ಪಾರ್ವತಮ್ಮ ರಾಜಕುಮಾರ್ ಬಗ್ಗೆ ಯಾಕೆ ಕೋಪ? : ದರ್ಶನ್ ಆ ದಿನಗಳನ್ನು ಬಿಚ್ಚಿಟ್ಟ ಚಿನ್ನೇಗೌಡ!

Jun 20, 2024, 4:54 PM IST

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿಗಳಾದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ 17 ಮಂದಿಯನ್ನು ಬಂಧಿಸಿ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ. ದರ್ಶನ್​ರ ವ್ಯಕ್ತಿತ್ವದ ಬಗ್ಗೆ ಈ ಹಿಂದೆಯೂ ಟೀಕೆಗಳು ವ್ಯಕ್ತವಾಗಿದ್ದವು. ಸದಾ ಒಂದಿಲ್ಲೊಂದು ವಿವಾದದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಲೇ ಇತ್ತು. ಅದೆಲ್ಲ ಏನೇ ಇದ್ದರು, ದರ್ಶನ್ ಕಷ್ಟಪಟ್ಟು ಸಿನಿಮಾ ನಾಯಕರಾದವರು, ಅವರು ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟ ಇದನ್ನೆಲ್ಲ ನಿರ್ಲಕ್ಷಿಸುವಂತಿಲ್ಲ. ದರ್ಶನ್ ಆ ದಿನಗಳನ್ನು ಇದೀಗ ಎಸ್ ಎ ಚಿನ್ನೇಗೌಡ ಬಿಚ್ಚಿಟ್ಟಿದ್ದಾರೆ. ಆಕ್ಟಿಂಗ್ ಇನ್​​ಸ್ಟಿಟ್ಯೂಷನ್​ಗೆ ಕಳಿಸಿದ್ದೆ ಇವರು, ಪಾರ್ವತಮ್ಮ ರಾಜಕುಮಾರ್ ಬಗ್ಗೆ ಯಾಕೆ ಕೋಪ?  ಚೆನೈನಲ್ಲಿ ಚಿ. ಉದಯಶಂಕರ್ ಮನೆಯಲ್ಲಿದ್ದು ಕಲಿಕೆ. ಈ ಎಲ್ಲ ಪ್ರಶ್ನೆಗಳಿಗೆ ಈ ವಿಡೀಯೋವನ್ನು ವೀಕ್ಷಿಸಿ.