ ಪೊಲೀಸ್ ಠಾಣೆಯಂತೆ ಸೃಷ್ಟಿಸಲಾದ,  ಭಾರತದ ಧ್ವಜ, ಗಾಂಧಿ-ಅಂಬೇಡ್ಕರ್ ಚಿತ್ರಗಳಿದ್ದವು. ಸುಮಾರು 200 ಕೇಂದ್ರಗಳಿಗೆ ಬೀಗ, ದಾಳಿ ವೇಳೆ ಆರೋಪಿಗಳು ಪರಾರಿ.

Read Full Story

11:31 AM (IST) Feb 13

Vande Mataram - 'ಗುಲಾಮಗಿರಿ ಬಿಟ್ಟು ಶಿಕ್ಷಣದತ್ತ ಗಮನಹರಿಸಿ', ಮದನಿಗೆ ತಿರುಗೇಟು ಕೊಟ್ಟ ಸಚಿವ ಓಪಿ ರಾಜ್‌ಭರ್!

ವಂದೇ ಮಾತರಂ ಕಡ್ಡಾಯಗೊಳಿಸುವ ಕೇಂದ್ರದ ನಿರ್ದೇಶನಕ್ಕೆ ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಅರ್ಷದ್ ಮದನಿ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಉತ್ತರ ಪ್ರದೇಶ ಸಚಿವ ಓಪಿ ರಾಜ್‌ಭರ್, ಶಿಕ್ಷಣ ಮತ್ತು ರಾಜಕೀಯದತ್ತ ಗಮನಹರಿಸಿ ಎಂದು ಮದನಿಗೆ ಹೇಳಿದ್ದಾರೆ. 

Read Full Story

More Trending News