ಗ್ಯಾರಂಟಿ ಗದ್ದಲದ ನಡುವೆ ಹಳ್ಳ ಹಿಡಿತಾ ಅನುಗ್ರಹ ಯೋಜನೆ ? ತಮ್ಮ ಸಮುದಾಯವನ್ನೇ ಮರೆತ್ರಾ ಸಿಎಂ?

ಗ್ಯಾರಂಟಿ ಗದ್ದಲದ ನಡುವೆ ಹಳ್ಳ ಹಿಡಿತಾ ಅನುಗ್ರಹ ಯೋಜನೆ ? ತಮ್ಮ ಸಮುದಾಯವನ್ನೇ ಮರೆತ್ರಾ ಸಿಎಂ?

Published : Dec 07, 2023, 10:38 AM IST

ಗ್ಯಾರಂಟಿ ಭರಾಟೆಯಲ್ಲಿ ಸರ್ಕಾರ ಬೇರೆ ಯೋಜನೆಗಳತ್ತ ಗಮನ ಹರಿಸುತ್ತಿಲ್ಲ ಅನ್ನೋ ಆರೋಪ ಕೇಳಿಬರ್ತಿದೆ. ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ತಂದ ಯೋಜನೆಗಳೇ ಈಗ ಹಳ್ಳ ಹಿಡಿಯುತ್ತಿದೆ. 

ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸೋದ್ರಲ್ಲಿ ಬ್ಯುಸಿಯಾಗಿರೋ (Congress) ಮಹತ್ವಾಕಾಂಕ್ಷಿ ಯೋಜನೆಗಳೇ ಮರೆತು ಹೋಗಿವೆ. ಸಿಎಂ ಸಿದ್ದರಾಮಯ್ಯನವರೇ ಜಾರಿಗೆ  ತಂದ ಯೋಜನೆಗಳಿಗೆ ಈಗ ಹಣ ಇಲ್ಲದಂತಾಗಿದ್ದು, ಸರ್ಕಾರದ ಮಹತ್ವದ ಯೋಜನೆಗಳು ಕೂಡ ಹಳ್ಳ ಹಿಡಿಯುತ್ತಿವೆ. ಕುರಿಗಾಹಿಗಳ ಕಷ್ಟ ದೇವರೇ ಬಲ್ಲ. ಮಳೆ, ಚಳಿ ಎನ್ನದೆ ಕುರಿ ಕಾಯುತ್ತಾ ಬದುಕು ಕಟ್ಟಿಕೊಳ್ಳುತ್ತಾರೆ. ಸಾಲ ಸೂಲ ಮಾಡಿ ಕುರಿ ಸಾಕಿದ ಮಾಲೀಕ, ಅವಘಡದಲ್ಲಿ ತನ್ನ ಕುರಿ ಕಳೆದುಕೊಂಡರೆ, ಆತನ ಕಣ್ಣೀರೊರೆಸಲು ಅನುಗ್ರಹ ಯೋಜನೆ(Anugraha Scheme) ಜಾರಿಗೆ ತರಲಾಗಿತ್ತು. ಅವಘಡದಲ್ಲಿ ಕುರಿಗಳು ಮೃತಪಟ್ಟರೆ ಪರಿಹಾರ ಒದಗಿಸುವ ಈ ಅನುಗ್ರಹ ಯೋಜನೆಗೆ ಈಗ ಗ್ರಹಣ ಹಿಡಿದಿದೆ. ಸಿದ್ದರಾಮಯ್ಯ(Siddaramaiah) ಮೊದಲ ಬಾರಿ ಸಿಎಂ ಆದಾಗ ಜಾರಿ ಮಾಡಿದ್ದ ಮಹತ್ವಾಕಾಂಕ್ಷಿ ಯೋಜನೆಯೇ ಈ ಅನುಗ್ರಹ ಯೋಜನೆ. ಅಂದು ಜಾರಿಯಾಗಿದ್ದೇ ಬಂತು.ನಂತರ ಹಳ್ಳ ಹಿಡಿಯಿತು. ಈಗ ಮತ್ತೆ ಅಧಿಕಾರದ ಗದ್ದುಗೆ ಏರಿರೋ ಸಿದ್ದರಾಮಯ್ಯನವರು ತಮ್ಮದೇ ಸಮುದಾಯದವರಿಗೆ ಆಸರೆಯಾಗಿದ್ದ ಅನುಗ್ರಹ ಯೋಜನೆ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ಬಜೆಟ್ನಲ್ಲಿ ಅನುಗ್ರಹ ಯೋಜನೆ ಮರುಜಾರಿ ಮಾಡುವುದಾಗಿ ಘೋಷಣೆ ಮಾಡಿದ್ರೂ ಅನುಷ್ಠಾನ ಮಾಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ.ಕುರಿ, ಮೇಕೆಗಳು ಆಕಸ್ಮಿಕವಾಗಿ ಮೃತಪಟ್ರೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಇದು ಹೊಸ ಕುರಿ ಖರೀದಿಗೆ, ಜೀವನೋಪಾಯಕ್ಕೆ ನೆರವಾಗುತ್ತಿತ್ತು. ಆದ್ರೀಗ ಕುರಿ, ಮೇಕೆ ಕಳೆದುಕೊಂಡ್ರೆ ಕಣ್ಣೀರೇ ಗತಿ ಅಂತ ಕುರಿಗಾಹಿಗಳು ಅಳಲು ತೋಡಿಕೊಳ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಮಳೆ ..ಬೆಳೆ ಇಲ್ಲ..ಅನ್ನದಾತ ಕಂಗಾಲು: ರೈತರ ಕೈ ಸೇರದ ಬರ ಪರಿಹಾರ..!

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more