ಪ್ರಕರಣ ಹಿಂಪಡೆಯೋಕೆ ತಯಾರಾಗಿದೆಯಾ ತಂತ್ರ ? ಏನಿದು ಹಳೇ ಹುಬ್ಬಳ್ಳಿ ಗಲಭೆ ಕೇಸ್..?

ಪ್ರಕರಣ ಹಿಂಪಡೆಯೋಕೆ ತಯಾರಾಗಿದೆಯಾ ತಂತ್ರ ? ಏನಿದು ಹಳೇ ಹುಬ್ಬಳ್ಳಿ ಗಲಭೆ ಕೇಸ್..?

Published : Oct 04, 2023, 02:37 PM IST

ಗಲಭೆಗೆ ಕಾರಣವಾಗಿತ್ತು ಒಂದು ವಾಟ್ಸಾಪ್ ಸ್ಟೇಟಸ್!
ಕಾಂಗ್ರೆಸ್ ನಾಯಕರ ಮಾತಲ್ಲಿ ಅಡಗಿದ ರಹಸ್ಯವೇನು..?
ಒಂದೊಂದು ಯೋಜನೆಗೂ ಲೋಕಸಭೆಯೇ ಟಾರ್ಗೆಟ್?!

ಇವತ್ತಿನ ಈ ಸುದ್ದಿ ನಿಜಕ್ಕೂ ಆಘಾತಕಾರಿ.. ಆತಂಕಕಾರಿ.. ಈ ಬಾರಿ ಸರ್ಕಾರ ಕೈಗೆತ್ತಿಕೊಳ್ಳೋಕೆ ನೋಡ್ತಾ ಇರೋ ಅದೊಂದು ತೀರ್ಮಾನ, ಡಿಸಿಎಂ ಡಿಕೆ ಶಿವಕುಮಾರ್(D.K.Shivakumar) ಅವರ ಒಂದು ನಡೆ, ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕದ ಕಾರ್ಮೋಡ ಮೂಡಿಸಿದೆ. ಅವತ್ತಿನ ಆ ದಿನವನ್ನ ಬರೀ ಡಿಜೆ ಹಳ್ಳಿ, ಕೆಜಿ ಹಳ್ಳಿ ಜನ ಮಾತ್ರವೇ ಅಲ್ಲ. ಇಡೀ ಬೆಂಗಳೂರು(Bengaluru), ಬೆಂಗಳೂರೇನು, ಇಡೀ ಕರ್ನಾಟಕ, ಕರ್ನಾಟಕ ಅಷ್ಟೇ ಯಾಕೆ, ಇಡೀ ದೇಶವೇ ಮರೆಯೋ ಹಾಗಿಲ್ಲ. ಜಗತ್ತೆಲ್ಲಾ ಕೋವಿಡ್ ಅನ್ನೋ ಹೆಮ್ಮಾರಿಯಿಂದ ಹೇಗಪ್ಪಾ ಬಚಾವ್ ಆಗೋದು ಅಂತ ಯೋಚನೆಲಿ ಮುಳುಗಿದ್ರೆ, ಬೆಂಗಳೂರಿನ  ಪುಲಕೇಶಿನಗರ ಕ್ಷೇತ್ರ ಮಾತ್ರ, ಬೆಂಕಿಯಲ್ಲಿ ಮುಳುಗಿಹೋಗಿತ್ತು. ಒಂದು ಫೇಸ್ಬುಕ್ ಪೋಸ್ಟಿನ ವಿರುದ್ಧ ಶುರುವಾಗಿದ್ದ ಪ್ರತಿಭಟನೆ, ನೋಡನೋಡುತ್ತಲೇ ಹಿಂಸಾತ್ಮಕವಾಯ್ತು. ಅದರ ಪ್ರತಿಫಲವಾಗಿ, ಪುಲಕೇಶಿನಗರದ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಹಚ್ಚಿದ್ರು.ಬರೀ ಶಾಸಕರ ಮನೆಯಷ್ಟೇ ಅಲ್ಲ, ಅಲ್ಲಿದ್ದ ಪೋಲಿಸ್ ಠಾಣೆಗೂ ಬೆಂಕಿ ಇಟ್ಟಿದ್ರು. ಅವತ್ತು ಈ ಘಟನೆ ರಾಜ್ಯ ರಾಜಕೀಯದಲ್ಲೂ ದೊಡ್ಡ ಭೂಕಂಪ ಸೃಷ್ಟಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಿಡುವಂತೆ ತನ್ವೀರ್‌ ಸೇಠ್‌ ಪತ್ರ ಬರೆದಿದ್ದರು. ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್‌ ಹುಬ್ಬಳ್ಳಿ ಗಲಭೆ ಪ್ರಕರಣದ(Hubli riots case) ಅಮಾಯಕರನ್ನು ಬಿಡುವಂತೆ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ. 

ಇದನ್ನೂ ವೀಕ್ಷಿಸಿ:  ಕಲ್ಲು ಹೊಡೆದ್ರು..ಆವಾಜ್ ಹಾಕಿದ್ರು..ಪೊಲೀಸರಿಗೇ ಹೆದರಿಸಿದ್ರು: ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ನಿಜಕ್ಕೂ ಆಗಿದ್ದೇನು ?

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more