Nov 22, 2019, 4:19 PM IST
ಬೆಂಗಳೂರು, (ನ.22): ಉಪಚುನಾವಣೆಯಲ್ಲಿ ಅತೃಪ್ತರನ್ನು ಸೋಲಿಸಲೇಬೆಂದು ಪಣತೊಟ್ಟು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸಿದ್ದರಾಮಯ್ಯ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದ್ರೆ, ಇವರಿಗೆ ಸ್ಥಳೀಯ ನಾಯಕರು ಬಿಟ್ಟರೇ ಕಾಂಗ್ರೆಸ್ ಹಿರಿಯ ನಾಯಕರು ಸಾಥ್ ನೀಡುತ್ತಿಲ್ಲ. ಇದರಿಂದ ಸಿದ್ದ ಏಕಾಂಗಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದನ್ನು ಬಿಜೆಪಿ ಟೀಕಿಸುತ್ತಿದೆ.
ಕಾಂಗ್ರೆಸ್ ನಿಮ್ಮನ್ನು ಏಕಾಂಗಿಯಾಗಿ ಮಾಡಿ ಬಿಟ್ಟಿದೆ ಅಂತೆಲ್ಲಾ ವ್ಯಂಗ್ಯವಾಡುತ್ತಿದ್ದಾರೆ. ಇದಕ್ಕೆ ಡಿಸಿಎಂ ಅಶ್ವತ್ ನಾರಾಯಣ ಕೂಡ ಧ್ವನಿಗೂಡಿಸಿದ್ದಾರೆ. ಹಾಗಾದ್ರೆ ಅಶ್ವತ್ ನಾರಾಯಣ ಏನು ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ....