'ಚಂದ್ರಲೇಖ' ಸೆಟ್‌ನಲ್ಲಿ ಚಿರು ನೆನಪಿನ ಬಗ್ಗೆ ಶಾನ್ವಿ ಮಾತುಗಳಿವು

Jun 8, 2020, 5:44 PM IST

ಬೆಂಗಳೂರು (ಜೂ. 08): ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ. 

'ಮೊನ್ನೆ ತನಕ ಚನ್ನಾಗಿದ್ವಿ, ಈಗ ಹಿಂಗಾಯ್ತು; ಆಗಲ್ಲಪ್ಪಾ ಮೇಘನಾ ನೋಡೋಕೆ!'

ಚಂದ್ರಲೇಖ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಶಾನ್ವಿ ಶ್ರೀ ವಾಸ್ತವ್, ಚಿರು ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. 'ಸೆಟ್‌ನಲ್ಲಿದ್ದಾಗ ಅವರು ಜಾಲಿಯಾಗಿರುತ್ತಿದ್ದರು. ಕೆಲವೊಮ್ಮೆ ನನಗೆ ಸಹಾಯವನ್ನೂ ಮಾಡಿದ್ದುಂಟು. ಈಗಲೂ ಅವರು ಇಲ್ಲ ಎಂದರೆ ನಂಬಲಾಗುತ್ತಿಲ್ಲ' ಎಂದರು.