ಮಹಾಭಾರತ ಧಾರಾವಾಹಿಗೆ ಮೆಚ್ಚುಗೆ; ಶ್ರೀಕೃಷ್ಣ ಸಾರವನ್ನು ಶ್ಲಾಘಿಸಿದ ಸಿಎಂ

Jun 13, 2020, 11:39 AM IST

ಬೆಂಗಳೂರು (ಜೂ. 13): ಲಾಕ್‌ಡೌನ್ ಸಮಯದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಮಹಾಭಾರತ' ಧಾರಾವಾಹಿಯನ್ನು ಡಿಡಿ ನ್ಯಾಶನಲ್‌ನಲ್ಲಿ ಪ್ರಸಾರ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಕೃಷ್ಣನ ಕುರಿತ ಈ ಆಸಕ್ತಿಕರ ವಿಚಾರಗಳು ಬಹಳ ಜನರಿಗೆ ತಿಳಿದಿಲ್ಲ!

ಅದನ್ನೇ ಈಗ ಸ್ಟಾರ್‌ ಸುವರ್ಣದಲ್ಲಿ ಕನ್ನಡ ಅವತರಣಿಕೆಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಇದೂ ಕೂಡಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು, 'ಮಹಾಭಾರತ ಧಾರಾವಾಹಿಯಲ್ಲಿ ಬರುವ ಶ್ರೀ ಕೃಷ್ಣ ಸಾರವನ್ನು ಇಷ್ಟಪಟ್ಟಿರುವುದಾಗಿ ಹೇಳಿದ್ದು, ಇಂದಿನ ಯುವಕರಿಗೆ ಸಂಸ್ಕಾರ ಕಲಿಸಲು ತುಂಬಾನೆ ಉಪಯೋಗಕಾರಿ' ಎಂದಿದ್ದಾರೆ.