6 ತಿಂಗಳ ಮೊದಲೇ ಶಾಲಾ ದಾಖಲಾತಿ ಪ್ರಕ್ರಿಯೆ ಶುರು: 1ನೇ ತರಗತಿಗೆ ಸೇರಿಸೋಕೆ 6 ವರ್ಷ ಆಗಿರಲೇಬೇಕಾ..?

6 ತಿಂಗಳ ಮೊದಲೇ ಶಾಲಾ ದಾಖಲಾತಿ ಪ್ರಕ್ರಿಯೆ ಶುರು: 1ನೇ ತರಗತಿಗೆ ಸೇರಿಸೋಕೆ 6 ವರ್ಷ ಆಗಿರಲೇಬೇಕಾ..?

Published : Oct 07, 2023, 10:31 AM IST

ಮುಂದಿನ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಇನ್ನೂ ಅರ್ಧ ವರ್ಷ ಬಾಕಿ ಇದೆ. ಆಗಲೇ ಕೆಲ ಶಾಲೆಗಳಲ್ಲಿ 2024-25ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆದ್ರೆ, ಒಂದನೇ ತರಗತಿಗೆ ಮಕ್ಕಳನ್ನ ಸೇರಿಸಲು ಪೋಷಕರಿಗೆ ಗೊಂದಲ ಶುರುವಾಗಿದೆ. 
 

2023-24ನೇ ಸಾಲಿನ ಶೈಕ್ಷಣಿಕ ವರ್ಷದ ಮಧ್ಯದಲ್ಲಿದ್ದೇವೆ. ಆಗಲೇ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ(enrollment process) ಶುರುವಾಗಿದೆ. 6 ತಿಂಗಳು ಬಾಕಿ ಇರುವಾಗಲೇ ಕೆಲ ಖಾಸಗಿ ಶಾಲೆಗಳು(Schools) ಅಡ್ಮಿಷನ್ ಓಪನ್ ಮಾಡಿವೆ. ಆದ್ರೆ, ಪೋಷಕರಿಗೆ ಎನ್ಇಪಿ-ಎಸ್ಇಪಿ(NEP-SEP)  ಗೊಂದಲ ಶುರುವಾಗಿದೆ. 2023-24ನೇ ಸಾಲಿನಲ್ಲಿ NEP ಅಡಿ 6 ವರ್ಷ ತುಂಬಿದ ಮಕ್ಕಳನ್ನ ಮಾತ್ರ 1ನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗಿದೆ. ಆದ್ರೆ ಕಾಂಗ್ರೆಸ್(Congress) ಇದನ್ನು ರದ್ದು ಪಡಿಸಿದ್ದು, ಎಸ್ಇಪಿ ಶಿಕ್ಷಣ ಪದ್ಧತಿಯನ್ನೆ ಅನುಸರಿಸೋದಾಗಿ ಹೇಳಿದೆ. ಆದ್ರೆ, ಇದುವರೆಗೂ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಹೀಗಾಗಿ ತಮ್ಮ ಮಗುವನ್ನು 1ನೇ ತರಗತಿಗೆ ಸೇರಿಸೋಕೆ 6 ವರ್ಷ ಆಗಿರಬೇಕಾ..? ಅಥವಾ 5 ವರ್ಷ ಆಗಿದ್ರೆ ಸಾಕಾ..? ಅನ್ನೋ ಗೊಂದಲ ಪೋಷಕರದ್ದು. ಪೋಷಕರು ತಮ್ಮ ಗೊಂದಲ ಪರಿಹರಿಸಿಕೊಳ್ಳಲು ಶಾಲೆಗಳಿಗೆ ಕರೆ ಮಾಡಿ  ವಿಚಾರಿಸುತ್ತಿದ್ದಾರೆ. ಆದ್ರೆ ಖಾಸಗಿ ಶಾಲೆಗಳಿಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಕೂಡಲೇ ಶಿಕ್ಷಣ ಇಲಾಖೆ ಈ ಗೊಂದಲವನ್ನ ಪರಿಹರಿಸಬೇಕೆಂದು ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ. NEP ರದ್ದು ಮಾಡಿರುವ ರಾಜ್ಯ ಸರ್ಕಾರ, ಮಕ್ಕಳ ದಾಖಲಾತಿಗೆ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ಮಾತ್ರ ಇನ್ನೂ ಸ್ಪಷ್ಟನೆ ನೀಡಿಲ್ಲ. ಆದಷ್ಟು ಬೇಗ ಶಿಕ್ಷಣ ಇಲಾಖೆ ಈ ಗೊಂದಲಕ್ಕೆ ತೆರೆ ಎಳೆಯಲಿ ಎಂದು ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಈ ಬಾರಿ ವಿಶ್ವವಿಖ್ಯಾತ ದಸರಾಗೆ ಏರ್‌ ಶೋ ಮೆರಗು: ಬಾನಂಗಳದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಚಿತ್ತಾರ

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more