'ನಂಬಿಕೆ ದ್ರೋಹಕ್ಕೆ ಇನ್ನೊಂದು ಹೆಸರು ಜೆಡಿಎಸ್'

Nov 30, 2019, 5:45 PM IST

ಬೆಂಗಳೂರು (ನ.30): ಬಹಿರಂಗ ಚುನಾವಣಾ ಪ್ರಚಾರಕ್ಕೆ ಇನ್ನು ಮೂರು ದಿನಗಳು ಬಾಕಿಯಿವೆ. ಪಕ್ಷದ ಮುಖಂಡರು ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್ ಪರ ಸಿಎಂ ಬಿ.ಎಸ್. ಯಡಿಯೂರಪ್ಪ ಶನಿವಾರ ಪ್ರಚಾರ ನಡೆಸಿದರು. 

ತಮ್ಮ ಭಾಷಣದಲ್ಲಿ ಜೆಡಿಎಸ್ ಪಕ್ಷದ ವಿರುದ್ಧ ಹರಿಹಾಯ್ದ ಬಿಎಸ್‌ವೈ, ನಂಬಿಕೆದ್ರೋಹಕ್ಕೆ ಇನ್ನೊಂದು ಹೆಸರೇ ಜೆಡಿಎಸ್, ಎಂದು ಕಿಡಿಕಾರಿದರು.

ಡಿ.05ಕ್ಕೆ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿ.09ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.