ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

Published : Sep 14, 2023, 02:33 PM IST

ದಸರಾ ಸಂಭ್ರಮದಲ್ಲೇ ಈ ಬಾರಿ ನಡೆಯುತ್ತಾ ಮಹಿಷ ದಸರಾ..?
ಮಹಿಷಮರ್ಧಿನಿಯ ಸನ್ನಿಧಿಯಲ್ಲಿ ಮಹಿಷ ದಸರಾ ಸಂಘರ್ಷ..!
ಸರ್ಕಾರ ಬದಲಾಗುತ್ತಿದ್ದಂತೆ ಭುಗಿಲೆದ್ದ ಮಹಿಷ ದಸರಾ ಸಂಘರ್ಷ..!

ದಸರಾ ಸಂಭ್ರಮ ಹತ್ತಿರ ಬರ್ತಾ ಇದ್ದಂತೆ ಭುಗಿಲೆದ್ದು ನಿಂತ ಮಹಿಷ ದಸರಾ (Mahisha Dasara) ಸಂಘರ್ಷ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮತ್ತೆ ಶುರುವಾಯ್ತು ಮಹಿಷ ಯುದ್ಧ. ಚಾಮುಂಡಿ ಮಿಥ್ಯ, ಮಹಿಷನೇ ಸತ್ಯ ಅಂದ್ರು ಪ್ರಗತಿಪರರು. ಮಹಿಷ ದಸರಾ ಪರ ನಿಂತಿರುವವರಿಗೆ ಬಿಜೆಪಿ ಸಂಸದ ಓಪನ್ ಚಾಲೆಂಜ್ ಹಾಕಿದ್ದಾರೆ. ಮೈಸೂರು ದಸರಾ(Mysore Dasara) ಅಂದ್ರೆ ಇಡೀ ಜಗತ್ತಿಗೇ ಫೇಮಸ್. ದಸರಾ ಬಂತು ಅಂದ್ರೆ ಇಡೀ ಮೈಸೂರಲ್ಲಿ ಹಬ್ಬ. ಇದನ್ನು ನಾಡಹಬ್ಬ ಅಂತಾನೂ ಕರೆಯಲಾಗತ್ತೆ. ಮೈಸೂರು ದಸರಾ ಈ ನಾಡಿನ ಅಸ್ಮಿತೆ. ಮಹಿಷಾಸುರನನ್ನು ತಾಯಿ ಚಾಮುಂಡಿ ಸಂಹಾರ ಮಾಡಿದ ದಿನವನ್ನು ವಿಜಯದಶಮಿಯನ್ನಾಗಿ ಆಚರಿಸೋದು, ಆ ದಿನ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿಟ್ಟು ವಿಜೃಂಭಣೆಯಿಂದ ಮೆರವಣಿಗೆ ಮಾಡೋದು. ಇದೇ ಮೈಸೂರು ದಸರಾದ ಸೆಂಟರ್ ಆಫ್ ಅಟ್ರಾಕ್ಷನ್. ಇಡೀ ನಾಡೇ ಎದುರು ನೋಡ್ತಾ ಇರೋ ಮೈಸೂರು(Mysore) ದಸರಾ ಹತ್ತಿರ ಬರ್ತಾ ಇದೆ. ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾಡಿಗೆ ನಾಡೇ ಸಜ್ಜಾಗ್ತಿರೋ ಹೊತ್ತಲ್ಲೇ, ಮಹಿಷ ದಸರ ಸಂಘರ್ಷ ಸದ್ದು ಮಾಡ್ತಾ ಇದೆ. ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟದಲ್ಲಿರೋ(Chamundi hill) ಮಹಿಷಾಸುರನ ಪ್ರತಿಮೆಯ ಬಳಿ ಮಹಿಷ ದಸರಾ ಆಚರಿಸಲು ಪ್ರಗತಿಪರರ ಸಂಘಟನೆಗಳು ಸಿದ್ಧತೆ ನಡೆಸ್ತಾ ಇವೆ. ಇದಕ್ಕಾಗಿ ಮಹಿಷ ದಸರ ಆಚರಣೆ ಸಮಿತಿಯನ್ನೂ ರಚಿಸಲಾಗಿದ್ದು, ಮಹಿಷ ದಸರಾ ಆಚರಿಸಿಯೇ ಸಿದ್ಧ ಅಂತ ಸವಾಲ್ ಹಾಕಿ ನಿಂತಿದ್ದಾರೆ. ಆದ್ರೆ ಇದಕ್ಕೆ ಪ್ರತಿ ಸವಾಲ್ ಹಾಕಿರೋ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಅದ್ಹೇಗೆ ಮಹಿಷ ದಸರಾ ಆಚರಿಸ್ತಾರೋ ನೋಡೇ ಬಿಡ್ತೀನಿ ಅಂತ ಅಬ್ಬರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿ.ಕೆ.ಹರಿಪ್ರಸಾದ್ ಬೇಸರಗೊಂಡಿರುವುದೇಕೆ ? ಕಾಂಗ್ರೆಸ್‌ ನಾಯಕನ ಮುಂದಿನ ನಡೆ ಏನು..?

27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
Read more