ಮತ್ತೆ ಮೈ ಕೊಡವಿ ನಿಂತ ಸಿದ್ದರಾಮಯ್ಯ: ಕೇಸರಿ ಪಾಳಯದ ವಿರುದ್ಧ ಪ್ಲಾನ್

Sep 28, 2021, 11:17 AM IST

ಬೆಂಗಳೂರು (ಸೆ.28):  ಮತ್ತೆ ಇದೀಗ ರಾಜಕೀಯ (Politics) ಲೆಕ್ಕಾಚಾರಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಕೇಸರಿ ಸೇವೆ ವಿರುದ್ಧ ಮತ್ತೆ ಮೈ ಕೊಡವಿ ನಿಂತಿದ್ದಾರೆ. ಬಿಜೆಪಿ (BJP) ವಿರುದ್ಧ ಸಿದ್ದರಾಮಯ್ಯ (Siddaramaiah) ಅಹಿಂದ ಟ್ರಂಪ್ ಕಾರ್ಡ್ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಡಿಕೆಶಿ ದಿಢೀರ್‌ ದೆಹಲಿಗೆ: ಸೋನಿಯಾ, ರಾಹುಲ್‌ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಯತ್ನ!

ರಾಜಕೀಯ ಲೆಕ್ಕಾಚಾರಕ್ಕೆ ಕೈ ಹಾಕಿದ ಸಿದ್ದರಾಮಯ್ಯ, ನಾಳೆಯಿಂದ ದಾವಣಗೆರೆಯಲ್ಲಿ ನಡೆಯುವ ಅಹಿಂದ ಒಕ್ಕೂಟದ ಹೊರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಕ್ಕೂಟದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಒಕ್ಕೂಟದಿಂದ ತಾಲೂಕುವಾರು ಮಹತ್ವದ ಸಭೆ ನಡೆಯಲಿದೆ.