ನನಗೂ ಫ್ರೀ..ನಿನಗೂ ಫ್ರೀ..ಈಡೇರಿತು ಸಿದ್ದು ಶಪಥ: ಇನ್ಮುಂದೆ  ಎಲ್ಲರಿಗೂ ಕರೆಂಟ್ ಉಚಿತ..!

ನನಗೂ ಫ್ರೀ..ನಿನಗೂ ಫ್ರೀ..ಈಡೇರಿತು ಸಿದ್ದು ಶಪಥ: ಇನ್ಮುಂದೆ ಎಲ್ಲರಿಗೂ ಕರೆಂಟ್ ಉಚಿತ..!

Published : Aug 02, 2023, 01:13 PM ISTUpdated : Aug 02, 2023, 01:21 PM IST

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್..!
ಮನೆ ಮನೆಗೆ ಬರಲಿದೆ "ಝೀರೋ" ಕರೆಂಟ್ ಬಿಲ್..!
ಆಗಸ್ಟ್ 5ಕ್ಕೆ ಖರ್ಗೆ ನೆಲದಲ್ಲಿ ಗೃಹಜ್ಯೋತಿಗೆ ಚಾಲನೆ..!

 ಶಪಥ ಮಾಡಿದ್ದ ಸಿಎಂ ಸಿದ್ದರಾಮಯ್ಯ(CM Siddaramaiah), ತಮ್ಮ 3ನೇ ಗ್ಯಾರಂಟಿ ಶಪಥವನ್ನು ಈಡೇರಿಸಿದ್ದಾರೆ. ಯಾರೆಲ್ಲಾ ಗೃಹಜ್ಯೋತಿ ಯೋಜನೆಗೆ(Grihajyoti Yojana) ಅಪ್ಲೈ ಮಾಡಿದ್ದಾರೋ, ಆ ಅಪ್ಲಿಕೇಷನ್‌ಗಳಲ್ಲಿ ಯಾವೆಲ್ಲಾ ಅರ್ಜಿಗಳು ಸ್ವೀಕೃತವಾಗಿವೆಯೋ. ಅವ್ರಿಗೆಲ್ಲಾ ಈ ತಿಂಗಳಿಂದ ಬಂಪರ್ ಗಿಫ್ಟ್. ಯಾಕಂದ್ರೆ ಇನ್ನು ಮುಂದೆ ಕರೆಂಟ್ ಬಿಲ್(Current bill) ಕಟ್ಟಬೇಕಿಲ್ಲ. ಆಗಸ್ಟ್ ತಿಂಗಳಿಂದ ನಿಮ್ಮ ಮನೆಗೆ ಝೀರೋ ಬಿಲ್ ಬರಲಿದೆ. ಇದು ಕಾಂಗ್ರೆಸ್ ಘೋಷಿಸಿದ್ದ ಮೊದಲ ಗ್ಯಾರಂಟಿ, ಅದೇ ಗೃಹಜ್ಯೋತಿ ಗ್ಯಾರಂಟಿ. ತಿಂಗಳಿಗೆ 200 ಯೂನಿಟ್ ಕರೆಂಟ್ ಫ್ರೀ... ನನಗೂ ಫ್ರೀ, ನಿಮಗೂ ಫ್ರೀ.. ಮಹಾದೇವಪ್ಪನಿಗೂ ಫ್ರೀ, ಏಯ್.. ಕಾಕಾ ಪಾಟೀಲ್.. ನಿನಗೂ ಫ್ರೀ.. ಸಿದ್ದರಾಮಯ್ಯನವರು ಅವತ್ತು ಆಡಿದ್ದ ಇದೇ ಮಾತನ್ನ ಈಗ ಉಳಿಸಿಕೊಳ್ಳೋ ಸಮಯ ಬಂದೇ ಬಿಟ್ಟಿದೆ. ಹಾಗ್ ನೋಡಿದ್ರೆ.. ಪಂಚಗ್ಯಾರಂಟಿಗಳ ಪೈಕಿ ಮೊಟ್ಟ ಮೊದಲ ಗ್ಯಾರಂಟಿ "ಗೃಹಜ್ಯೋತಿ" ಯೋಜನೆ ಜುಲೈ ಒಂದರಿಂದಲೇ ಜಾರಿಯಾಗಿತ್ತು. ಅದ್ರ ಫಲ ಈ ತಿಂಗಳಿಂದ ಸಿಗ್ತಾ ಇದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಮೊದಲ ಗ್ಯಾರಂಟಿಯನ್ನು ಸರ್ಕಾರ ಜಾರಿಗೆ ತಂದಿದೆ. ಜುಲೈ ಉರುಳಿ ಆಗಸ್ಟ್ ತಿಂಗಳು ಶುರುವಾಗ್ತಿದ್ದಂತೆ ಮನೆ ಮನೆಗೆ ಝೀರೋ ಕರೆಂಟ್ ಬಿಲ್ ಬರ್ತಾ ಇದೆ. ರಾಜ್ಯದ ಹಲವೆಡೆ ಮಂಗಳವಾರ ಬೆಳಗ್ಗೆಯಿಂದಲೇ ಶೂನ್ಯ ಬಿಲ್ ವಿತರಣೆ ಆರಂಭವಾಗಿದ್ದು, ಇಂಧನ ಇಲಾಖೆಯ ಸಿಬ್ಬಂದಿ ಮನೆ ಮನೆ ತೆರಳಿ ಬಿಲ್ ನೀಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಬೆಂಗಳೂರಿನಲ್ಲೊಂದು ಹನಿಟ್ರ್ಯಾಪ್ ಗ್ಯಾಂಗ್: ಹಿಂದೂಗಳಿಗೆ ಮುಸ್ಲಿಂ ಹುಡುಗಿಯ ಹೆಸರು..!

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!