ಒಂದೇ ವಾರದಲ್ಲಿ ಎರಡು ಬಂದ್.. ಇದು ಯಾರ ಪ್ರಮಾದ..? ಸ್ತಬ್ಧವಾಗುತ್ತಾ ಕರುನಾಡು..?

ಒಂದೇ ವಾರದಲ್ಲಿ ಎರಡು ಬಂದ್.. ಇದು ಯಾರ ಪ್ರಮಾದ..? ಸ್ತಬ್ಧವಾಗುತ್ತಾ ಕರುನಾಡು..?

Published : Sep 27, 2023, 02:27 PM IST

ಕಾವೇರಿಗಾಗಿ ಕೆರಳಿದೆ ಕರುನಾಡು.. ಧಗಧಗಿಸುತ್ತಿದೆ ಆಕ್ರೋಶದ ಕಿಚ್ಚು..!
ಕಾವೇರಿ ನಮ್ಮದು..ಹೋರಾಟವೂ ನಮ್ಮದು..ಆದರೂ ಯಾಕೆ ಈ ಪ್ರತಿಷ್ಠೆ..?
ಒಗ್ಗಟ್ಟು ಇರಬೇಕಾದ ಜಾಗದಲ್ಲಿ ಇದೆಂಥಾ ಇಕ್ಕಟ್ಟು..ಇದೆಂಥಾ ಬಿಕ್ಕಟ್ಟು..?

ಬೆಂಗಳೂರು ಬಂದ್ ಆಯ್ತು. ಶುಕ್ರವಾರ ಕರ್ನಾಟಕ ಬಂದ್(karnataka bandh). ಇಲ್ಲಿ ಕಾವೇರಿ ನೀರಿಗಾಗಿ ಹಾಹಾಕಾರ. ಅಲ್ಲಿ ಹೋರಾಟಗಾರರ ಮಧ್ಯೆ ಅಪಸ್ವರ. ದೆಹಲಿಯಲ್ಲಿ ರಾಜ್ಯಕ್ಕೆ ಮತ್ತೆ ಕಾವೇರಿ ಬರೆ. ಕಾವೇರಿ ನೀರಿಗಾಗಿ ಒಟ್ಟಾಗಿ ಧ್ವನಿ ಎತ್ತಬೇಕಾದವರ ಮಧ್ಯೆ ಬಿಕ್ಕಟ್ಟು ಏರ್ಪಟ್ಟಂತೆ ಕಾಣುತ್ತಿದೆ. ಇದು ಕಾವೇರಿ(Cauvery) ನೀರಿರಾಗಿ, ತಮಿಳುನಾಡಿಗೆ ಹರಿದು ಹೋಗುತ್ತಿರುವ ಕಾವೇರಿಯನ್ನು ಉಳಿಸಿಕೊಳ್ಳೋದಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಮೊಳಗಿದ ಕಾವೇರಿ ಕಹಳೆ. “ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು” ಈ ಸಂಘಟನೆಯ ನೇತೃತ್ವದಲ್ಲಿ ಬೆಳಗ್ಗೆ 6ರಿಂದ ಸಂಜೆ 6ವರೆಗೆ ಬೆಂಗಳೂರು ಬಂದ್ ನಡೀತು. ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾರಿಗೆ, ಶಿಕ್ಷಕರ ಸಂಘಟನೆಗಳು ಸೇರಿದಂತೆ 150ಕ್ಕೂ ಹೆಚ್ಚಿನ ಸಂಘಟನೆಗಳು ರಾಜಧಾನಿ ಬಂದ್'ಗೆ ಬೆಂಬಲ ಕೊಟ್ಟಿದ್ವು. ಆದ್ರೆ ಕನ್ನಡದ ಪರ, ಕರ್ನಾಟಕದ ಪರ, ನಾಡು ನುಡಿ, ನೆಲ ಜಲದ ವಿಚಾರದಲ್ಲಿ ಧ್ವನಿ ಎತ್ತುವ ಕನ್ನಡ ಹೋರಾಟಗಾರರು ಬೆಂಗಳೂರು ಬಂದ್"ನಿಂದ ದೂರ ಉಳಿದಿದ್ರು. ಆದರೆ ಕನ್ನಡಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ.. ಹೀಗೆ ರಾಜ್ಯದ ಪ್ರಮುಖ ಸಂಘಟನೆಗಳು ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದ್ವೇ ಹೊರತು, ಬಂದ್‌ಗೆ ಬೆಂಬಲ ಕೊಡ್ಲಿಲ್ಲ. ಅದ್ರಲ್ಲೂ ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ. ಇದು ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳ ಮಧ್ಯೆ ಇರೋ ಪ್ರತಿಷ್ಠೆಯ ಪರಿಣಾಮ. ಮಂಗಳವಾರ ನಡೆದ ಬೆಂಗಳೂರು ಬಂದ್'ಗೆ ಎಲ್ಲಾ ಸಂಘಟನೆಗಳು ಬೆಂಬಲ ಕೊಟ್ಟಿರ್ಲಿಲ್ಲ. ಸಂಘಟನೆಗಳ ನಡುವಿನ ತಿಕ್ಕಾಟದ ಕಾರಣ ಒಗ್ಗಟ್ಟಿರಬೇಕಾದ ಜಾಗದಲ್ಲಿ ಬಿಕ್ಕಟ್ಟು ಎದುರಾಯ್ತು. 

ಇದನ್ನೂ ವೀಕ್ಷಿಸಿ:  ಮಧ್ಯಪ್ರದೇಶದಲ್ಲಿ ಚುನಾವಣೆ ಬಳಿಕ ಸಿಎಂ ಆಯ್ಕೆ.. ಶಾ ಕಟ್ಟಾಜ್ಞೆ..!

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!