ಜೋಗಿ ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಸಿದ ಯಶ್

Nov 10, 2019, 9:12 PM IST

ಬೆಂಗಳೂರು[ನ. 10] ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕನ್ನಡ ಕವನ ವಾಚನ ಸವಾಲನ್ನು ನಾಯಕ ನಟ ಯಶ್ ಸ್ವೀಕರಿಸಿದ್ದಾರೆ.

ಕುವೆಂಪು ಕವನ ವಾಚಿಸಿದ ಪೇಜಾವರ ಶ್ರೀ

ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರು ನೀಡಿದ್ದ ಸವಾಲನ್ನು ಸ್ವೀಕರಿಸಿರುವ ಯಶ್ ಕುವೆಂಪು ಅವರ ‘ಓ ನನ್ನ ಚೇತನ’ ಕವನ ವಾಚನ ಮಾಡಿದ್ದಾರೆ. ಜತೆಗೆ ನಿರ್ದೇಶಕ ಟಿ.ಎಸ್, ನಾಗಾಭರಣ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್, ಗೌಸ್ ಫೀರ್ , ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಆರ್ಮುಗಂ ರವಿಶಂಕರ್ ಅವರಿಗೆ ಯಶ್ ಕವನ ಓದುವ ಸವಾಲು ಹಾಕಿದ್ದಾರೆ.