Martin movie: 'ಮಾರ್ಟಿನ್' ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್! ಇದಕ್ಕೆ ಎಪಿ ಅರ್ಜುನ್, ಉದಯ್ ಕೆ ಮಹ್ತಾ ಸ್ಪಷ್ಟನೆ ಹೀಗಿದೆ?

Martin movie: 'ಮಾರ್ಟಿನ್' ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್! ಇದಕ್ಕೆ ಎಪಿ ಅರ್ಜುನ್, ಉದಯ್ ಕೆ ಮಹ್ತಾ ಸ್ಪಷ್ಟನೆ ಹೀಗಿದೆ?

Published : Apr 21, 2024, 10:29 AM ISTUpdated : Apr 21, 2024, 10:30 AM IST

'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್!
ಗಲಾಟೆಗೆ ಎ.ಪಿ. ಅರ್ಜುನ್ - ಉದಯ್ ಕೆ ಮಹ್ತಾ ಸ್ಪಷ್ಟನೆ..!
ಧ್ರುವ  ಮಾರ್ಟಿನ್ ಬಜೆಟ್ ವಿಷಯಕ್ಕೂ ಆಗಿತ್ತಾ ಕಿತ್ತಾಟ?

ಧ್ರುವ ಸರ್ಜಾ(Druva sarja) ನಟನೆಯ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿತ್ತು. ಉದಯ್ ಕೆ. ಮೆಹ್ತಾ(Uday K Mehta) ನಿರ್ಮಾಣದ ಚಿತ್ರಕ್ಕೆ ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾ ಚುನಾವಣೆ, ಐಪಿಎಲ್ ಭರಾಟೆ ಬಳಿಕ ಪ್ರೇಕ್ಷಕರ ಮುಂದೆ ಬರಲಿದೆ. ಅಷ್ಟರಲ್ಲಾಗಲೇ ಈ ಸಿನಿಮಾ ನಿರ್ಮಾಪಕ ಉದಯ್ ಕೆ ಮೆಹ್ತಾ ಹಾಗೂ ನಿರ್ದೇಶಕ ಎ.ಪಿ ಅರ್ಜುನ್(AP Arjun) ಮಧ್ಯೆ ಎಲ್ಲವೂ ಸರಿ ಇಲ್ಲ. ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಸಿನಿಮಾ ರಿಲೀಸ್ ಆಗೋದೇ ಡೌಟ್ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಇದೀಗ ಈ ಕಿರಿಕ್ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ. ಇಬ್ಬರೂ ಒಟ್ಟಿಗೆ ಬಂದು ಗಲಾಟೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮಾರ್ಟಿನ್(Martin) ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಅರ್ಜುನ್ ಸರ್ಜಾ ಕಥೆ ಬರೆದ್ದಾರೆ. ಆದ್ರೆ ಡೈರೆಕ್ಷನ್ ಮಾಡಿರೋದು ಎ.ಪಿ ಅರ್ಜುನ್. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಆದ್ರೆ ಸಿನಿಮಾ ಬಿಡುಗಡೆಗೂ ಮುನ್ನ ನಿರ್ಮಾಪಕ ಉದಯ್‌ಕೆ ಮೆಹ್ತಾ ಹಾಗೂ ನಿರ್ದೇಶಕ ಎ. ಪಿ ಅರ್ಜುನ್ ಮಧ್ಯೆ ಸಂಭಾವನೆ ವಿಚಾರಕ್ಕೆ ಕಿರಿಕ್ ಆಗಿದೆ ಅನ್ನೋ ಗಾಸಿಪ್ ಹಬ್ಬಿತ್ತು. ಈ ವಿಚಾರ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ ಎಂದು ಹೇಳಲಾಗಿತ್ತು. ಮಾರ್ಟಿನ್ ದೊಡ್ಡ ಕ್ಯಾನ್ವಸ್ ಸಿನಿಮಾ. ಈ ಸಿನಿಮಾ ಶುರುವಾಗಿ ಆಗ್ಲೇ ಹತ್ತತ್ರ ಮೂರ ವರ್ಷ ಆಗಿದೆ. ಮೊದಲು ಬರೀ ಕನ್ನಡದಲ್ಲಿ ಶುರುವಾದ ಮಾರ್ಟಿನ್ ಕೊನೆಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬದಲಾಯ್ತು. ಹೀಗಾಗಿ ಇದರ ಬಜೆಟ್ ಗಾತ್ರ ಕೂಡ ದೊಡ್ಡದಾಗಿದೆ. ಈ ಬಜೆಟ್ ಲೈನ್ ಕ್ರಾಸ್ ಆಗಿದ್ದಕ್ಕೂ ನಿರ್ಮಾಪಕ ಉದಯ್ ಕೆ ಮೆಹ್ತಾ ಸಿಟ್ಟಾಗಿದ್ರು ಅಂತ ಸುದ್ದಿ ಇದೆ.  ಆದರೆ ಈಗ ಈ ಎಲ್ಲಾ ವಾದ ಪ್ರತಿವಾದ ಕಿರಿಕ್ ಗಾಸಿಪ್ಗೆ ಎಪಿ ಅರ್ಜುನ್ ಹಾಗ ಉದಯ್ ಕೆ ಮೆಹ್ತಾ ತೆರೆ ಎಳೆದಿದ್ದಾರೆ. ನಮ್ಮ ಮಧ್ಯೆ ಎಲ್ಲವೂ ಸರಿ ಇದೆ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ನಾರಿಶಕ್ತಿಯ ಆಶೀರ್ವಾದ ಇದ್ದರೆ ಸಾಕು ಗೆಲುವು ಶತಃಸಿದ್ಧ..ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಮೋದಿ ಗ್ಯಾರಂಟಿ ಕೌಂಟರ್..!

04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more