ಮದುವೆ ಉಡುಪು ಸಂಗ್ರಹಿಸಿ ಬಡ ಹೆಣ್ಮಕ್ಕಳಿಗೆ ನೆರವು ನೀಡುವ ಯುವತಿ

ಮದುವೆ ಉಡುಪು ಸಂಗ್ರಹಿಸಿ ಬಡ ಹೆಣ್ಮಕ್ಕಳಿಗೆ ನೆರವು ನೀಡುವ ಯುವತಿ

Published : Apr 24, 2022, 12:28 PM IST

ಕಲಿಯುಗದಲ್ಲಿ ಸಾಕಷ್ಟು ದಾನ ಧರ್ಮ ಮಾಡುವವರು ಸಿಗುವುದೇ ಕಷ್ಟ. ಬರೇ ಸ್ವಾರ್ಥಿಗಳೇ ತುಂಬಿರೋ ಈ ಜಗತ್ತಲ್ಲಿ ಮುಸ್ಲಿಂ ಹೆಣ್ಣು ಮಗಳೊಬ್ಬಳು ಬಹಳ ಭಿನ್ನವಾಗಿ ನಿಂತಿದ್ದಾಳೆ. ಕಡುಬಡತನದಲ್ಲಿ ಇದ್ದರೂ ಬೇರೆ ಬಡವರ ಖುಷಿಗೆ ಈ ಹೆಣ್ಣು ಮಗಳು ಕಾರಣವಾಗಿದ್ದಾಳೆ.

ಮನೆಯ​ ತುಂಬಾ ತುಂಬಿರೋ ಬಗೆ ಬಗೆಯ ಉಡುಪುಗಳು(dresses).. ಬಟ್ಟೆ ಮಳಿಗೆಗೆ ಬಂದಿದ್ದೇವೇನೋ ಎಂದು ಭಾಸವಾಗುಂತೆ ತುಂಬಿರೋ ಬಟ್ಟೆಬರೆಗಳು. ಇದು ಶಹರಾ ಬಾನು ಎಂಬ 20 ವರ್ಷದ ಯುವತಿ ಸಂಗ್ರಹಿಸಿರೋ ಮದುವೆ ಉಡುಪುಗಳು. ಈ ಉಡುಪುಗಳನ್ನ ಈಕೆ ಬಡವರ ಮದುವೆಗೆ ಉಚಿತವಾಗಿ ನೀಡುತ್ತಾಳೆ. ಈಕೆ ಕೊಡಗು ಜಿಲ್ಲೆಯ ಮಡಿಕೇರಿ(Madikeri) ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮದ ಶಹರಾ ಬಾನುವಿನ ಕಥೆ. ಬಡವರ ಮದುವೆಗೆ ತಾನು ಯಾಕೆ ಉಡುಪುಗಳನ್ನ ಸಂಗ್ರಹಿಸಿ  ಉಚಿತವಾಗಿ ನೀಡಬಾರದು ಎಂದು ಯೋಚಿಸಿದ್ದಾರೆ. ವಿವಿಧ ಕಡೆಗಳಿಂದ ಮದುವೆಯಲ್ಲಿ ಕೇವಲ ಒಂದು ಬಾರಿ ಬಳಸಿದ ಉತ್ತಮ ಉಡುಪುಗಳನ್ನ ಸಂಗ್ರಹಿಸಲಾರಂಭಿಸಿದ್ದಾರೆ. ಇವೆಲ್ಲವೂ ಶಹರಾಳ ಬಳಿ ಸಂಗ್ರಹದಲ್ಲಿವೆ. ಇವುಗಳನ್ನು ಬಡವರ ಮನೆಯ ಮದುವೆಗೆ ಉಚಿತವಾಗಿ ಕೊಡುತ್ತಾರೆ.  

ಅಲ್ಲದೆ ಬಡ ಹೆಣ್ಣು ಮಕ್ಕಳ ಮದುವೆಗೆ ತೆರಳಿ ಉಚಿತವಾಗಿ ಮೇಕಪ್ ಕೂಡ ಮಾಡಿಕೊಡುತ್ತಾರೆ. ಕೂಲಿ ಕೆಲಸ ಮಾಡಿಕೊಂಡು ತಾವೇ ಕಷ್ಟದಲ್ಲಿರೂ ಸಮಾಜ ಮುಖಿ ಸೇವೆ ಮಾಡುತ್ತಿರುವುದು ಎಲ್ಲರ ಪ್ರಶಂಸೆಗೆ  ಪಾತ್ರವಾಗಿದೆ. ಪುಟ್ಟ ಬಾಡಿಗೆ ಮನೆಯಲ್ಲಿದ್ದುಕೊಂಡು  ಈಕೆಯ ಪೋಷಕರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಆದ್ರೆ ಮಗಳು ಶಹರಾ ಮೇಕಪ್​ ವೃತ್ತಿ ಮಾಡಿಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾಲು ಬೇಡ ಅನ್ನೋರು ಪೌಷ್ಠಿಕಾಂಶಕ್ಕಾಗಿ ಈ ಬದಲಿ ಆಹಾರ ಸೇವಿಸಿ

ಕಳೆದ ಎರಡು ವರ್ಷಗಳಿಂದ ಬಹಳಷ್ಟು ವಿವಾಹಗಳಿಗೆ ಶಹರಾ  ನೆರವಾಗಿದ್ದಾರೆ. ಯಾರೇ ಬಡವರು ತಮ್ಮ ಹೆಣ್ಣು ಮಗಳ ವಿವಾಹದ ಉಡುಪು ತೆಗೆಯಲು ಬಹಳ ಕಷ್ಟ ಆಗುತ್ತದೆ ಅಂತಾದ್ರೆ ದಯವಿಟ್ಟು ನನ್ನ ಬಳಿ ಬನ್ನಿ, ನಾನು ಸಹಾಯ ಮಾಡುತ್ತೇನೆ ಅಂತಾರೆ ಶಹರಾ ಬಾನು. ಸ್ವಾರ್ಥ ಸಾಧನೆಯಲ್ಲಿ ತೊಡಗಿರುವ ಎಷ್ಟೋ ಶ್ರೀಮಂತರ ಮಧ್ಯೆ ಇಂತಹ ಯುವತಿಯರು ನಿಜಕ್ಕೂ ಭಿನ್ನವಾಗಿ ನಿಲ್ಲುತ್ತಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!
04:42ರಶ್ಮಿಕಾ ಮಂದಣ್ಣಗೆ ಮತ್ತೊಬ್ಬ ಕನ್ನಡತಿಯಿಂದ ಸವಾಲ್, ಅಷ್ಟರಲ್ಲೇ ಇನ್ನೊಬ್ಬರೂ ಕಾಲೆಳೆಯೋಕೆ ರೆಡಿನಾ?
16:23ಮೋದಿ ಸರ್ಕಾರದ 11 ವರ್ಷದಲ್ಲಿ ನಾರಿಶಕ್ತಿಯಲ್ಲಾದ ಬದಲಾವಣೆ ಏನು?
15:41ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಕ್ರಾಂತಿಕಾರಿ ನಡೆ,ಭಾರತೀಯ ನಾರಿಯರ ಮನಗೆದ್ದ ಯೋಜನೆ ಯಾವುದು
07:57ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ರವಿಶಂಕರ್ ಗುರೂಜಿ ಮಾತು!
Read more